ಮಾನವ ಸಂಪನ್ಮೂಲ ನಿರ್ವಹಣೆಗಿಂತಲೂ, ಇಂದು ಬೇಕಾಗಿರುವುದು ಮಾನವ ಸಂಬಂಧಗಳ ನಿರ್ವಹಣೆ. ಇದನ್ನೇ ಅಂತರಿಕ ನಂಬಂಧಗಳು ಎಂದು ಕರೆಯಲಾಗಿದೆ. ಸಹಕಾರ ಸಂಸ್ಥೆಗಳು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬದ್ಧವಾಗಿರುವ ಸಂಸ್ಥೆಗಳಾಗಿದೆ. ಈ ಸಂಸ್ಥೆಗಳ ಯಶಸ್ಸು ಎಂಬುದು ಅಂತರಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಡುವಿನ ಉತ್ತಮ ಸಂಬಂಧಗಳ ಮೇಲೆ ಅವಲಂಬಿತವಾಗಿದೆ. ಸಹಕಾರದ ತತ್ವಗಳನ್ನೇ ಆಧಾರವಾಗಿಟ್ಟುಕೊಂಡಿರುವ ಈ ಸಹಕಾರ ಸಂಸ್ಥೆಗಳಲ್ಲಿ ವಿಶ್ವಾಸ, ಪರಸ್ಪರ ಸಹಕಾರ, ಸಮಾನತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿ ಮುಂತಾದ ಮಾನವೀಯ ಮೌಲ್ಯಗಳು ಅತ್ಯಂತ
ಸಹಕಾರ ಚಳುವಳಿ ಉಗಮ ಮತ್ತು ಯಶಸ್ವಿ ಕಾರ್ಯಾಚರಣಿ ಆರಂಭವಾದದ್ದು ‘ಬಳಕೆದಾರರ ಸಹಕಾರ ಸಂಘಗಳ ಮೂಲಕ ಇದಕ್ಕೆ ಕಾರಣರಾದವರು ರಾಕ್ ಡೇಲ್ ಅಗ್ರಗಾಮಿಗಳು, ಇಂಗ್ಲೆಂಡ್ನಲ್ಲಿ ಆರಂಭವಾದ ಈ ಚಳುವಳಿ ಕಾರ್ಮಿಕರ ಆರ್ಥಿಕ ಹಿತಾಸಕ್ತಿ ಕಾಪಾಡಿದ್ದಲ್ಲದೇ ಶೈಕ್ಷಣಿಕ , ಸಾಮಾಜಿಕ , ಬೆಳವಣಿಗೆಗೂ ಕಾರಣವಾಗಿದ್ದು ಈಗ ಇತಿಹಾಸ. ಸಹಕಾರ ಚಳುವಳಿ ಬಳಕೆದಾರ ವಲಯ ಅಲ್ಲದೆ ಕೃಷಿ ಪತ್ತು, ಕೃಷಿ ಪತ್ತೇತರ , ಕೃಷಿಉತ್ಪನ್ನ , ಹೈನುಗಾರಿಕೆ , ಇತರೆ ಕೃಷಿ ಅವಲಂಭಿತ ಉತ್ಪನ್ನ ಮಾರಾಟ , ಕೈಗಾರಿಕೆ ಹೀಗೆ
ಹಿನ್ನೆಲೆ: ದೇಶಾದ್ಯಂತ ಸಾರ್ವಜನಿಕರಿಂದ ಅಪಾರ ಮೊತ್ತದ ಠೇವಣಿ ಪಡೆದು ಜನರಿಗೆ ವಂಚನೆ ಮಾಡಿ ಕಣ್ಮರೆಯಾಗುತ್ತಿರುವ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸಂದರ್ಭದಲ್ಲಿ ಠೇವಣಿದಾರರ ಹಿತ ರಕ್ಷಣೆಗೆ ಸೂಕ್ತ ಕಾಯ್ದೆ ವ್ಯವಸ್ಥೆ ಇಲ್ಲದಿರುವುದರ ಕಾರಣವನ್ನು ಸರಕಾರ ಗಮನಿಸಿದೆ. ವಂಚಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪ್ರಸ್ತುತ ಕಾನೂನುಗಳಲ್ಲಿನ ಲೋಪ ದೋಷಗಳ ದುರ್ಲಾಭ ಪಡೆಯುತ್ತಿರುವುದನ್ನು ಹಾಗೂ ಬೇರೆ ಬೇರೆ ನಿಯಂತ್ರಕ ಸಂಸ್ಥೆಗಳ ನಡುವಿನ ಸಾಮರಸ್ಯದ ಕೊರತೆ, ಬೇರೆ ಬೇರೆ ರಾಜ್ಯಗಳ ನಡುವಿನ ಸಾಮರಸ್ಯದ ಕೊರತೆಗಳು
ಪರಿಚಯ: ಯುವಜನರು ಸಹಕಾರಿ ಸಂಘಗಳಿಗೆ ಒಂದು ಪ್ರಮುಖ ಆಸ್ತಿಯಾಗಿದ್ದಾರೆ. ಏಕೆಂದರೆ ಅವರು ಸದಸ್ಯತ್ವದ ಪೀಳಿಗೆಯ ನವೀಕರಣವನ್ನು ಖಚಿತಪಡಿಸುವುದಲ್ಲದೆ, ಸಹಕಾರಿ ಸಂಘಗಳ ಭವಿಷ್ಯದ ನಾಯಕರಾಗುತ್ತಾರೆ. ಜೊತೆಗೆ, ಅವರು ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದ್ದರಿಂದ ಹೊಸ ತಂತ್ರಜ್ಞಾನಗಳೊಂದಿಗೆ ಕೆಲಸ ಮಾಡಲು ಮತ್ತು ಸಾಮಾನ್ಯವಾಗಿ ಹಳೆಯ ಸಹಕಾರಿ ಸಂಘದ ಸದಸ್ಯರಿಗಿಂತ ಹೆಚ್ಚಿನ ಮಟ್ಟದ ಶಿಕ್ಷಣವನ್ನು ಹೊಂದಲು ಹೆಚ್ಚು ಒಲವು ತೋರುತ್ತಾರೆ. ವಾಸ್ತವವಾಗಿ, ಯುವಕರು ಆರಂಭಿಕ ಹಂತಗಳಲ್ಲಿ ಸಹಕಾರಿ ಚಳವಳಿಯಲ್ಲಿ ಹೆಚ್ಚಿನ ಉತ್ಸಾಹವನ್ನು ತೋರಿಸಿದ್ದಾರೆ ಮತ್ತು ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪದ್ದತಿಯಿಂದ ಆಡಳಿತದ ರೂವಾರಿಗಳನ್ನು ಆಯ್ಕೆಮಾಡುವುದು ಪದ್ದತಿ. ಮತದಾನಕ್ಕೆ ಅರ್ಹರು ಮತದಾನ ಮಾಡಿ ಬಹುಮತದಿಂದ ಆಯ್ಕೆಯಾದವರು ಸಂಘಸಂಸ್ಥೆˌ ಪಂಚಾಯತ್ ರಾಜ್ˌ ರಾಜ್ಯˌ ಕೇಂದ್ರ ಸರಕಾರ ಮುಂತಾದವುಗಳ ಆಡಳಿತದ ಸೂತ್ರದಾರರು. ಕಾನೂನು ˌನಿಯಮಗಳ ಅಡಿಯಲ್ಲಿ ಚುನಾವಣೆಗಳು ನಡೆಯುವುದು ನಮಗೆಲ್ಲ ತಿಳಿದ ವಿಚಾರ. ಹಾಗೆ ಆಯ್ಕೆಯಾದವರ ಅಧಿಕಾರ ಅವಧಿ ಸಾಮಾನ್ಯವಾಗಿ ಹೆಚ್ಚಿನ ವ್ಯವಸ್ಥೆಯಲ್ಲಿ ಐದು ವರ್ಷ. ಲೋಕಸಭೆˌ ವಿಧಾನಸಭೆˌ ತಾಲೂಕುಪಂಚಾಯತುˌ ಜಿಲ್ಲಾ ಪಂಚಾಯತುಗಳಲ್ಲಿ ರಾಜಕೀಯಪಕ್ಷಗಳ ಅಧಿಕೃತ ಚಿಹ್ನೆಗಳಡಿ ಸ್ಪರ್ಧೆಗೆ ಕಾನೂನಿನಲ್ಲಿ ಅವಕಾಶವಿದ್ದು ಪಕ್ಷರಾಜಕಾರಣವನ್ನು ಒಪ್ಪತಕ್ಕ ವಿಚಾರ.ಕಾನೂನು ನಿಯಮಗಳ
ಸಹಕಾರ ಸಂಘಗಳ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ, ಮತ್ತು ಆರ್ಥಿಕ ಸ್ಥಿರತೆ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ವಿಶೇಷವಾಗಿ ಸಹಕಾರಿ ಕೃಷಿಯನ್ನು ಉತ್ತೇಜಿಸುವಲ್ಲಿ ರಾಜ್ಯ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತದೆ. ಸಹಕಾರಿ ಸಂಸ್ಥೆಗಳನ್ನು ಉತ್ತೇಜಿಸುವ ಕರ್ತವ್ಯ ಸಹಕಾರಿ ಚಳುವಳಿಯನ್ನು ಸಕ್ರಿಯವಾಗಿ ಉತ್ತೇಜಿಸುವುದು ಮತ್ತು ಬೆಂಬಲಿಸುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಇದರಲ್ಲಿ ಸಹಕಾರಿ ಕೃಷಿಯನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ, ರಾಜ್ಯಾದ್ಯಂತ ಸಹಕಾರಿ ಸಂಘಗಳ ಸುಸ್ಥಿರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದೂ ಮುಖ್ಯ. ಸಹಕಾರಿ ಸಂಘಗಳಲ್ಲಿ ನೇರ ಭಾಗವಹಿಸುವಿಕೆ ಸೀಮಿತ ಹೊಣೆಗಾರಿಕೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎಂದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಗಾಗಿ ಅಗತ್ಯ ‘ದುಡಿಯುವ ಬಂಡವಾಳ’ ಒದಗಿಸುವ ಉದ್ದೇಶದಿಂದ ಆರಂಭವಾದ ಸಹಕಾರ ಸಂಘಗಳು, 1904ರ ಭಾರತದ ಪತ್ತಿನ ಸಹಕಾರ ಸಂಘಗಳ ಕಾಯ್ದೆ ಜಾರಿಗೆ ಬಂದದ್ದೆ ಗ್ರಾಮೀಣ ಪ್ರದೇಶದ ರೈತರಿಗೆ ಕೃಷಿ ಅಗತ್ಯ ದುಡಿಯುವ ಬಂಡವಾಳ ಅಗತ್ಯತೆ ಪೂರೈಸುವುದಕ್ಕಾಗಿ ಎಂದರೆ ತಪ್ಪಾಗುವುದಿಲ್ಲ. ಈ ಕಾಯ್ದೆ ಜಾರಿಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ‘ಸೇವಾ ಸಹಕಾರ ಸಂಘಗಳು ‘ಆರಂಭವಾದವು. ಇದರ ಮುಖ್ಯ ಉದ್ದೇಶ ‘ಸದಸ್ಯರಲ್ಲಿ ಥ್ರಿಫ್ಟ್ (ಕಡ್ಡಾಯ ಸಣ್ಣ ಉಳಿತಾಯ )
ಸಹಕಾರವೆನ್ನುವುದು ಮಾನವನ ಜೀವನದಲ್ಲಿ ತಲತಲಾಂತರಗಳಿಂದಲೂ ರೂಢಿಯಲ್ಲಿರುವ ನಡೆದುಕೊಂಡು ಬಂದಿರುವ ವಿಷಯ. ಈ ಸಹಕಾರ ಮನೋಭಾವನೆಗೆ ಸಾಂಘಿಕ ರೂಪವನ್ನು, ತತ್ವವನ್ನು ಅಳವಡಿಸಿಕೊಂಡು ಪರಸ್ಪರ ನೆರವಿನೊಂದಿಗೆ ಬದುಕುವ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ಸಾಧಿಸಲು ಸರ್ವರಿಗೂ ಅವಕಾಶ ಒದಗಿಸುವ ಉದ್ದೇಶದಿಂದ ಸಹಕಾರ ಸಂಸ್ಥೆಗಳು ಪ್ರಾರಂಭಗೊಂಡವು. ಮೊದಲಿಗೆ ಆರ್ಥಿಕ ಸಬಲತೆಯನ್ನೇ ಮಾನದಂಡವಾಗಿಟ್ಟುಕೊಂಡು ಬೆಳೆದುಬಂದ ಸಹಕಾರ ಕ್ಷೇತ್ರ ನಂತರದ ದಿನಗಳಲ್ಲಿ ಅನೇಕ ಸಾಮಾಜಿಕ ಅವಶ್ಯಕತೆಗನುಗುಣವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವೈಶಿಷ್ಠಪೂರ್ಣ ಉದ್ದೇಶಗಳನ್ನು ಹೊಂದುತ್ತ ಬೆಳೆದು ಬಂದಿತು. ದೇಶದ ಮೊದಲ ಸಹಕಾರ ಸಂಘ ಕರ್ನಾಟಕದಲ್ಲಿ ನೋಂದಣಿ
ಸಹಕಾರ ಸಚಿವಾಲಯ, ಸಹಕಾರಿ ವಿಶ್ವವಿದ್ಯಾಲಯದೊಂದಿಗೆ ಬೆಳವಣಿಗೆಯ ಹೊಸ ಯುಗ. ಸರಿಸುಮಾರು ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಹೊಸದಾಗಿ ಸಹಕಾರ ಸಚಿವಾಲಯವನ್ನು ಆರಂಭಿಸಿ, ಗೃಹ ಸಚಿವರೂ ಆಗಿರುವ ಅಮಿತ್ ಷಾ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಿದ ಮೇಲೆ ಭಾರತದ ಸಹಕಾರಿ ರಂಗದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅದರಲ್ಲೂ ಸಹಕಾರ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ನಿನ್ನೆಯಷ್ಟೇ ಸಂಸತ್ನಲ್ಲಿ ಸಹಕಾರ ಸಚಿವರು ಘೋಷಣೆ ಮಾಡಿರುವ ಸಹಕಾರಿ ಟ್ಯಾಕ್ಸಿ ವ್ಯವಸ್ಥೆಯು ಭಾರತದ ಸಹಕಾರಿ ವಲಯದಲ್ಲಿ ಕ್ರಾಂತಿಕಾರಿ ಬೆಳವಣಿಗೆಯ ಸುಳಿವು ನೀಡಿದೆ. ಭಾರತದ
ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವರೆಗೂ ಮುಟ್ಟುವ ವ್ಯವಸ್ಥೆಯೆಂದರೆ ಅದು ಸಹಕಾರಿ ಕ್ಷೇತ್ರ. ಪ್ರಜಾಪ್ರಭುತ್ವ ರೀತಿಯ ವ್ಯವಸ್ಥೆ. ಎಲ್ಲರೂ ಸಮಾನರು. ಒಂದು ಶೇರು ಇದ್ದವನಿಗೂ ಒಂದು ಮತ. ಸಾವಿರ ಶೇರು ಹೊಂದಿದ ಸದಸ್ಯನಿಗೂ ಮತದಾನದ ಸಮಯದಲ್ಲಿ ಒಂದೇ ಮತದ ಹಕ್ಕು. ಗ್ರಾಮೀಣ ಪ್ರದೇಶದಲ್ಲಿ ತನ್ನ ಅಸ್ತಿತ್ವ ಹೊಂದಿರುವ ಒಂದು ಸಹಕಾರಿ ಸಂಘ ಒಂದು ಪ್ರದೇಶದ ಪರಿಮಿತಿಯಲ್ಲಿ ಕೆಲಸ ನಿರ್ವಹಿಸುತ್ತದೆ, ತನ್ನ ಸದಸ್ಯರಿಗೆ ಸೇವೆ ಒದಗಿಸುತ್ತದೆ. ತನ್ನ ಸದಸ್ಯರಿಂದ ಠೇವಣಿ, ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸಿ