ಸಹಕಾರ ಸಂಘಗಳ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ, ಮತ್ತು ಆರ್ಥಿಕ ಸ್ಥಿರತೆ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ವಿಶೇಷವಾಗಿ ಸಹಕಾರಿ ಕೃಷಿಯನ್ನು ಉತ್ತೇಜಿಸುವಲ್ಲಿ ರಾಜ್ಯ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತದೆ. ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸುವ ಕರ್ತವ್ಯ ಸಹಕಾರಿ ಚಳುವಳಿಯನ್ನು ಸಕ್ರಿಯವಾಗಿ ಉತ್ತೇಜಿಸುವುದು ಮತ್ತು ಬೆಂಬಲಿಸುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಇದರಲ್ಲಿ ಸಹಕಾರಿ ಕೃಷಿಯನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ, ರಾಜ್ಯಾದ್ಯಂತ ಸಹಕಾರಿ ಸಂಘಗಳ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದೂ ಮುಖ್ಯ. ಸಹಕಾರಿ ಸಂಘಗಳಲ್ಲಿ ನೇರ ಭಾಗವಹಿಸುವಿಕೆ ಸೀಮಿತ ಹೊಣೆಗಾರಿಕೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಗಾಗಿ ಅಗತ್ಯ ‘ದುಡಿಯುವ ಬಂಡವಾಳ’ ಒದಗಿಸುವ ಉದ್ದೇಶದಿಂದ ಆರಂಭವಾದ ಸಹಕಾರ ಸಂಘಗಳು, 1904ರ ಭಾರತದ ಪತ್ತಿನ ಸಹಕಾರ ಸಂಘಗಳ ಕಾಯ್ದೆ ಜಾರಿಗೆ ಬಂದದ್ದೆ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಅಗತ್ಯ ದುಡಿಯುವ ಬಂಡವಾಳ ಅಗತ್ಯತೆ ಪೂರೈಸುವುದಕ್ಕಾಗಿ ಎಂದರೆ ತಪ್ಪಾಗುವುದಿಲ್ಲ. ಈ ಕಾಯ್ದೆ ಜಾರಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ‘ಸೇವಾ ಸಹಕಾರ ಸಂಘಗಳು ‘ಆರಂಭವಾದವು. ಇದರ ಮುಖ್ಯ ಉದ್ದೇಶ ‘ಸದಸ್ಯರಲ್ಲಿ ಥ್ರಿಫ್ಟ್ (ಕಡ್ಡಾಯ ಸಣ್ಣ ಉಳಿತಾಯ )
ಸಹಕಾರವೆನ್ನುವುದು ಮಾನವನ ಜೀವನದಲ್ಲಿ ತಲತಲಾಂತರಗಳಿಂದಲೂ ರೂಢಿಯಲ್ಲಿರುವ ನಡೆದುಕೊಂಡು ಬಂದಿರುವ ವಿಷಯ. ಈ ಸಹಕಾರ ಮನೋಭಾವನೆಗೆ ಸಾಂಘಿಕ ರೂಪವನ್ನು, ತತ್ವವನ್ನು ಅಳವಡಿಸಿಕೊಂಡು ಪರಸ್ಪರ ನೆರವಿನೊಂದಿಗೆ ಬದುಕುವ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ಸಾಧಿಸಲು ಸರ್ವರಿಗೂ ಅವಕಾಶ ಒದಗಿಸುವ ಉದ್ದೇಶದಿಂದ ಸಹಕಾರ ಸಂಸ್ಥೆಗಳು ಪ್ರಾರಂಭಗೊಂಡವು. ಮೊದಲಿಗೆ ಆರ್ಥಿಕ ಸಬಲತೆಯನ್ನೇ ಮಾನದಂಡವಾಗಿಟ್ಟುಕೊಂಡು ಬೆಳೆದುಬಂದ ಸಹಕಾರ ಕ್ಷೇತ್ರ ನಂತರದ ದಿನಗಳಲ್ಲಿ ಅನೇಕ ಸಾಮಾಜಿಕ ಅವಶ್ಯಕತೆಗನುಗುಣವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವೈಶಿಷ್ಠಪೂರ್ಣ ಉದ್ದೇಶಗಳನ್ನು ಹೊಂದುತ್ತ ಬೆಳೆದು ಬಂದಿತು. ದೇಶದ ಮೊದಲ ಸಹಕಾರ ಸಂಘ ಕರ್ನಾಟಕದಲ್ಲಿ ನೋಂದಣಿ
ಸಹಕಾರ ಸಚಿವಾಲಯ, ಸಹಕಾರಿ ವಿಶ್ವವಿದ್ಯಾಲಯದೊಂದಿಗೆ ಬೆಳವಣಿಗೆಯ ಹೊಸ ಯುಗ. ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯವನ್ನು ಆರಂಭಿಸಿ, ಗೃಹ ಸಚಿವರೂ ಆಗಿರುವ ಅಮಿತ್ ಷಾ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಿದ ಮೇಲೆ ಭಾರತದ ಸಹಕಾರಿ ರಂಗದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅದರಲ್ಲೂ ಸಹಕಾರ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ನಿನ್ನೆಯಷ್ಟೇ ಸಂಸತ್ನಲ್ಲಿ ಸಹಕಾರ ಸಚಿವರು ಘೋಷಣೆ ಮಾಡಿರುವ ಸಹಕಾರಿ ಟ್ಯಾಕ್ಸಿ ವ್ಯವಸ್ಥೆಯು ಭಾರತದ ಸಹಕಾರಿ ವಲಯದಲ್ಲಿ ಕ್ರಾಂತಿಕಾರಿ ಬೆಳವಣಿಗೆಯ ಸುಳಿವು ನೀಡಿದೆ. ಭಾರತದ
ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವರೆಗೂ ಮುಟ್ಟುವ ವ್ಯವಸ್ಥೆಯೆಂದರೆ ಅದು ಸಹಕಾರಿ ಕ್ಷೇತ್ರ. ಪ್ರಜಾಪ್ರಭುತ್ವ ರೀತಿಯ ವ್ಯವಸ್ಥೆ. ಎಲ್ಲರೂ ಸಮಾನರು. ಒಂದು ಶೇರು ಇದ್ದವನಿಗೂ ಒಂದು ಮತ. ಸಾವಿರ ಶೇರು ಹೊಂದಿದ ಸದಸ್ಯನಿಗೂ ಮತದಾನದ ಸಮಯದಲ್ಲಿ ಒಂದೇ ಮತದ ಹಕ್ಕು. ಗ್ರಾಮೀಣ ಪ್ರದೇಶದಲ್ಲಿ ತನ್ನ ಅಸ್ತಿತ್ವ ಹೊಂದಿರುವ ಒಂದು ಸಹಕಾರಿ ಸಂಘ ಒಂದು ಪ್ರದೇಶದ ಪರಿಮಿತಿಯಲ್ಲಿ ಕೆಲಸ ನಿರ್ವಹಿಸುತ್ತದೆ, ತನ್ನ ಸದಸ್ಯರಿಗೆ ಸೇವೆ ಒದಗಿಸುತ್ತದೆ. ತನ್ನ ಸದಸ್ಯರಿಂದ ಠೇವಣಿ, ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸಿ
ಭಾರತೀಯ ಪರಂಪರೆಯಲ್ಲಿ ಸಹಕಾರ ಮತ್ತು ಸಮನ್ವಯ: ಭಾರತೀಯರ ಕೌಟುಂಬಿಕತೆಯ ನಿತ್ಯ ಜೀವನ ಪದ್ಧತಿಯಲ್ಲಿ ಶ್ರೀಮಂತ ಮೌಲ್ಯಾಧಾರಿತ ಸಹಕಾರ ಮತ್ತು ಸಮನ್ವಯವು ಹಾಸು ಹೊಕ್ಕಾಗಿದೆ. ಭಾರತೀಯರ ಸಾಂಪ್ರಾದಾಯಿಕ ಕುಟುಂಬ ವ್ಯವಸ್ಥೆಯು “ವಸುದೈವ ಕುಟುಂಬಕಂ’ನ ಮೂಲ ತತ್ವದ ಆಧಾರದ ಮೇಲೆ ನಿರ್ಮಾಣವಾಗಿದ್ದು ಭೂಮಿಯ ಮೇಲಿರುವ ಸಕಲ ಮಾನವರು, ಮಾನವ ಜೀವ ಜಂತುಗಳು ಒಂದೇ ಕುಟುಂಬದವರು ಎಂಬ ನಂಬಿಕೆಯ ಮೇಲೆ, ಗಟ್ಟಿಯಾದ ವಿಶ್ವಾಸದ ತಳಹದಿಯ ಮೇಲೆ, ಭಾಂಧವ್ಯಗಳಿಂದ ಬೆಸೆದ ಬಳ್ಳಿಗಳ ಒಟ್ಟೂ ಗುಜ್ಜಿಗಳ ಸಮೂಹದಿಂದ ನಿರ್ಮಾಣವಾಗಿದೆ. ವಸು ಎಂದರೆ ಭೂ ಧರೆ,
ಕಿರು ಹಣಕಾಸು ಈಗ ಸುದ್ದಿಯಲ್ಲಿದೆ. ಸುದ್ದಿಯಾಗಲು ಕಾರಣ , ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿಗಳು ಮತ್ತು ಸಂಸ್ಥೆಗಳು ಸಾಲ ವಸೂಲಾತಿಗೆ ಅನುಸರಿಸುತ್ತಿರುವ ಬಲವಂತದ ಕ್ರಮಗಳು. ಇದುವರೆಗೆ ಕರ್ನಾಟಕದಲ್ಲಿ ಕಂಡರಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಆಂಧ್ರಪದೇಶದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ಸಂಸ್ಥೆಗಳು ಲಾಭವನ್ನೇ ಗುರಿಯಾಗಿಸಿಕೊಂಡು ಕಾರ್ಯವೆಸಗುತ್ತದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಅತಿಯಾಗಿ ವಿಧಿಸುವ ಬಡ್ಡಿದ್ದರ , ಸಾಲ ಪಡೆಯುವ ಶಕ್ತಿ ಮಿಾರಿ ಬಲವಂತದ ಅತಿ ಹೆಚ್ಚಿನ ಸಾಲವಿತರಣೆ. ಸಾಲ ಬಳಕೆಯ ಉದ್ದೇಶ ಉತ್ಪಾದಕತೆಯಲ್ಲಿ ತೊಡಗದಿರುವುದು. ಈ
ಪೀಠಿಕೆ. : ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಮುಂತಾದ ಪದಮಂಜಗಳೇ ಸಾಂಘಿಕ ಬದುಕಿನ ಮೂಲ ಧ್ವನಿ. ಮನುಷ್ಯನ ಸಂಘ ಜೀವನಕ್ಕೆ ಈ ಮೂಲ ಧ್ವನಿಯೇ ಬುನಾದಿ.. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ಮರಣವೇ ಮೊದಲಾದ ದುರಂತಗಳಲ್ಲಿ ಮಾನವ ಸಾಂಘಿಕ ಸಹಕಾರಿ ಬಗೆಯಲ್ಲಿ ಒಂದಾಗುತ್ತಿದ್ದ ಹಿಂದಿನ ಕಾಲದಲ್ಲಿ ಸಾಂಘಿಕ, ಸಹಕಾರಿ ತತ್ವ ಅಡಗಿತ್ತು ಎಂಬುದಕ್ಕೆ ಈ ಮಾತುಗಳು ಪುಷ್ಠಿ ನೀಡುತ್ತವೆ. ತನ್ನ ಮೂಲ ಧ್ವನಿ ತತ್ವಗಳೊಂದಿಗೆ ಕಳೆದ ಶತಮಾನಕ್ಕೆ ಮುಂಚಿತವಾಗಿ ಆಸಂಘಟಿತ ರೂಪದಲ್ಲಿ ಪ್ರಚಲಿತವಾಗಿತ್ತು. ಶ್ರೀ ಉಗಮ
ಪೀಠಿಕೆ: (ದಿವಗಂತ ಜಿ ಎಸ್ ಹೆಗಡೆ ಅಜ್ಬೀಬಳರವರು 1963 ರಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ 1983 ರಿಂದ 1989ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ಸಹಕಾರಿ ಇತಿಹಾಸದಲ್ಲಿ ಅಗ್ರ ಮಾನ್ಯ ಸಹಕಾರಿಗಳ ಸಾಲಿನಲ್ಲಿ ರಾಜಿಸಿದ್ದಾರೆ ಇವರ ಕಾಲಾವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಪ್ರಗತಿ ಯಿಂದ ಪ್ರಗತಿಗೆ ದಾಪುಗಾಲು ಹಾಕಿರುವುದು ಸರ್ವ ವಿಧಿತ. ಇವರ ಸಾಧನೆಗಳ ಚಿಕ್ಕ ಚಿತ್ರಣ ಈ ಕೆಳಗೆ ನೀಡಲಾಗಿದೆ) ಪ್ರಾಯಶ ಸಹಕಾರಿ ರಂಗ ಅಜ್ಬೀಬಳರಂತೆ, ಅಜ್ಬೀಬಳರನ್ನು ಸುದೀರ್ಘಕಾಲ, ಅಜ್ಬೀಬಳರ ಹಾಗೆ
ನಾವು ಇಂದು ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ೧೮ನೇ ಶತಮಾನದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ನಂತರ ವಿಶ್ವವನ್ನು ಹೆಚ್ಚಾಗಿ ಪ್ರಭಾವಿಸಿದ್ದು ಮಾಹಿತಿ ಕ್ರಾಂತಿ. ತಂತ್ರಜ್ಞಾನದ ಬೆಳವಣಿಗೆ, ಅಂತರ್ಜಾಲದ ಉಗಮ, ವಿಶ್ವವ್ಯಾಪಿ ಜಾಲಗಳ ರಚನೆ – ಮಾಹಿತಿ ಕ್ರಾಂತಿಗೆ ಕಾರಣವಾಯಿತು. ಪ್ರಸ್ತುತ ನಾವು ಇದ್ದ ಜಾಗದಿಂದಲೇ ಬೇಕಾದ ಮಾಹಿತಿಗಳನ್ನು ಪಡೆಯುವ ಮಟ್ಟಕ್ಕೆ ಮಾಹಿತಿ ತಂತ್ರಜ್ಞಾನ ಮುಂದುವರೆದಿದೆ. ಗಣಕ ಯಂತ್ರಗಳಿದ್ದಲ್ಲಿ ಮಾಹಿತಿ ಪಡೆಯುವುದು ಸುಲಭ ಎಂಬ ನಂಬಿಕೆಯಿಂದ ನಾವೀಗ ಹೊರಬಂದು, ಮೊಬೈಲ್ಗಳಲ್ಲಿ, ಟ್ಯಾಬ್ಲೆಟ್ಗಳಲ್ಲಿ ಕೂಡ ಮಾಹಿತಿ ಪಡೆಯಬಹುದು ಎನ್ನುವುದನ್ನು ಕಂಡುಕೊಂಡಿದ್ದೇವೆ.