ಭಾರತ ಸರ್ಕಾರವು 24ನೇ ಜುಲೈ 2025 ಕ್ಕೆ ರಾಷ್ಟ್ರೀಯ ಸಹಕಾರ ನೀತಿಯನ್ನು ಒಪ್ಪಿ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಿದೆ. ಸಹಕಾರ ನೀತಿ ರಚನೆಗಾಗಿ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಗಿತ್ತು. ಇದರ ಅಧ್ಯಕತೆಯನ್ನು ಸಹಕಾರಿಗಳೂ , ಮಾಜಿ ಕೇಂದ್ರ ಸಚಿವರು ಮತ್ತು ಲೋಕ ಸಭಾ ಸದಸ್ಯರಾದ ಶ್ರೀ ಸುರೇಶ್ ಪ್ರಭಾಕರ್ ಪ್ರಭು ರವರನ್ನು ನೇಮಿಸಲಾಗಿತ್ತು. ಸದರಿ ಸಮಿತಿ ಕರಡು ರಚಿಸಿ ಸಲ್ಲಿಸಿದ್ದನ್ನು ಭಾರತ ಸರ್ಕಾರ ಒಪ್ಪಿ ಬಿಡುಗಡೆ ಮಾಡಿದೆ. ಈ ನೀತಿಯ ದೃಷ್ಟಿಕೋನ ‘ ಸಹಕಾರ ದಿಂದ ಸಮೃದ್ಧಿ ಯೊಂದಿಗೆ ವಿಕಸಿತ ಭಾರತ 2047 ನ್ನು ಸಾಧಿಸುವುದಾಗಿದೆ. ಜನಸಮೂಹದ (ಸದಸ್ಯರ ) ಉತ್ಪನ್ನಗಳಿಗೆ ಬೆಂಬಲವಾಗಬಲ್ಲಂತೆ ಸಹಕಾರ ಔದ್ಯೋಗಿಕ ಸಂಸ್ಥೆಗಳನ್ನು ವೃತ್ತಿಪರ ವ್ಯವಸ್ಥಾಪನೆಯೊಂದಿಗೆ , ಪಾರದರ್ಶಕ, ತಾಂತ್ರಿಕವಾಗಿ ಸುಸಜ್ಜಿತ , ಸ್ಪಂದಕ ಆರ್ಥಿಕ ಘಟಕಗಳಾಗಿ ರೂಪಿಸಲು ಅವಶ್ಯ ಕಾಯ್ದೆಯಾತ್ಮಕ, ಆರ್ಥಿಕ ಮತ್ತು ಸಾಂಸ್ಥಿಕ ಚೌಕಟ್ಟನ್ನು ನಿರ್ಮಾಣ ಮಾಡುವುದು ಧ್ಯೇಯ ಕಾರ್ಯಚರಣೆಯಾಗಿ ತಿಳಿಸಲಾಗಿದೆ.
ಈ ನೀತಿಯ ಅನುಷ್ಠಾನಕ್ಕೆ ಆರು ಕಾರ್ಯಚರಣೆ ತಂತ್ರಗಾರಿಕೆ ಸ್ಥಂಭಗಳನ್ನು ಗುರುತಿಸಲಾಗಿದೆ. ಅವು
1. ಸಹಕಾರ ಚಳುವಳಿಗೆ ಭದ್ರ ಬುನಾದಿ ಯನ್ನು ನಿರ್ಮಿಸುವುದು.
2. ಸ್ವಂದನಾ ಶೀಲ, ಸ್ವ-ಸ್ಥಿರ ಪರಿಸರ ನಿರ್ಮಾಣದ ಮೂಲಕ ಸ್ಪಂದನ ಶೀಲತೆಗೆ ಪ್ರೇರೇಪಿಸುವುದು .
3. ವೃತ್ತಿಪರ ಮತ್ತು ಸುಸ್ಥಿರ ಆರ್ಥಿಕ ಘಟಕ ಗಳನ್ನಾಗಿ ರೂಪಿಸುವ ಮೂಲಕ ಸಹಕಾರ ಸಂಸ್ಥೆಗಳನ್ನು ಭವಿಷ್ಯಕ್ಕೆಸಿದ್ಧಗೊಳಿಸುವುದು.
4. ಒಳಗೊಳ್ಳುವಿಕೆಗೆ ಪ್ರೊತ್ಸಾಹಿಸುವ ಮೂಲಕ ಸಹಕಾರವನ್ನು ಜನರ ಚಳುವಳಿಯಾಗಿ ರೂಪಿಸಿ ಪ್ರತಿ ಕಟ್ಟಕಡೆಯ ಪ್ರಜೆಯನ್ನು ತಲುಪುವಂತೆ ಮಾಡುವುದು
5. ನವೀನ ಮತ್ತು ಉದಯೋನ್ಮುಖ ವಲಯಗಳನ್ನು ಪ್ರವೇಶಿಸುವುದು .6. ಸಹಕಾರದ ಬೆಳವಣಿಗೆಗಾಗಿ ಯುವಜನತೆಯನ್ನು ರೂಪಿಸುವುದು. ಈ ಉದ್ದೇಶಗಳ ಸಫಲತೆಗಾಗಿ ಸವಿವರವಾದ ತಂತ್ರಗಾರಿಕೆಯನ್ನು ವಿವರಿಸಲಾಗಿದೆ. ಇದರ ಸಂಕ್ಷಿಪ್ತ ಪರಿಚಯ ವನ್ನು ಮಾಡುವ ಪ್ರಯತ್ನ ಇದಾಗಿದೆ.
1. ಸಹಕಾರ ಚಳುವಳಿಗೆ ಭದ್ರ ಬುನಾದಿ ಯನ್ನು ನಿರ್ಮಿಸುವುದು: ಸಹಕಾರ ಸಂಸ್ಥೆಯಗಳು ಸುಲಭವಾಗಿ ವ್ಯಾಪಾರ ವಹಿವಾಟುಗಳು ನಡೆಸಲು , ಅತ್ಯುತ್ತಮ ಆಡಳಿತ/ವ್ಯವಸ್ಥಾಪನೆ ನೀಡಲು , ಪಾರದರ್ಶಕತೆ ಯಿಂದ ಕಾರ್ಯನಿರ್ವಹಿಸಲು , ಅನವು ಆಗುವಂತೆ ಕಾಯ್ದೆಯಾತ್ಮಕ ಮತ್ತು ನಿಯಂತ್ರಣ ವ್ಯವಸ್ಥೆ ಯನ್ನು ರೂಪಿಸುವುದು. ಇದಕ್ಕಾಗಿ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸಹಕಾರ ಕಾಯ್ದೆ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡಿ ಸ್ವಾಯತ್ತತೆ ನೀಡಿ ಸುಲಭವಾಗಿ ವ್ಯಾಪಾರ ವಹಿವಾಟು ನಡೆಸುವಂತೆ ಮಾಡುವುದು. ಅದಕ್ಕಾಗಿ ಕೆಲವು ಉಪಕ್ರಮಗಳನ್ನು ತೆಗೆದು ಕೊಳ್ಳುವುದು. ಅವು, ಪ್ರಜಾಸತ್ತಾತ್ಮಕ ಸದಸ್ಯ ನಿಯಂತ್ರಣ ಮತ್ತು ಸ್ವಾಯತ್ತತೆ ಇರುವುದನ್ನು ಖಾತರಿ ಪಡಿಸಿಕೊಳ್ಳುವುದು. ಸಹಕಾರ ಸಂಸ್ಥೆಗಳಿಗೆ ಕಾಲಬದ್ಧ , ಪಾರದರ್ಶಕ ವ್ಯವಸ್ಥೆ ಮೂಲಕ ಸೇವೆ ಒದಗಿಸುವುದು. ಸ್ವತಂತ್ರ ಮತ್ತು ನ್ಯಾಯಯುತ ನಿರ್ದೇಶಕರ ಮತ್ತು ಪಧಾಧಿಕಾರಿಗಳ ಚುನಾವಣೆ ನಡೆಸುವುದು. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡುವುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ದತ್ತಾಂಶ ಆಧಾರಿತವಾಗಿರತಕ್ಕದ್ದು. ಇತರೆ ರಾಜ್ಯಗಳ/ ರಾಷ್ಟ್ರಗಳ ಉತ್ತಮ ಅಂಶಗಳನ್ನು ಕಾಯ್ದೆ/ಕಾನೂನುಗಳಲ್ಲಿ ಅಳವಡಿಸುವುದು. ರಾಜ್ಯಗಳು ಸಹಕಾರದ ಅಭಿವೃದ್ಧಿಗೆ ಅವಶ್ಯ ನೀತಿ ರೂಪಿಸುವುದು/ತಿದ್ದುಪಡಿ ತರುವುದು. ನಿಬಂಧಕರ ಕಛೇರಿಗಳನ್ನು ‘ಡಿಜಿಟಲ್’ ಆಗಿ ಪರಿವರ್ತಿಸುವುದು. ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನಷ್ಟ/ನಿಷ್ಕ್ರಿಯ ಸರಕಾರ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ಸಾಂಸ್ಥಿಕ ಸ್ವರೂಪ ರೂಪಿಸಲು ಉತ್ತೇಜನ ನೀಡುವುದು. ಕರ (ಟಾಕ್ಸ್ ) ಹೇರಿಕೆಯಲ್ಲಿ ಕಾರ್ಪೋರೇಟ್ ವಲಯಕ್ಕೆ ಸಲ್ಲುವ ಎಲ್ಲ ಅನುಕೂಲತೆಗಳನ್ನು ಸಹಕಾರ ವಲಯಕ್ಕೆ ಒದಗಿಸುವುದು. ಸರ್ಕಾರದ ವಿವಿಧ
ಇಲಾಖೆಗಳು ಒದಗಿಸುವ ಅನುಕೂಲತೆಗಳನ್ನು ಒಗ್ಗೂಡಿಸಿ ಒದಗಿಸುವುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು(ಪಾಕ್ಸ್) ಬಲ ಪಡಿಸಿ ಅವುಗಳ ಮೂಲಕ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು. ಉತ್ತಮ ಪಾಕ್ಸ್ ಗಳಿಗೆ ಪ್ರೊತ್ಸಾಹ ನೀಡುವುದು. ರಾಜ್ಯವಾರು , ವಲಯವಾರು ‘ವೆಬ್ ಪೋರ್ಟಲ್’ ನಿರ್ಮಾಣ ಇದರಿಂದ ಸಹಕಾರ ಸಂಸ್ಥೆಗಳ ಕಾಯ೯ಚರಣಿ ಬಗ್ಗೆ ಅರಿವು , ಮಾಹಿತಿ ಒದಗುತ್ತದೆ. ಕಾರ್ಯಾಚರಣೆ ಮಾನದಂಡಗಳನ್ನು ನಿಗದಿ ಪಡಿಸಲು ಅನುವಾಗುತ್ತದೆ.
ಇತರೆ ಆರ್ಥಿಕ ಸಂಸ್ಥೆಗಳಂತೆ ನಿಲುಕಬಲ್ಲ , ಕೈಗೆಟುಕಬಲ್ಲ ಆರ್ಥಿಕ ಮತ್ತು ಸಮಾನ ವ್ಯಾಪಾರ / ವ್ಯವಹಾರಿಕ ಅವಕಾಶಗಳನ್ನು ಒದಗಿಸುವುದು.
ಇದಕ್ಕಾಗಿ ಮೂರು ಹಂತದ ವ್ಯವಸ್ಥೆ (ಪಾಕ್ಸ್, ಜಿ.ಕೇ.ಸ.ಬ್ಯಾಂಕ್, ರಾಜ್ಯ ಸಹ ರ ಬ್ಯಾಂಕ್ ) ಯ ಪ್ರಜಾಪ್ರಭುತ್ವದ ಗುಣವನ್ನು ಕಾಪಾಡಿ ಕೈಗೆಡುಕಬಲ್ಲ ಪತ್ತನ್ನು (ಸಾಲ) ಒದಗಿ ಸುವುದು. ಸಾಧ್ಯತೆಗಳಗುಣವಾಗಿ ಪ್ರತಿ ಪಂಚಾಯ್ತಿಗೂ ಒಂದು ಪಾಕ್ಸ್, ಪ್ರತಿ ಜಿಲ್ಲೆಗೂ ಜಿ.ಕೇ.ಸ.ಬ್ಯಾಂಕ್, ಪ್ರತಿ ಪಟ್ಟಣದಲ್ಲಿ ಪಟ್ಟಣ ಸಹಕಾರ ಬ್ಯಾಂಕ್, ಸ್ಥಾಪಿಸುವುದು. ಇದರಿಂದ ಆರ್ಥಿಕ ಸೇರ್ಪಡೆಯನ್ನು ಸಾಧಿಸುವುದು. ಸಹಕಾರ ಬ್ಯಾಂಕ್ ಗಳು ಶಾಲೆಗಳನ್ನು ತೆರೆದು ವಿವಿಧ ಉತ್ಪನ್ನ ಮತ್ತು ಸೇವೆಯನ್ನು ವಿಸ್ತರಿಸುವುದು. ರಾಷ್ಟ್ರಮಟ್ಟದಲ್ಲಿ ಉತ್ತುಂಗ ಸಹಕಾರ ಬ್ಯಾಂಕ್ ಸ್ಥಾಪಿಸುವುದು. ಉತ್ತಮ ಗ್ರಾಹಕ ಸೇವೆಗಾಗಿ ‘ಡಿಜಿಟಲ್ ಬ್ಯಾಂಕಿಂಗ್ ಮತ್ತು ವ್ಯವಸ್ಥೆ ‘ ಅಳವಡಿಸಿಕೊಂಡು ವಿಸ್ತರಿಸುವುದು. ಸಾಮಾನ್ಯ ಬ್ಯಾಂಕಿಂಗ್ ಮೃದು ತಂತ್ರಾಂಶ ಅಳವಡಿಕೆ , ಮಾಹಿತಿ ತಂತ್ರಜ್ಞಾನ ಗ್ರಾಮೀಣ ಸಹಕಾರ ಬ್ಯಾಂಕ್ ಗಳಲ್ಲಿ ಹಂಚಿಕೊಂಡು ಉಪಯೋಗ ಪಡೆಯ ಬಹುದಾದ ವ್ಯವಸ್ಥೆ ನಿರ್ಮಾಣ. ಇತ್ತೀಚೆಗೆ ಸ್ಥಾಪಿತ ಪಟ್ಟಣ ಸಹಕಾರ ಬ್ಯಾಂಕ್ ಗಳ ಪೋಷಕ ಸಂಸ್ಥೆ (NUCFDC) ಯನ್ನು ಬಲಪಡಿಸಿ ಪಟ್ಟಣ ಸಹಕಾರ ಬ್ಯಾಂಕ್ ಗಳನ್ನು ಬಲ ಪಡಿಸುವುದು. ಸಾಮಾನ್ಯ ತಾಂತ್ರಿಕತೆ , ಬಂಡವಾಳ ಹೂಡಿಕೆ, ಅಲ್ಪಾವಧಿ ದ್ರವ್ಯ ಆಸ್ತಿ ಒದಗಿಸುವಿಕೆ, ಇದಕ್ಕೆ ಆರ್. ಬಿ. ಐ ನಿಂದ ಸ್ವಯಂ ನಿಯಂತ್ರಣ ಸಂಸ್ಥೆ (SRO) ಸ್ಥಾನಮಾನ ದೊರಕಿಸುವುದು ಮತ್ತು ಬ್ಯಾಂಕ್ ಗಳಲ್ಲಿ ಗ್ರಾಹಕ ರಕ್ಷಣೆ ಮತ್ತು ನೈತಿಕತೆ, ಸಮಾನತೆ, ವೃತ್ತಿಪರತೆ , ಮುಂತಾದವುಗಳನ್ನು ಉತ್ತಜಿಸುವುದು.
ಸಹಕಾರ ಬ್ಯಾಂಕ್ ಗಳು ಸರ್ಕಾರದ ಸೇವೆಗಳನ್ನು ಒದಗಿಸಲು, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳು ದೀರ್ಘಾವಧಿ ಸಾಲಗಳನ್ನು ವಿತರಿಸುವಂತಾಗಲು ಕ್ರಮತೆಗೆದುಕೊಳ್ಳುವುದು. ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ‘ಕಾರ್ಯಗತ ಪಡೆ ‘ ( ಟಾಸ್ಕ ಪೋರ್ಸ್ ) ನಿರ್ಮಾಣ ಮಾಡುವುದು. ಎನ್ ಸಿಡಿಸಿ / ನಬಾರ್ಡ್ ವಿವರವಾದ ಯೋಜನೆ ವರದಿ (ಡಿ.ಪಿ.ಆರ್) , ವ್ಯಾಪಾರ / ವ್ಯವಹಾರ ಸಾಧ್ಯತೆ ವರದಿ, ಯೋಜನೆವರದಿ ತಯಾರಿಸಲು ನೆರವು ನೀಡುವುದು. ಎಸ್. ಸಿ. ಡಿ.ಸಿ ಕಾರ್ಯಾಚರಣೆ ವಿಸ್ತರಿಸುವುದು.
ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಳ ಗೊಳಿಸಲು ಸಹಕಾರ ರಚನೆಯನ್ನು ವಿಸ್ತರಿಸುವುದು ಮತ್ತು ಭೌಗೋಳಿಕ ತಲುಪುವಿಕೆಯನ್ನು ವಿಸ್ತರಿಸುವುದು.
ಪರಸ್ಪರರಿಗೆ ಲಾಭವಾಗುವಂತೆ ಹಾಲಿ ಇರುವ ಮೂಲ ಸೌಕರ್ಯಗಳ ಮತ್ತು ನೂತನವಾಗಿ ಸೃಷ್ಟಿಸುವ ಮೂಲ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವುದು. ಪಂಚಾಯ್ತಿ /ಜಿಲ್ಲಾ ಮಟ್ಟದ ಮೂಲ ಸೌಕರ್ಯಗಳನ್ನು ಸಾಮಾನ್ಯ ಸೇವೆಗಳಿಗೆ ಉಪಯೋಗಿಸಿಕೊಳ್ಳಲು ಅನುವು ಆಗುವಂತಹದು. ಉದಾ: ಆಹಾರ , ಬೀಜ ಪರಿಕ್ಷಾ ಪ್ರಯೋಗಾಲಯ , ಸಾವಯವ ಉತ್ಪನ್ನ ದೃಡೀಕರಣ, ಆಹಾರವಲ್ಲದ ಗುಣನಿಯಂತ್ರಣ ಪ್ರಯೋಗಾಲಯ, ಮಣ್ಣು ಪರೀಕ್ಷೆ ಕೇಂದ್ರ , ಪಶುವೈದ್ಯಕೀಯ ಕೇಂದ್ರ ,ಶೈತ್ಯಾಗಾರ (ಮೀನು, ತರಕಾರಿ , ಹಣ್ಣು) ಸರಬರಾಜು ಸರಪಳಿಗೆ ಅನುಕೂಲವಾಗುವಂತೆ , ಹೆಚ್ಚುವರಿ ವೆಚ್ಚದ ತಾಂತ್ರಿಕ ಡಿಜಿಟಲ್ ತಾಂತ್ರಿಕ ಅಳವಡಿಕೆಯನ್ನು ಹಂಚಿಕೊಂಡು ಉಪಯೋಗಿಸಿಕೊಳ್ಳುವುದು. ವಲಯವಾರು ಉತ್ತುಂಗ ಸಂಸ್ಥೆಗಳು ಸಹಕಾರ ಮನೋಭಾವನೆಯನ್ನು ಬೆಳೆಸಲು ಯಶಸ್ವಿ ಸಹಕಾರ ಸಂಸ್ಥೆಗಳ ಯಶೋಗಾಥೆಗಳನ್ನು , ಉತ್ತಮ ರೂಢಿಗಳನ್ನು ಸಂಗ್ರಹಿಸಿ ಪಸರಿಸುವುದು. ಸಹಕಾರ ಸಂಸ್ಥೆಗಳು ಮತ್ತು ಇದರ ಸದಸ್ಯರುಗಳು ಸಹಕಾರ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು , ಹಣಕಾಸಿನ ಸೇವೆ ಪಡೆಯಲು ಪ್ರೊತ್ಸಾಹಿಸುವುದು. ಸದಸ್ಯರು ತಮ್ಮ ಮನೆ ಬಾಗಿಲಿನಲ್ಲಿ ರೂಪೆ, ಕೆ.ಸಿ.ಸಿ. ಒದಗಿಸಲು ಪಾಕ್ಸ ಗಳೂ ಒಳಗೊಂಡಂತೆ ಪ್ರಾಥಮಿಕ ಸಂಘಗಳು ಜಿ.ಕೇ.ಸ.ಬ್ಯಾಂಕ್ ಗಳ “ಬ್ಯಾಂಕ್ ಮಿತ್ರ “ಗಳಾಗಿ ಕಾರ್ಯನಿರ್ವಹಿಸುವುದು. ಮುಂದಿನ ಐದು ವರ್ಷಗಳಲ್ಲಿ ಸಹಕಾರ ಸೇವೆ ಇಲ್ಲದ ಪಂಚಾಯ್ತಿ ಗಳಲ್ಲಿ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸುವುದು. ನೈರುತ್ಯ ಪ್ರಾಂತ್ಯಯದಲ್ಲಿ ಸಾಂಸ್ಥಿಕ ಮತ್ತು ಆರ್ಥಿಕ ಬೆಂಬಲ ಒದಗಿಸುವುದು. ಮೇಲಿನ ಹಂತದ ಸಹಕಾರ ಸಂಸ್ಥೆಗಳು ಕೆಳಹಂತದ ಪ್ರಾಥಮಿಕ ಸದಸ್ಯರು ಸ್ಪರ್ಧಾತ್ಮಕ ವಾಗಿ ಕಾರ್ಯನಿರ್ವಹಿಸುವಂತೆ ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು. ಪ್ರಾಥಮಿಕ, ಮಾಧ್ಯಮಿಕ, ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಇಪ್ಕೊ, ಕ್ರಿಭ್ಭಕೊ, ನ್ಯಾಫೆಡ್, ಇತರೆ ರಾಷ್ಟ್ರೀಯ ಸಹಕಾರ ಸಂಸ್ಥೆಗಳ , ನೂತನವಾಗಿ ಬಹುರಾಷ್ಟ್ರೀಯ ಕಾಯ್ದೆಯಲ್ಲಿ ಸ್ಥಾಪಿತ ಎಸ್ ಸಿ ಓ ಎಲ್, ಎನ್.ಸಿ.ಇ.ಎಲ್, ಬಿ.ಬಿ.ಸಿ.ಎಲ್ ಗಳ ಸದಸ್ಯರಾಗುವುದು. ರಾಷ್ಟ್ರಮಟ್ಟದ ಮಹಾಮಂಡಳ/ ಒಕ್ಕೂಟಗಳು ತಮ್ಮ ಸದಸ್ಯ ಸಹಕಾರ ಸಂಸ್ಥೆಗಳಿಗೆ ಅತ್ಯುತ್ತಮ ರೂಢಿಗಳು, ಪಾರದರ್ಶಕತೆ , ಅತ್ಯುತ್ತಮ ಆಡಳಿತ ರೂಢಿಗಳು,
ಸಹಕಾರದ ಅರಿವು, ಸದಸ್ಯ ಶಿಕ್ಷಣ ನೀಡಲು ಪ್ರೊತ್ಸಾಹಿಸುವುದು.
2. ಸ್ಪಂದನಾಶೀಲ, ಸ್ವ- ಸ್ಥಿರ ಪರಿಸರ ನಿರ್ಮಾಣದ ಮೂಲಕ ಸ್ಪಂದನ ಶೀಲತೆಗೆ ಪ್ರೇರೇಪಿಸುವುದು.
ಸಹಕಾರ ವ್ಯಾಪಾರ / ವ್ಯವಹಾರ ಪರಿಸರ ನಿರ್ಮಾಣ ಮತ್ತು ಅಭಿವೃದ್ಧಿ,
ಸಹಕಾರ ವ್ಯಾಪಾರ / ವ್ಯವಹಾರ ಪರಿಸರ ನಿರ್ಮಾಣಕ್ಕೆ ಅನುವಾಗುವಂತೆ ಸ್ವಸ್ಥಿರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರೊತ್ಸಾಹ ನೀಡುವುದು. ಈ ವ್ಯವಸ್ಥೆಯಲ್ಲಿ ಆರ್ಥಿಕತೆ, ವ್ಯವಹಾರಕ್ಕೆ ಸಂಶೋಧನೆ , ಸಲಹೆ ಸೇವೆಗಳು (ಮಾರುಕಟ್ಟೆ , ಬ್ರಾಂಡಿಂಗ್ ) ಲಭ್ಯವಿರುತ್ತವೆ. ಇದರೂಡನೆ ವಲಯ ಅಭಿವೃದ್ಧಿ ಮತ್ತು ಸಾಮಾರ್ಥ್ಯ ಅಭಿವೃದ್ಧಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ರಾಜ್ಯಗಳು / ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಟ ಒಂದು ವಿವಿದೋದ್ದೇಶ ಪಾಕ್ಸ ನ್ನು ಅಭಿವೃದ್ಧಿ ಗೊಳಿಸುವುದು. ಈ ಸಂಘದಲ್ಲಿ ಅತ್ಯುತ್ತಮ ಆಡಳಿತ ಮತ್ತು ವ್ಯವಸ್ಥಾಪನ ರೂಢಿಗಳನ್ನು ಪಾಲಿಸಲಾಗುತ್ತದೆ. ಇದು ಮಾದರಿಯಾಗಿದ್ದು ಇತರೆ ಗ್ರಾಮಗಳು ಈ ಮಾದರಿ ಅನುಸರಿಸಿ ಜಿಲ್ಲೆಯ ಇತರೆ ಗ್ರಾಮಗಳು ಪಾಲಿಸುತ್ತವೆ . ಮತ್ತು ರಾಜ್ಯ ಮಟ್ಟದಲ್ಲಿಯೇ ಅತ್ಯುತ್ತಮ ಸಂಘವಾಗಲು ಆಶಿಸುತ್ತದೆ. ಗ್ರಾಮೀಣ ಉತ್ಪನ್ನಗಳಾದ ಜೇನು, ಸಾಂಬಾರು ಪದಾರ್ಥಗಳು , ಕಾಫಿ, ಟೀ , ಔಷದೀಯ , ಪರಿಮಳಯುಕ್ತ ಎಣ್ಣೆ ಗಿಡಮೂಲಿಕೆಗಳು, ರೇಷ್ಮೆ , ಹಣ್ಣುಗಳು , ಅಣಬೆ, ಪುಷ್ಟ ಕೃಷಿ, ಕೋಳಿ ಸಾಕಣೆ ಇತರೆ ಇವುಗಳ ಆರ್ಥಿಕ ಗೊಂಚಲು
ಗಳನ್ನು ಸಹಕಾರ ಆಧಾರಿತವಾಗಿ ರಚಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಉತ್ತೇಜನ ನೀಡುವುದು. ಸಹಕಾರ ಸಂಸ್ಥೆಗಳು ಭೌಗೋಳಿಕ ಗುರುತು (ಜಿ.ಐ.) ಭೌತಿಕ ಸ್ವಾಮ್ಯ ಹಕ್ಕು (ಐ.ಪಿ.ಆರ್) ಮೂಲಕ ಮಾರುಕಟ್ಟೆ ಅವಕಾಶಗಳನ್ನು ಹುಡುಕುವುದು. ಸಾವಯವ , ಕೃಷಿ, ಹೈನುಗಾರಿಕೆ ಉತ್ಪನ್ನ ಗಳನ್ನು ‘ಭಾರತ್’ ಬ್ರಾಂಡ್ ಅಡಿಯಲ್ಲಿ ತರುವುದು, ವಿವಿಧ ಜಾತ್ರೆ, ಪ್ರದರ್ಶನ ಮೇಳ ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಸಹಕಾರ ಸಂಸ್ಥೆಗಳು ಭಾಗವಹಿಸುವುದು ಮತ್ತು ತಮ್ಮ’ ಬ್ರಾಂಡ್ ‘ಪ್ರಚುರಪಡಿಸುವುದು.
ಬಹು ಆಯಾಮದ ವಿಸ್ತರಣಿಗೆ ಪ್ರರೇಪಿಸುವುದು , ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಒಳಗೊಂಡಂತೆ ಮತ್ತು ಸದಸ್ಯರ ಆದಾಯ ಹೆಚ್ಚಳಗೊಳಿಸುವುದು.
‘ಒಂದು ಜಿಲ್ಲೆ ಒಂದು ಉತ್ಪನ್ನ ‘ ರಫ್ತು ಉತ್ತೇಜನ ಕಾರ್ಯಕ್ರಮ ದೊಡನೆ ಜೋಡಣೆಗೊಳ್ಳುವುದಕ್ಕೆ ಸಹಕಾರ ಸಂಸ್ಥೆಗಳಿಗೆ ಉತ್ತೇಜನ ನೀಡುವುದು . ಉದ್ಯೋಗ ನಿರ್ಮಾಣ , ಮಹಿಳಾ ಸಶಕ್ತತೆಗಾಗಿ ‘ಶ್ವೇತ ಕ್ರಾಂತಿ . 2.0’ ಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ತೇಜಿಸುವುದು. ವಿಶೇಷವಾಗಿ ಮೂಲ ಸೌಕರ್ಯಗಳು ಕೊರತೆ ಇರುವ ಜಿಲ್ಲೆಗಳಲ್ಲಿ ಮತ್ತು ಮೀನುಗಾರಿಕೆ ಜೀವನಕ್ಕೆ ಆಧಾರವಾಗಿರುವಲ್ಲಿ ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸಿ ಮೀನು ಮತ್ತು ಮೀನುಮರಿ ಉತ್ಪಾದನೆಗೆ ಹೆಚ್ಚು ಒತ್ತನ್ನು ನೀಡುವುದು. ಸಾವಯವ ಉತ್ಪನ್ನ ಮಾರುಕಟ್ಟೆಯ ನಾಯಕತ್ವವನ್ನು ಸಹಕಾರ ವಲಯ ವಹಿಸಿಕೊಳ್ಳುವುದು. ರಾಷ್ಟ್ರದ ಒಟ್ಟು ರಪ್ತು ಮಾರುಕಟ್ಟೆಯಲ್ಲಿ ಸಹಕಾರದ ಪಾಲನ್ನು ಅಧಿಕ ಗೊಳಿಸುವುದು. ‘ಸಿರಿ ಧಾನ್ಯ ‘ಗಳನ್ನು ‘ನ್ಯಾಫೆಡ್, ಎನ್ ಸಿ ಸಿ ಎಫ್ ನಂತಹ ಸಂಸ್ಥೆಗಳು ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ಪೂರೈಕೆ ಮಾಡಿಕೊಂಡು ಆಹಾರ ಮತ್ತು ಪೌಷ್ಟಿಕ ಭದ್ರತೆ ಅಂಗವಾಗಿ ಪ್ರತಿ ಮನೆಯ ಆಹಾರದ ಭಾಗವಾಗಿ ಇದು ಲಭ್ಯವಾಗುವಂತೆ ಮಾಡುವುದು.
ನ್ಯಾಫೆಡ್ , ಎಸ್ ಸಿ ಸಿ ಎಫ್ ಅಂತಹ ಸಂಸ್ಥೆಗಳು ಪ್ರಾಥಮಿಕ ಸಂಘಗಳ ಮೂಲಕ ದ್ವಿದಳ ಧಾನ್ಯಗಳು, ಎಣ್ಣೆ ಬೀಜಗಳು ಮತ್ತು ಮುಸುಕಿನ ಜೋಳ ಗಳನ್ನು ಪೂರೈಕೆ ಮಾಡಿಕೊಂಡು ಉತ್ಪಾದನೆಗೆ ಉತ್ತೇಜನ ನೀಡಿ ಆಮದು ಕಡಿಮೆಗೊಳಿಸಿ “ಆತ್ಮ ನಿರ್ಭರ ” ವಂತಾಗಲು ಕ್ರಮವಹಿಸುವುದು. ಸಹಕಾರ ಸಕ್ಕರೆ ಕಾರ್ಖಾನೆಗಳು “ಇಥೆನಾಲ್ ” ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ ಇತರೆ ಜೈವಿಕ ಉತ್ಪನ್ನಗಳನ್ನ (ಉದಾ: ಮುಸುಕಿನ ಜೋಳ ) ಉಪಯೋಗಿಸಿ ತಯಾರಿಸಿ ಇಂಧನ ಕಚ್ಚಾ ತೈಲ ಆಮದು ಕಡಿತಗೊಳಿಸಲು ಸಹಕರಿಸುವುದು. ಸದಸ್ಯರ ಆಧಾಯ ಹೆಚ್ಚಳಕ್ಕಾಗಿ ಹೆಚ್ಚಿನ ಬಂಡವಾಳವನ್ನು ಮೌಲ್ಯದೀಕರಣ ( ಸಂಸ್ಕರಣಿ ) ಘಟಕ ಮತ್ತು ಉತ್ಪಾದನೆ ಘಟಕಗಳಲ್ಲಿ ಹೂಡುವುದು. ಮುಂದಿನ ಹತ್ತು ವರ್ಷಗಳಲ್ಲಿ ಐವತ್ತು ಕೋಟಿ ಜನಸಂಖ್ಯೆ ಸಹಕಾರದಲ್ಲಿ ಒಳಗೊಳ್ಳುವಂತೆ ಮಾಡಿ ಭಾರತದ ಆರ್ಥಿಕತೆಗೆ ಮೂರು ಪಟ್ಟು ಹೆಚ್ಚಾಗಿ ಸಹಕಾರದ ಕೊಡುಗೆ ಇರುವಂತೆ ಮಾಡಲು ಒಂದು ಕಾರ್ಯಪಡೆ ರಚಿಸಿ ಅದು ಕ್ರಮಿಸಬೇಕಾದ ದಾರಿಯ ಬಗ್ಗೆ ಆರ್ಥಿಕ ಚೌಕಟ್ಟು ನಿರ್ಮಿಸಲು ಶಿಫಾರಸ್ಸು ಮಾಡಲು ಕ್ರಮ ತೆಗೆದುಕೊಳ್ಳುವುದು.
3. ಸಹಕಾರ ಸಂಸ್ಥೆಗಳನ್ನು ಭವಿಷ್ಯಕ್ಕಾಗಿ ಸಿದ್ಧ ಗೊಳಿಸುವುದು.
ದಕ್ಷ ಮತ್ತು ಪಾರದರ್ಶಕ ವ್ಯವಸ್ಥಾಪನೆಗಾಗಿ ತಾಂತ್ರಿಕತೆ ಅಳವಡಿಕೆಯನ್ನು ಪ್ರೊತ್ಸಾಹಿಸುವುದು.
ದತ್ತಾಂಶ ಆಧಾರಿತ ನಿರ್ಧಾರ ತೆಗೆದುಕೊಳ್ಳಲು ತ್ವರಿತ ಸೇವೆ ದೊರೆಯುವ ಉದ್ದೇಶದಿಂದ ‘ಸಹಕಾರ ಬಣವೆ ‘ ಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲು ಅನುಕೂಲತೆ ಕಲ್ಪಿಸುವುದು. ಸಹಕಾರದ ಭಾಗೀದಾರರು ನೂತನ ಅವಿಷ್ಕಾರ ಮತ್ತು ನೂತನ ಸೇವೆ ನಿರ್ಮಿಸಲು ಉತ್ತಮ ಗುಣಮಟ್ಟದ ದತ್ತಾಂಶ ಸಂಗ್ರಹ ಮತ್ತು ಲಭ್ಯತೆಯಿಂದ ಸಾಧ್ಯವಾಗುತ್ತದೆ. ಹಾಲಿ ಇರುವ ಎನ್ ಸಿ ಡಿ ಮತ್ತು ಮತ್ತು ತಕ್ಕ / ಸೂಕ್ತ ದತ್ತಾಂಶಗಳ ತಳಹದಿಯ ಮೇಲೆ ‘ಬಣವೆ’ಯನ್ನು ನಿರ್ಮಾಣ ಮಾಡಬಹುದು. ಕೃಷಿ-ಬಣವೆಯೊಡನೆ ಸಹಕಾರ ಬ್ಯಾಂಕ್ ಗಳು ಸಂಯೋಜನೆ ಗೊಂಡಲ್ಲಿ ಅಸೀಮ ದತ್ತಾಂಶ ಜೋಡನೆಗೆ ಅವಕಾಶವಾಗುತ್ತದೆ. ಕೃಷಿ ಸಚಿವಾಲಯ ದತ್ತಾಂಶ ಜೋಡನೆಯಿಂದ ಬಡ್ಡಿ ರಿಯಾಯ್ತಿ ಹಣ ಬಿಡುಗಡೆಯನ್ನು ತ್ವರಿತವಾಗಿ ಬಿಡುಗಡೆ ಮಾಡಬಹುದಾಗಿದೆ. ವಿವಿಧ ಸಹಕಾರ ಹಂತದ ಮತ್ತು ವಲಯಗಳ ತಾಂತ್ರಿಕತೆಯನ್ನು ಆಧುನಿಕ ಗೊಳಿಸುವಲ್ಲಿ ರಾಷ್ಟ್ರೀಯ ಮಹಾಮಂಡಳಗಳು ಬೆಂಬಲ ಒದಗಿಸಬೇಕು. ಸಹಕಾರ ಸಂಸ್ಥೆಗಳು ಇ-ವಾಣಿಜ್ಯ ವೇದಿಕೆ ಗಳನ್ನು ಬಳಸಿಕೊಳ್ಳಬೇಕು , ಸರ್ಕಾರದ ಇ- ಮಾರ್ಕೆಟ್ ಪ್ಲೇಸ್
(GeM), ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ (ONDC), ಇದರಿಂದ ಅಧಿಕ ಗ್ರಾಹಕರನ್ನು ತಲುಪಬಹುದಲ್ಲದೇ ಉತ್ತಮ ಬೆಲೆಯೂ ದೊರೆಯುತ್ತದೆ.
ಸಹಕಾರ ತತ್ವಗಳನ್ನು ಅನುಸರಿಸಿ ವೃತ್ತಿಪರ ವ್ಯವಸ್ಥಾಪನೆ ಯುಳ್ಳ ಆರ್ಥಿಕ ಘಟಕಗಳಾಗಿ ಸಹಕಾರ ಸಂಸ್ಥೆಗಳನ್ನು ಪರಿವರ್ತಿಸುವುದು.
ಕೈಗಾರಿಕೆ ಅಭಿಮುಖವಾದ ಅವಶ್ಯಕತೆ ಆಧಾರಿತ ಸಾಮರ್ಥ್ಯಭಿವೃದ್ಧಿ ನೀಡುವ ಸಮಗ್ರ , ಗುಣಮಟ್ಟದ ಸಾಂಸ್ಥಿಕ ರಚನೆಯನ್ನು ರಾಷ್ಟ್ರಮಟ್ಟದಲ್ಲಿ ನಿರ್ಮಾಣ ಮಾಡಿ ಸಹಕಾರ ಸಂಸ್ಥೆಗಳ ವ್ಯವಸ್ಥಾಪನೆಗೆ ಅನುವು ಮಾಡಿಕೊಡುವುದು. ಇದು ಹಾಲಿ ಇರುವ ತರಬೇತಿ ಸಂಸ್ಥೆಗಳು / ಕೇಂದ್ರಗಳನ್ನು ರಾಷ್ಟ್ರಮಟ್ಟದಲ್ಲಿ ಸಮನ್ವಯ ಗೊಳಿಸಿ ಉಪನ್ಯಾಸಕರ ನೇಮಕಾತಿ , ಪ್ರದೇಶ ಅರ್ಹತೆಗಳು ,ತರಗತಿ ಪಠ್ಯ , ಪರೀಕ್ಷೆ ಮುಂತಾದವುಗಳನ್ನು ನೋಡಿಕೊಳ್ಳಲು ರಾಷ್ಟ್ರಮಟ್ಟದ ಸಂಸ್ಥೆ ರಚಿಸುವುದು. ಸಹಕಾರ ವಲಯಕ್ಕಾಗಿ ಉತ್ತಮ ಅರ್ಹತೆಯುಳ್ಳ ಯುವ ಮಾನವ ಶಕ್ತಿ ನಿರ್ಮಾಣ ಮಾಡುವುದು. ಹಾಲಿ ಇರುವ ಕೌಶಲ ಅಭಿವೃದ್ಧಿ ಕೇಂದ್ರಗಳು/ಸಂಸ್ಥೆಗಳ ಸಹ ಯೋಗದಿಂದ ಕೌಶಲ್ಯ ಅಭಿವೃದ್ಧಿ ತರಗತಿಗಳನ್ನು ನಡೆಸುವುದು. ಸಹಕಾರ ವಲಯಕ್ಕೆ ಅಗತ್ಯ ತರಗತಿ ಮತ್ತು ಪಠ್ಯಗಳ ತಯಾರಿ. ಸಹಕಾರ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಖಾಸಗಿ ಮುತ್ತು ಸಹಕಾರ ಸಂಸ್ಥೆಗಳ ಪ್ರಾಯೋಜಿ ಕತೆ ಮತ್ತು ಅಭ್ಯಾಸ ದತ್ತಿ ಗಳನ್ನು ಸೃಷ್ಟಿ ಸುವುದು. ಸಹ
ಕಾರ ವಲಯದಲ್ಲಿ ಸಂಶೋಧನೆ, ಗುಣಮಟ್ಟದ ಶಿಕ್ಷಣ ಕೇಂದ್ರ ಗಳನ್ನು ಸೃಷ್ಟಿಸುವುದು. ನೂತನ ಮತ್ತು ಉದಯೋನ್ಮುಖ ವಲಯಗಳಿಗೆ ಇಂಬು ಕೊಡುವ ಸಾಮಾಜಿಕ ಔದ್ಯೋಗಿಕ ಇಂಬು ಕೊಡುವ ಕೇಂದ್ರ(SEI) ಗಳನ್ನು ಸ್ಥಾಪಿಸುವುದು. ಉನ್ನತ ಶಿಕ್ಷಣ ಸಂಸ್ಥೆಗಳು ಸಹಕಾರ ಕೇಂದ್ರಿಕೃತ ಪಠ್ಯಕ್ರಮಗಳಿಗೆ ಉತ್ತೇಜನ ನೀಡುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಿಗೆ ಲಭ್ಯ ಸಹಕಾರ ಶಿಕ್ಷಣ ನಿಧಿಯನ್ನುಸಹಕಾರ ತರಬೇತಿ, ಕೌಶಲ್ಯ ಅಭಿವೃದ್ಧಿ , ಭಾರತದ ವಿವಿಧ ಭಾಷೆಗಳಲ್ಲಿ ಸಹಕಾರದ ಶಿಕ್ಷಣಿಕ ಸಾಹಿತ್ಯ ಸೃಷ್ಟಿಗೆ ಒತ್ತು ನೀಡುವುದು.
ಉದ್ದೇಶಿತ ಉತ್ತುಂಗ ಸಂಸ್ಥೆ ಯಿಂದ ನಡೆಸಲ್ಪಡುವ ಉದಯೋನ್ಮುಖ , ನವೋದ್ಯಮ ಸಹಕಾರ ಸಂಸ್ಥೆಗಳಿಗೆ ಸಾಂಸ್ಥಿಕ ಸ್ವರೂಪ ನೀಡಲು : ಸ್ಥಳೀಯ ಲಭ್ಯ ಸಂಪನ್ಮೂಲಗಳು ಮತ್ತು ಅದರಗಳನ್ನು ಬಳಸಿಕೊಂಡು ಸುಸ್ಥಿರ ಮತ್ತು ಉದಯೋನ್ಮುಖ ಸಹಕಾರ ವ್ಯಾಪಾರ / ವ್ಯವಹಾರ ರೂಢಿಗಳನ್ನು ಮತ್ತು ತಾಂತ್ರಿಕತೆಯನ್ನು ಅಭಿವೃದ್ಧಿ ಗೊಳಿಸುವುದು. ಹೊರಹೊಮೃತ್ತಿರುವ ಕ್ಷೇತ್ರಗಳಲ್ಲಿ ನೂತನ ಸಹಕಾರ ಸಂಸ್ಥೆ ಸ್ಥಾಪಿಸಲು ಇಂಬು ಕೊಡುವುದು. ಸಹಕಾರ ವಲಯದಲ್ಲಿ ಔದ್ಯೋಗಿಕ ಕುಶಲತೆ ಯನ್ನು ಉತ್ತೇಜಿಸುವುದು , ಪಸರಿಸುವುದು. ವಿವಿಧ ದರ್ಜೆಯ ಕೆಲಸಗಳಿಗೆ ಅಗತ್ಯ ಮಾನವ ಸಂಪನ್ಮೂಲ ವನ್ನು ಸಜ್ಜುಗೊಳಿಸಲು ಸಹಕಾರ ಸಂಸ್ಥೆಗಳ ಉಪನಿಯಮಗಳನ್ನು ತಿದ್ದು ಪಡಿ ಮಾಡಿ ಇದರಲ್ಲಿ ತಮ್ಮ ಆಡಳಿತ ಮಂಡಳಿ ಸದಸ್ಯರು , ಸಿಬ್ಬಂದಿಗೆ ತರಬೇತಿ, ನಾಯಕತ್ವ ಅಭಿವೃದ್ಧಿ, ವ್ಯವಸ್ಥಾಪನ ಅಭಿವೃದ್ಧಿ ಮತ್ತು ಇತರೆ ಸಂಸ್ಥೆಯ ಸಾಮರ್ಥ್ಯಭಿವೃದ್ಧಿ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುವುದು. ಕಾಲಬದ್ಧ ಮತ್ತು ಸರ್ವರನ್ನು ತಲುಪವಂತಹ ಸಹಕಾರ ತತ್ವ ಮತ್ತು ಮೌಲ್ಯ ಗಳನ್ವಯ ಎಲ್ಲ ಸಹಕಾರ ಸಂಸ್ಥೆಗಳಲ್ಲಿ, ನೂತನ ಸಹಕಾರ ಸಂಸ್ಥೆಗಳೂ ಸೇರಿದಂತೆ ಸದಸ್ಯ ಶಿಕ್ಷಣ ನೀಡಲು ಶ್ರಮಿಸುವುದು. ಅತಿ ಮುಖ್ಯ ಸಹಕಾರ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಫೆಲೋಶಿಪ್ ನೀಡಲು ರಾಷ್ಟ್ರ / ರಾಜ್ಯ ಮಹಾಮಂಡಳಿ ಗಳು ವಿಶ್ವವಿದ್ಯಾಲಯ , ಕಾಲೇಜು ಗಳಲ್ಲಿ ಸ್ಥಾಪಿಸಿ ಉತ್ತೇಜಿಸುವುದು. ರಾಷ್ಟ್ರೀಯ ಮತ್ತು ರಾಜ್ಯ ಮಹಾಮಂಡಳಗಳು ತಳಹಂತದ ಬೇರು ಮಟ್ಟದಲ್ಲಿ ಸ್ಥಳೀಯ ಭಾಷೆಯಲ್ಲಿ ಸಹಕಾರ ತರಬೇತಿ ಕೇಂದ್ರಗಳನ್ನು ತೆರೆಯಲು ಪ್ರೋತ್ಸಾಹಿಸುವುದು. ಇವು ವಿಸ್ತರಣಾ ಮತ್ತು ಸಾಮರ್ಥ್ಯಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಚ್ಚು ಜನರನ್ನು ಒಳಗೊಳ್ಳುವುದನ್ನು ಖಾತರಿ ಪಡಿಸಿಕೊಳ್ಳುವುದು.
ಮಹಾಮಂಡಳಿಗಳು ಸದಸ್ಯ ಸಹಕಾರ ಸಂಸ್ಥೆಗಳ ಕಾರ್ಯಾಚರಣೆ ಬಗ್ಗೆ ಪ್ರಮುಖ ಕಾರ್ಯಚರಣೆ ಸೂಚಿ (KPIs) ಗಳನ್ನು ಅಭಿವೃದ್ಧಿ ಪಡಿಸಿ ಮೌಲ್ಯಮಾಪನ ಮಾಡುವುದು. ವಲಯವಾರು ಕಾರ್ಯಕ್ಷಮತೆ ಮಾನದಂಡ( ratings) ಗಳನ್ನು ರಚಿಸಿ ಅದರಂತೆ ಸಹಕಾರ ವಲಯದ ಸಾಮರ್ಥ್ಯ ಗಳನ್ನು ಗುರುತಿಸುವುದು. ತಂತ್ರಗಾರಿಕೆ ಆಧಾರಿತ ಸಿಬ್ಬಂದಿ ನೇಮಕಾತಿ ಮೂಲಕ ಎತ್ತರದ ವೃತ್ತಿಪರತೆ ಪ್ರೊತ್ಸಾಹ ನೀಡಿ ಜವಾಬ್ದಾರಿಯುತ ಆಡಳಿತ, ನಾಯಕತ್ವ ಮತ್ತು ಸಿಬ್ಬಂದಿ ಕಾರ್ಯಕ್ಷಮತೆ ಪ್ರೊತ್ಸಾಹಿಸುವುದು.
4. ಒಳಗೊಳ್ಳುವಿಕೆಯನ್ನು ಪ್ರೊತ್ಸಾಹಿಸುವುದು ಮತ್ತು ಕಟ್ಟಕಡೆಯವರೆಗೂ ತಲುಪುವುದು .
ಒಳಗೊಳ್ಳುವಿಕೆಗೆ ಪ್ರೊತ್ಸಾಹ ಮತ್ತು ಸದಸ್ಯ ಕೇಂದ್ರಿಕೃತ. ಈ ಗುರಿ ಸಾಧನೆಗಾಗಿ ಮಹಿಳೆ, ಯುವಕರು , ಸಣ್ಣ ಮತ್ತು ಅತಿಸಣ್ಣ ರೈತರ, ದುರ್ಬಲ ಜನರ (ಪ.ಜಾ.,ಪ.ಪಂ, ವಿಕಲ ಚೇತನರು , ಇತರೆ ) ರವರನ್ನು ಒಳಗೊಳ್ಳಲು ಸಹಕಾರ ಸಂಸ್ಥೆಗಳಲ್ಲಿ ಅವರಿಗೆ ಅವಕಾಶಗಳನ್ನು ಸೃಷ್ಟಿ ಮಾಡಬೇಕು. ದುರ್ಬಲ ಜನತೆಗೆ ಮೀನುಗಾರಿಕೆ, ಹೈನುಗಾರಿಕೆ, ಕೈ ಮಗ್ಗ, ಕೈಕುಶಲ , ಕಿರು ಅರಣ್ಯ ಮುಂತಾದ ಸಹಾರ ಸಂಸ್ಥೆಗಳ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಬೇಕು. ಲಿಂಗತ್ವ, ದುರ್ಬಲ ವರ್ಗ ಸಂಬಂಧಿತ ಹಂಚಿ ಹೋಗಿರುವ ದತ್ತಾಂಶಗಳನ್ನು ಎನ್. ಸಿ. ಡಿ ಗೆ ಅಳವಡಿಸುವ ಮೂಲಕ ಅವರನ್ನು ತಲುಪುವಂತೆ ಸಶಕ್ತಗೊಳಿಸುವುದು ಮತ್ತು ಪ್ರೇರೇಪಿಸುವುದು.
ಮಾದರಿ ಉಪನಿಯಮ ಗಳನ್ನ ವಿವಿಧ ಹಂತ ಮತ್ತು ವಲಯಗಳಲ್ಲಿ ಅಳವಡಿಸಿ ಕೊಳ್ಳುವ ಮೂಲಕ: ಸದಸ್ಯರ ಸಕ್ರಿಯ ಭಾಗವಹಿಸುವಿಕೆಯನ್ನು ಖಾತರಿ ಪಡಿಸಿಕೊಳ್ಳುವುದು. ಸದಸ್ಯ ಕೇಂದ್ರಕೃತ ಕಾರ್ಯಕ್ರಮಗಳ ಮೂಲಕ ನಿಷ್ಕ್ರಿಯ ಸದಸ್ಯರನ್ನು ಸಕ್ರಿಯ ಗೊಳಿಸುವುದು, ಸಮೂಹದ ಮಹಿಳೆಯರು, ದುರ್ಬಲರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವುದು. ನಿರ್ಧಾರ ತೆಗೆದುಕೊಳ್ಳುವಲ್ಲಿ ಸದಸ್ಯ ಕೇಂದ್ರಿಕೃತವಾಗಿರಲಿ. ಸಂಸ್ಥೆಯ ಆಡಳಿತವು ಭ್ರಷ್ಟಾಚಾರ ಹೊರತಾಗಿದ್ದು .ಪಾರದರ್ಶಕತೆ ಯನ್ನ ಖಾತ್ರಿ ಪಡಿಸಿಕೊಳ್ಳುವುದು . ವಿವಿಧ ಹಂತದ ಹುದ್ದೆಗಳಿಗೆ ಯುವ ಮತ್ತು ಪ್ರತಿಭಾವಂತ ರನ್ನು ನೇಮಕಾತಿ ಮಾಡುವುದು.
ರಾಷ್ಟ್ರ / ರಾಜ್ಯ ಮಹಾಮಂಡಳಗಳಿಗೆ ಪ್ರಾಥಮಿಕ ಸಹಕಾರ ಸಂಸ್ಥೆಯ ಸದಸ್ಯರನ್ನು ಬಲ ಪಡಿಸಲು ಪ್ರೊತ್ಸಾಹಿಸುವುದು : ಸಹಕಾರ ಮೌಲ್ಯ , ತತ್ವಗಳು ಮೂಲಕ ಸದಸ್ಯ ಶಿಕ್ಷಣ ನೀಡಿ ಸದಸ್ಯರಿಗೆ ತಮ್ಮ ಹಕ್ಕು , ಕರ್ತವ್ಯ , ಜವಾಬ್ದಾರಿಗಳನ್ನು ಮನದಟ್ಟು ಮಾಡಿಕೊಡುವುದು. ಸದಸ್ಯರ ಉದ್ಯಮ ಶೀಲತೆಯನ್ನು ಪ್ರೊತ್ಸಾಹಿಸುವದು . ಪ್ರಾಥಮಿಕ ಸಹಾರ ಸಂಸ್ಥೆಗಳು ಸದಸ್ಯರ ಆಧಾಯ ಅಧಿಕ ಗೊಳಿಸುವುದನ್ನು ಪ್ರೊತ್ಸಾಹಿಸುವುದು.
ಸಹಕಾರವು ಜನರ ಚಳುವಳಿ : ಇದಕ್ಕಾಗಿ , ಸಹಕಾರ ವನ್ನು ಶಾಲ ಪಠ್ಯ ಕ್ರಮವಾಗಿ ವಿವಿಧ ಹಂತದಲ್ಲಿ ಭೋದಿಸುವುದು . ಯುವ , ಮಹಿಳೆಯರು, ದುರ್ಬಲ ವರ್ಗದವರಲ್ಲಿ ಸಹಕಾರದಿಂದ ಆಗುವ ಲಾಭಗಳು , ಪ್ರಯೋಜನಗಳನ್ನು ತಿಳಿಯುವಂತೆ ಅರಿವು ಮೂಡಿಸಲು ರಾಷ್ಟ್ರ/ರಾಜ್ಯ ಮಹಾಮಂಡಳ ಗಳು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. ಇದು ಸಹಕಾರ ಆರ್ಥಿಕ ಮಾದರಿಯಲ್ಲಿ ವಿಶ್ವಾಸ ಮೂಡಿಸುತ್ತದೆ. ಮತ್ತು ಸದಸ್ಯತ್ವ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಹಕಾರ ದಿಂದ ಕಡುಬಡವ ಮತ್ತು ಬಡ ಜನತೆಯನ್ನು ಬಡತನದಿಂದ ಮುಕ್ತಗೊಳಿಸಿ ಆರ್ಥಿಕ ಸ್ವತಂತ್ರ ರಾಗುವ ಬಗ್ಗೆ ಯಶೋಗಾಥೆಗಳನ್ನುಪ್ರಚಾರ ಮಾಡಿ ಇತರರಿಗೆ ಅದು ತಲುಪುವಂತೆ ಮಾಡುವುದು . ವಿವಿಧ ಮಾಧ್ಯಮಗಳು , ಸಾಮಾಜಿಕ ಮಾಧ್ಯಮಗಳನ್ನು ಒಳಗೊಂಡಂತೆ ಯಶಸ್ವಿ ಪ್ರಕರಣಗಳನ್ನು ಹಂಚಿಕೊಳ್ಳುವುದು. ಇದಕ್ಕಾಗಿ ರಾಷ್ಟ್ರ ಮಹಾಮಂಡಳ / ಒಕ್ಕೂಟಗಳು / ಸಂಘಗಳ ಮೂಲಭೂತ ಸೌಕರ್ಯಗಳನ್ನು ಬಳಸಿಕೊಳ್ಳುವುದು.
5, ನವೀನ ಮತ್ತು ಉದಯೋನ್ಮುಖ ವಲಯಗಳನ್ನು ಪ್ರವೇಶಿಸುವುದು.
ನವೀನ ಮತ್ತು ಉದಯೋನ್ಮುಖ ವಲಯಗಳಿಗೆ ಸಹಕಾರ ಪ್ರವೇಶಿಸುವಂತಾಗಲು : ಪ್ರಾಥಮಿಕ ಸಹಕಾರ ಸಂಘಗಳು ವಿವಿದೋದ್ದೇಶ ಸಹಕಾರ ಸಂಘಗಳಾಗಿ ಪರಿವರ್ತಿತಗೊಂಡು ತಮ್ಮ ವ್ಯವಹಾರಗಳಲ್ಲಿ ವೈವಿಧ್ಯಮತೆಯನ್ನು ತರುವುದು. ಉದಾ: ಪ್ರ. ಮಂ. ಜನಔಷಧಿ ಕೇಂದ್ರ, ಉಗ್ರಾಣ, ಸಾಮಾನ್ಯ ಸೇವಕೇಂದ್ರ , ನ್ಯಾಯ ಬೆಲೆ ಅಂಗಡಿ , ಅಡುಗೆ ಅನಿಲ ವಿತರಣಿ, ಪೆಟ್ರೊಲ್ ಡಿಸೆಲ್ ಬಂಕ್ ,ಪ್ರ. ಮಂ. ಕಿಸಾನ್ ಸಮೃದ್ಧಿ ಕೇಂದ್ರ , ಗ್ರಾಮೀಣ ನೀರು ಸರಬರಾಜು ನಿರ್ವಹಣೆ, ಇತರೆ ಸ್ಥಾಪನೆ. ಇವುಗಳು ಲಾಭದಾಯಕವಾಗಿದಬೇಕು ಮತ್ತು ಸ್ವಯಂ ಕಾರ್ಯಾಚರಣೆಗೆ ತಕ್ಕಂತಿರಬೇಕು.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನವೀನ ಮತ್ತು ಉದಯೋನ್ಮುಖ ವಲಯ ಗಳಲ್ಲಿ ಪ್ರದೇಶ ಮತ್ತು ಶಕ್ತಗೊಳಿಸುವುದನ್ನು ಉತ್ತೇಜಿಸಬೇಕು. ಉದಾ: ಸೂಕ್ಷ್ಮವಿಮೆ , ನವೀಕರಿಸಬಹುದಾದ ಇಂಧನ,ಕುಡಿಯುವ ನೀರಿನ ಹಂಚಿಕೆ , ಆರೋಗ್ಯ , ಶಿಕ್ಷಣ , ತ್ಯಾಜ್ಯ ನಿರ್ವಹಣೆ, ಸಾರಿಗೆ, ಜೈವಿಕ ಅನಿಲ ಉತ್ಪಾದನೆ , ಮೊಬೈಲ್ ಅಪ್ಲಿಕೇಷನ್ – ಆಧಾರಿತ ಗುಂಪು ಸೇವೆಗಳು (ಉದಾ: ಟಾಕ್ಸಿ ಚಾಲಕರ, ) ಗೃಹ ಸೇವೆ ಒದಗಿಸುವವರ (ಪ್ಲಂಬರ್ , ಎಲೆಕ್ಟ್ರಿಷಿಯನ್) ಇದರಿಂದ ಸದಸ್ಯ ಆಧಾಯ ಹೆಚ್ಚಳ.
ಪರಿಸರಸ್ನೇಹಿ ರೂಢಿಗಳನ್ನು ಪ್ರೊತ್ಸಾಹಿಸುವುದು ತನ್ಮೂಲಕ ಚಕ್ರ ಆರ್ಥಿಕತೆಯಿಂದ ಸುಸ್ಥಿರತೆ ಸಾಧಿಸುವುದು. ಇದಕ್ಕಾಗಿ ಚಕ್ರ ಆರ್ಥಿಕತೆಯಲ್ಲಿ ಬಳಸುವ ಡಿಜಿಟಲೀಕರಣ, ಇಂಟರ್ ನೆಟ್, ಬ್ಲಾಕ್ ಚೈನ್, ರಿವರ್ಸ್ ಲಾಜಿಸ್ಟಿಕ್ಸ್ , ಇತರೆ, ಬಳಸುವುದನ್ನು ಪ್ರೊತ್ಸಾಹಿಸಿ , ಸಹಕಾರ ವಲಯದಲ್ಲಿ ಅನ್ವಯ ವಾಗು ವಂತಹುದನ್ನು ಪ್ರಧಾನವಾಗಿ ಬಳಕೆಗೆ ತರುವುದು. ಪಾಕ್ಸ ಸದಸ್ಯರಲ್ಲಿ ವಾತಾವರಣ ಕಾಪಾಡು ವಂತಹ ಬೆಳೆಗಳ ಬೆಳೆ ರೀತಿಯನ್ನು ರೂಡಿಗೆ ತರುವುದು. ಸೌರ, ಪವನ ಶಕ್ತಿ ಯಂತಹ ನವೀಕರಣ ಇಂಧನ ಉತ್ಪಾದನೆ ಬಳಕೆಗೆ ಪ್ರೊತ್ಸಾಹಿಸುವುದು. ಇದರಿಂದ ಇಂಗಾಲ ಉತ್ಪಾದನೆ ಮತ್ತು ವಾತಾವರಣ ತೊಡಕುಗಳನ್ನು ಕಡಿತ ಗೊಳಿಸಬಹುದಾಗಿದೆ. ಸಾವಯವ , ಪ್ರಾಕೃತಿಕ ಕೃಷಿ ಪದ್ಧತಿ , ಕೃಷಿ ಅರಣ್ಯ ಮತ್ತು ಹಾಳಾಗಿರುವ ಭೂಮಿಯನ್ನು ಕೃಷಿಯೋಗ್ಯ ನ್ನಾಗಿ ಮಾಡಲು ಪಾಕ್ಸ್ ಗಳು ಕ್ರಮವಹಿಸುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಗಳನ್ನು ಪಾಕ್ಸ್ ಮಖಾಂತರ ಕಾರ್ಯಗತಗೊಳಿಸುವುದು. ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಜೈವಿಕ ಅನಿಲ ಉತ್ಪಾದನೆ ಘಟಕಗಳನ್ನು
ಗ್ರಾಮಂತರ ಪ್ರದೇಶದಲ್ಲಿ ತೆರೆಯಲು ಉತ್ತೇಜಿಸುವುದು .
6. ಸಹಕಾರದ ಬೆಳವಣಿಗಾಗಿ ಯುವಜನತೆಯನ್ನು ರೂಪಿಸುವುದು.
ಯುವ ಜನತೆಯನ್ನು ಪ್ರೇರೇಪಿಸುವುದು ಮತ್ತು ಅವರಿಗೆ ಸ್ಪೂರ್ತಿ ನೀಡಲು , ಅದರಲ್ಲಿಯೂ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ , ಸಹಕಾರಿ ಉದ್ಯಮ ಶೀಲತೆಯಿಂದ ದೀರ್ಘ ಅವಧಿಯ ವೃತ್ತಿ ಪಡೆಯುವಂತಾಗಲು : ರಾಷ್ಟ್ರಾದ್ಯಂತ ಚಳುವಳಿ ಯನ್ನು ಜಿಲ್ಲಾ ಮಟ್ಟದಲ್ಲಿ ಆರಂಭಿಸಬೇಕಿದೆ. ಇದಕ್ಕಾಗಿ ಯುವ ಜನತೆಯ ಕಾರ್ಯಗಾರ , ನಾಟಕ, ಚಲನಚಿತ್ರ , ವಿಡಿಯೋ ಪ್ರದರ್ಶನ ಏರ್ಪಡಿಸುವುದು. ಶಾಲೆ, ಕಾಲೇಜು, ಸಾಮಾಜಿಕ ಮಾಧ್ಯಮಗಳಲ್ಲಿ ಯಶಸ್ವಿ ಕತೆಗಳನ್ನು ಹಂಚಿಕೊಳ್ಳುವುದು. ಉದ್ದೇಶಿತ ಉತ್ತುಂಗ ಸಂಸ್ಥೆಯು ರಾಜ್ಯ ಮಟ್ಟದ ಸಹಕಾರ ಶಿಕ್ಷಣ ಸಂಸ್ಥೆ , ರಾಷ್ಟ್ರ / ರಾಜ್ಯ ಮಹಾಮಂಡಳ ಗಳ ಬೆಂಬಲ , ಸಹಯೋಗದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಸಹಕಾರ ಸಂಘಗಳನ್ನು ವೃತ್ತಿಪರತೆಯಿಂದ ವ್ಯವಸ್ಥಾಪನೆ ನಡೆಸಲು ಭವಿಷ್ಯದ ಸಹಕಾರ ನಾಯಕರನ್ನು ಸೃಷ್ಟಿಸಲು ಪ್ರೇರೇಪಿಸಲಾಗುತ್ತದೆ.
ಪ್ರಮಾಣಿಕೃತ , ಅತ್ಯುತ್ತಮ – ಗುಣ ಮಟ್ಟದ , ಸಹಕಾರ ಕೇಂದ್ರಿಕೃತ ಪಠ್ಯಕ್ರಮಗಳನ್ನು ಅಭಿವೃದ್ಧಿ ಪಡಿಸಲು ಪ್ರೇರೇಪಿಸುವುದು ಮತ್ತು ಅಧಿಕಾರಯುತ ವಿಷಯ (ಹೂರಣ)ವನ್ನು ಹೊಂದಿರುವುದು : ವೃತ್ತಿಪರ ಡಿಪ್ಲೊಮ , ಡಿಗ್ರಿ (ಸ್ನಾತಕ)ಮತ್ತು ದೃಡೀಕೃತ ತರಗತಿಗಳು ಸಹಕಾರ ಕೇಂದ್ರಿ ಕೃತವಾಗಿರುವಂತೆ ಗುರುತಿಸಿ, ರೂಪಿಸಿ, ಅಭಿವೃದ್ಧಿ ಪಡಿಸುವುದು. ಇದನ್ನು ರಾಷ್ಟ್ರ/ರಾಜ್ಯ ಮಹಾಮಂಡಳ ಗಳನ್ನು ಒಳಗೊಂಡಂತೆ ವಿವಿಧ ಸ್ತರದ ಭಾಗೀದಾರರ ಸಲಹೆ ಪಡೆದು ರಚಿಸಲಾಗುತ್ತದೆ. ಇದರಿಂದ ಅವರು ಹೊರ ಬಂದಂತೆ ಅವರಿಗೆ ತಕ್ಕ ಕೆಲಸಗಳು ಸಹಕಾರ ವಲಯದಲ್ಲಿ ಲಭ್ಯವಾಗುತ್ತವೆ.
ಸಾಮಾಜಿಕ ವಿಜ್ಞಾನದಲ್ಲಿ ಸ್ನಾತಕ ಮತ್ತು ಡಿಪ್ಲೊಮ ಒದಗಿಸುವ ಅತ್ಯುನ್ನತ ಶಿಕ್ಷಣ ಸಂಸ್ಥೆಗಳು ಉತ್ತುಂಗ ಸಹಕಾರ ಸಂಸ್ಥೆಗಳ ಡಿಪ್ಲೊಮೋ , ಡಿಗ್ರಿ, ಸರ್ಟಿಫೈಡ್ ತರಗತಿಗಳ ನ್ನು ನಡೆಸಬಹುದು ಇದರಿಂದ ಸಹಕಾರ ತರಗತಿ( ಪಠ್ಯ ಕ್ರಮಗಳು ) ಸುಲಭವಾಗಿ ಲಭ್ಯವಾಗುವಂತಾಗುತ್ತದೆ.
ಯುವಜನತೆ ಮತ್ತು ಮಹಿಳೆಯರು ಸಹಕಾರ ವಲಯದಲ್ಲಿ ಕುಶಲತೆ ಪಡೆಯುವುದು ಮತ್ತು ಕುಶಲತೆಯನ್ನು ಉತ್ತಮ ಗೊಳಿಸಿಕೊಳ್ಳಲು ಸೂಕ್ತ ಪರಿಸರ ನಿರ್ಮಾಣ ಮಾಡುವುದು. ಇದಕ್ಕಾಗಿ , ತಾಂತ್ರಿಕ ಅಥವ ಇತರೆ ತಳಹಂತದ ಸೌಕರರಿಗೆ ಸ್ಥಾಪಿಸಿರುವ ಕೇಂದ್ರ / ರಾಜ್ಯ ಸರ್ಕಾರದ ಆರ್ಥಿಕತೆ ಯೊಂದಿಗೆ/ ಸ್ಥಾಪನೆ ಯಾಗಿರುವ ಸಂಸ್ಥೆಗಳ ದತ್ತಾಂಶ ಸಂಗ್ರಹಣೆ. ಪಾಲುಗಾರಿಕೆ ಮತ್ತು ಎಂ.ಓ. ಯು ಮೂಲಕ ಅಖಿಲ ಭಾರತ ಮಟ್ಟದಲ್ಲಿ ತರಬೇತಿ ಪರಿಸರ ನಿರ್ಮಾಣ . ಗ್ರಾಮೀಣ ಮತ್ತು ಅರೆ ನಗರ ಪ್ರದೇಶದ ಯುವ ಜನತೆಯನ್ನು ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರಸ್ಥರನ್ನಾಗಿ ಮಾಡಲು ಕ್ರಮವಹಿಸುವುದು.
ಸಹಕಾರ ವಲಯದಲ್ಲಿ , ಸಹಕಾರ ವಲಯ ವೃತ್ತಿಗಾರರು , ಸಂಪನ್ಮೂಲ ವ್ಯಕ್ತಿಗಳ , ಗುಣಮಟ್ಟದ ಉಪನ್ಯಾಸಕರ , ತರಭೇತಿದಾರರ, ಭೇಟಿ ನೀಡುವ ಅಧ್ಯಾಪಕರ ಲಭ್ಯತೆ ಯನ್ನು ಖಾತ್ರಿಗೊಳಿಸಿಕೊಳ್ಳುವುದು : ಸಂಯೋಜಿತ ಸಂಸ್ಥೆಗಳಲ್ಲಿ ಪ್ರಮಾಣಿಕೃತ ನೇಮಕಾತಿ ವ್ಯವಸ್ಥೆ ರೂಪಿಸುವುದು. ಉಪನ್ಯಾಸಕರ, ತರಬೇತಿದಾರರ, ಮತ್ತು ಭೇಟಿ ಅಧ್ಯಾಪಕರ , ಅರೆಕಾಲಿಕ ಸಂಪನ್ಮೂಲ ವ್ಯಕ್ತಿಗಳ ವಿದ್ಯಾರ್ಹತೆ, ಉಪನ್ಯಾಸ ಅನುಭವ ಇತರೆ, ಮಾನದಂಡಗಳನ್ನು ನಿಗದಿ ಪಡಿಸುವುದು. ಸಂಯೋಜಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಆಕರ್ಷಕ ವೇತನ ನಿಗದಿ ಪಡಿಸುವುದು.
ಸಹಕಾರ ವಲಯದಲ್ಲಿ ಹಾಲಿ ಉಪನ್ಯಾಸಕರ ಶೈಕ್ಷಣಿಕ ಶಕ್ತಿ ಯನ್ನು ವೃದ್ಧಿ ಗೊಳಿಸುವುದು ಮತ್ತು ದೃಡೀಕೃತ ಉಪನ್ಯಾಸಕರ ವೃಂದ ವನ್ನು ರಚಿಸುವುದು. ಸಹಕಾರ ಉಪನ್ಯಾಸಕರ , ಸಂಪನ್ಮೂಲ ವ್ಯಕ್ತಿಗಳ ತರಭೇತುದಾರರ ಮಾಹಿತಿ ,ಅವರ ಸ್ಥಳ, ಅನುಭವ, ಮತ್ತು ಅವರ ವಿಶೇಷ ಪರಿಣತಿ ವಲಯ ವನ್ನು ಒಳಗೊಂಡಂತೆ ರಾಷ್ಟ್ರಮಟ್ಟದ ದತ್ತಾಂಶ ಸಂಗ್ರಹಣೆ ಮಾಡುವುದು.
ಸಹಕಾರ ಸಂಸ್ಥೆಗಳು ಸುಲಭವಾಗಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಅಭ್ಯರ್ಥಿಗಳಿಗೆ ಸರಳವಾಗಿ ಉದ್ಯೋಗ ದೊರಕುವಂತ ಪರಿಸರ ನಿರ್ಮಾಣ ಮಾಡುವುದು. ಇದಕ್ಕಾಗಿ, ರಾಷ್ಟ್ರಮಟ್ಟದಲ್ಲಿ ಡಿಜಿಟಲ್ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸುವುದು. ಈ ಜವಾಬ್ದಾರಿಯನ್ನು ಉದ್ದೇಶಿತ ಉತ್ತುಂಗ ಸಂಸ್ಥೆಗೆ ವಹಿಸಲಾಗುತ್ತದೆ. ಇದು ಸಹಕಾರ ವಲಯದಲ್ಲಿ
ಉದ್ಯೋಗಾಸಕ್ತರಿಗೆ ಅನುಕೂಲ ಕಲ್ಪಿಸುತ್ತದೆ.
ಈ ಭಾರತ ಸರ್ಕಾರದ ಸಹಕಾರ ನೀತಿ -2025 ರ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ‘ ಸಹಕಾರ ನೀತಿಯ ರಾಷ್ಟ್ರೀಯ ಚಾಲನ ಸಮಿತಿ ‘ ಮತ್ತು ಕೇಂದ್ರ ಸಹಕಾರದ ಕಾರ್ಯದರ್ಶಿ ರವರ ಅಧ್ಯಕ್ಷತೆಯಲ್ಲಿ ‘ ನೀತಿ ಅನುಷ್ಟಾನ ಮತ್ತು ಉಸ್ತುವಾರಿ ಸಮಿತಿ ‘ಯನ್ನು ರಚಿಸಲಾಗುವುದು.

ಶಶಿಧರ. ಎಲೆ
ಸಹಕಾರ ಸಂಘಗಳ ಅಪರ ನಿಬಂಧಕರು ( ನಿವೃತ್ತ) ನಂ281,
ನೇಸರ ಬಾಲಾಜಿ ಹೆಚ್ ಬಿ ಸಿ ಎಸ್ ಲೇಔಟ್ ವಾಜರಹಳ್ಳಿ ಕನಕಪುರ ರಸ್ತೆ ಬೆಂಗಳೂರು 560109