ಪೀಠಿಕೆ : (ದಿವಗಂತ ಜಿ ಎಸ್ ಹೆಗಡೆ ಅಜ್ಜೀಬಳರವರು 1963 ರಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ 1983 ರಿಂದ 1989ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ಸಹಕಾರಿ ಇತಿಹಾಸದಲ್ಲಿ ಅಗ್ರ ಮಾನ್ಯ ಸಹಕಾರಿಗಳ ಸಾಲಿನಲ್ಲಿ ರಾರಾಜಿಸಿದ್ದಾರೆ. ಇವರ ಕಾಲಾವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಪ್ರಗತಿ ಯಿಂದ ಪ್ರಗತಿಗೆ ದಾಪುಗಾಲು ಹಾಕಿರುವುದು ಸರ್ವ ವಿದಿತ. ಇವರ ಸಾಧನೆಗಳ ಚಿಕ್ಕ ಚಿತ್ರಣ ಈ ಕೆಳಗೆ ನೀಡಲಾಗಿದೆ.) ಪ್ರಾಯಶಃ ಸಹಕಾರಿ ರಂಗ ಅಜ್ಜೀಬಳರಂತೆ,
ಕಾಲ ಬದಲಾದಂತೆ ಸಮಯಕ್ಕೆ ಸರಿಯಾದ ಹೊಸ ಸೇವೆಗಳತ್ತ ನಮ್ಮ ಸಹಕಾರಿ ಸಂಘಗಳು ತೆರೆದುಕೊಳ್ಳದೆ ಕೇವಲ ಸಾಲ ಕೊಡುವುದು, ಸಾಲ ವಸೂಲಾತಿ, ಒಂದಷ್ಟು ಗೊಬ್ಬರ ಮಾರಾಟ ಅಂತ ವೈಖರಿ ಬದಲಾಯಿಸದೆ ಉಳಿದು ಬಿಟ್ಟರೆ ಅಂತಹ ಸಹಕಾರಿ ಸಂಘಗಳ ಬೆಳವಣಿಗೆ ಕುಂಠಿತವಾಗಬಹುದು. ಒಂದು ನಿರ್ದಿಷ್ಟ ಪ್ರದೇಶದ ಕಾರ್ಯವ್ಯಾಪ್ತಿಯಲ್ಲಿ ಅದು ಈ ಸ್ಪರ್ಧಾತ್ಮಕ ಯುಗದಲ್ಲಿ ಬಹಳವೇನೂ ಸಾಧಿಸುವ ಅವಕಾಶಗಳು ಇಲ್ಲ ಎಂಬ ಹಳೆಯ ರಾಗಗಳು ಈಗ ಯಾವ ಸಹಕಾರಿ ಸಂಘಗಳಿಗೂ ಬೇಕಾಗಿಲ್ಲ. ಮನಸ್ಸಿದ್ದರೆ ಮಾರ್ಗಗಳು ಅನೇಕ ತನ್ನಿಂದ ತಾನೆ ಗೋಚರವಾಗುತ್ತವೆ. ಕೇರಳದ
ಶೋಷಣೆಯಿಂದ ವಿಮುಕ್ತಿಗೊಳಿಸಿ ಸದಸ್ಯರ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು. ಸಹಕಾರಿ ಪದ್ಧತಿಯ ಪ್ರಮುಖ ಗುರಿ. ಈ ಹಿನ್ನಲೆಯಲ್ಲಿ ಸಹಕಾರಿ ತತ್ವ, ಸಿದ್ಧಾಂತ, ವಿಚಾರಧಾರೆಗಳು ಪ್ರಥಮವಾಗಿ ಇಂಗ್ಲೆಂಡ್ ದೇಶದಲ್ಲಿ ಬೀಜಾಕುರವಾಗಿದ್ದು ಸರ್ವರಿಗೂ ತಿಳಿದಿರುವ ವಿಷಯ. ಈ ದೇಶದ ಇಬ್ಬರು ಸಾಮಾಜಿಕ ಕಳಕಳಿಯುಳ್ಳ ತತ್ವಜ್ಞಾನಿಗಳ ಹೆಸರುಗಳು ಅಗ್ರಸ್ಥಾನದಲ್ಲಿದೆ ಒಬ್ಬರು ರಾಬರ್ಟ್ ಓವೆನ್, ಮತ್ತೊಬ್ಬರು ಡಾ. ವಿಲಿಯಂ ಕಿಂಗ್. ಪತ್ರಿಕೋದ್ಯಮದ ಉಗಮ : ರಾಬರ್ಟ್ ಓವೆನ್ರು ಉತ್ತಮ ಸಾಮಾಜಿಕ ವ್ಯವಸ್ಥೆಯ ನಿರ್ಮಾಣಕ್ಕಾಗಿ ಹಾಗೂ ನಿರ್ಗತಿಕರ ಆರ್ಥಿಕ ಮತ್ತು ಸಾಮಾಜಿಕ
ಭಾರತದಲ್ಲಿ ಸಹಕಾರ ಚಳುವಳಿ ಆರಂಭ ಗೊಂಡಿದ್ದು ‘ಭಾರತದ ಪತ್ತಿನ ಸಹಕಾರ ಕಾಯ್ದೆ 1904 ‘ರಿಂದ ಎಂದರೆ ತಪ್ಪಾಗಲಾರದು. ಆಗ ರೈತರ ಪತ್ತಿನ ಅವಶ್ಯಕತೆ ಪೂರೈಸಲು ಯೂರೋಪ್ ನ’ ರಾಫಿಸನ್’ ಮಾದರಿ ಅನುಸರಿಸಲಾಯಿತು. ಯೂರೋಪ್ ನಲ್ಲಿ ಪಟ್ಟಣ, ಅರೆಪಟ್ಟಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಕೃಷಿ ಅವಶ್ಯ ಉಪಕರಣ ತಯಾರಿ ಉದಾಃ ಕುಲುಮೆ (ಕಮ್ಮಾರಿಕೆ) ಬಡಗಿ (ಮರಗೆಲಸ) ಸಣ್ಣ ವ್ಯಾಪಾರ ವಹಿವಾಟು ಈ ರೀತಿಯ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಜನತೆ ತಮ್ಮಲ್ಲಿನ ಹೆಚ್ಚುವರಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಅವಶ್ಯಕತೆಗೆ
ನಾವು ಕೇಳುತ್ತಿದ್ದುದು ೪ರಿಂದ ೪.೫ ಪರ್ಸೆಂಟ್… ಆದರೆ ಸರ್ಕಾರ ನಮಗೆ ಸಿಗುತ್ತಿದ್ದುದನ್ನೂ ಕಡಿತ ಮಾಡಿ ೩ ಪರ್ಸೆಂಟ್ ಗೆ ಇಳಿಸಿದೆ. ಹೀಗಾದರೆ ಜೀವನ ಮಟ್ಟ ಸುಧಾರಿಸುವುದು ಹೇಗೆ…? ಜೀವನ ನಿರ್ವಹಣೆ ಮಾಡುವುದು ಹೇಗೆ…? ಸಹಕಾರ ಸಂಘದ ಪಿಗ್ಮಿ ಕಲೆಕ್ಟರ್ ಒಬ್ಬರು ಆಡಿದ ಮಾತುಗಳಿವು…. ಹೌದು… ಸಹಕಾರ ಸಂಘಗಳ ವ್ಯವಹಾರ ವಹಿವಾಟುಗಳಿಗೆ ಪೂರಕವಾಗಿ ಕೆಲಸ ಮಾಡುತ್ತ, ಸಣ್ಣ ಸಣ್ಣ ಅಂಗಡಿ, ಉದ್ಯಮಗಳಿಂದ ದಿನಕ್ಕೆ/ ವಾರಕ್ಕೆ ಪಿಗ್ಮಿ ಸಂಗ್ರಹಿಸಿ ಉಳಿತಾಯ ಖಾತೆಗಳಿಗೆ ನೆರವಾಗುತ್ತಿದ್ದ ಪಿಗ್ಮಿ ಕಲೆಕ್ಟರ್ ಗಳ ಜೀವನದ ಮೇಲೆ
ಭಾರತ ದೇಶದಲ್ಲಿ ಮೀನುಗಾರಿಕಾ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯನ್ನು ಘೋಷಣೆ ಮಾಡಿದೆ. ಸುಮಾರು 20,050 ಕೋಟಿ ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. 2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆ (ಪಿಎಂಎಂಎಸ್ವೈ) ಘೋಷಿಸಿದ್ದರು. ಆತ್ಮ ನಿರ್ಭರ ಭಾರತ ಯೋಜನೆಯಡಿ 2020-21ರಿಂದ 2024-25ರ ಆರ್ಥಿಕ ವರ್ಷದ ಮಧ್ಯೆ ಐದು ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ.
ಕಾಲ ಸರಿದಂತೆ, ತಲೆಮಾರುಗಳು ಬದಲಾದಂತೆ ಸಮಯಕ್ಕೆ ಸರಿಯಾದ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳದೆ ಹೋದರೆ ನಾವು ನಿಂತಲ್ಲಿಯೇ ಕಾಲಾಡಿಸಬೇಕಲ್ಲದೆ ಮುಂದೆ ಹೋಗಲಾರದು. ನಿತ್ಯ ಜೀವನಕ್ಕೆ ಹೊಂದಿಕೊಳ್ಳುವ ಈ ಮಾತು ಪ್ರಾಥಮಿಕ ಸಹಕಾರಿ ಸಂಘಗಳಿಗಂತು ಹೆಚ್ಚು ಸೂಕ್ತ ಅನ್ನಿಸುತ್ತದೆ. ಇಂದು ತೋರು ಬೆರಳಿನ ತುದಿಯಲ್ಲಿ ಆಧುನಿಕ ಜಗತ್ತು ತೆರೆದುಕೊಳ್ಳುತ್ತಿದೆ. ಎಲ್ಲವೂ ತುರ್ತು, ತ್ವರಿತ. ಯಾರಿಗೂ ಕಾಯುವ ತಾಳ್ಮೆ ಇಲ್ಲ. ಇಂತಹ ಜಗತ್ತಿನಲ್ಲಿರುವ ಸಹಕಾರಿ ಸಂಘಗಳು ಕೂಡ ತಮ್ಮ ಕಾರ್ಯ ವೈಖರಿಯಲ್ಲಿ ಬದಲಾವಣೆಗಳನ್ನು ತಂದು ಕೊಳ್ಳದೆ ಉಳಿಯುವುದೆಂತು? ನಿಂತ
ವಿಶ್ವ ಸಂಸ್ಥೆ 2025 ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದೆ. ಈ ಹಿಂದೆ ಮೊದಲ ಬಾರಿಗೆ 2012 ನ್ನು ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಲಾಗಿತ್ತು. ಅದರ ಯಶಸ್ಸು ಕಂಡ ವಿಶ್ವ ಸಂಸ್ಥೆ ಮತ್ತೊಮ್ಮೆ ಅಂತರರಾಷ್ಟ್ರೀಯ ಸಹಕಾರ ವರ್ಷವನ್ನು ಘೋಷಿಸಿದೆ ಎಂದು ‘ಅಂತರರಾಷ್ಟ್ರೀಯ ಮೈತ್ರಿ ಸಂಸ್ಥೆ’ ಪ್ರಕಟಿಸಿದೆ. ಇದು ಸಹಕಾರಿಗಳಲ್ಲರೂ ಸಂಭ್ರಮಿಸುವ ವಿಷಯವಾಗಿರುತ್ತದೆ. ವಿಶ್ವ ಸಂಸ್ಥೆಯ ಈ ಘೋಷಣೆಗೆ ಕಾರಣ ಸಹಕಾರ ಸಂಘಗಳ ‘ಆರ್ಥಿಕ ಬೆಳವಣಿಗೆಯೊಂದಿಗಿನ ಸಾಮಾಜಿಕ ಅಭಿವೃದ್ಧಿ ‘ ಕಾರ್ಯಕ್ರಮಗಳು ಎಂದು ಸಂಬಂಧಿಸಿದ ಲೇಖನವೊಂದು
ಕೃಷಿ-ತೋಟಗಾರಿಕೆಗೆ 6,688 ಕೋಟಿ ರೂ ಅನುದಾನ: ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ಆಶಯದೊಂದಿಗೆ ರಾಜ್ಯ ಸರ್ಕಾರ ಹಲವಾರು ಹೊಸ ಯೋಜನೆಗಳೊಂದಿಗೆ ಹಳೆಯ ಕೆಲವು ಕಾರ್ಯಕ್ರಮಗಳನ್ನೂ ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಗಮನ ಹರಿಸಿದೆ. ಕೃಷಿ-ತೋಟಗಾರಿಕೆ ಯೋಜನೆಗಳಿಗಾಗಿ 6,688 ಕೋಟಿ ರೂ. ಅನುದಾನವನ್ನು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ಮೀಸಲಿಟ್ಟಿದ್ದಾರೆ. ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸುವ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ಯನ್ನು ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕೃಷಿ, ಪಶುಸಂಗೋಪನೆ,
ದಶಕ ಗಳು ಕಳೆದಂತೆ ಆಧುನಿಕತೆಯ ಹೊಸ ಹೊಸ ವಿಚಾರ ಧಾರೆಗಳು ಹರಿದಂತೆ. ಮೂಲ ತತ್ವ ಗಳು., ಪ್ರಾರಂಭಿಸಿದ ಮೂಲ ಉದ್ದೇಶಗಳು ಮರೆ ಮಾಚಿ ಹೋಗುವುದು ಸಹಜ ಮತ್ತು ಪ್ರಕೃತಿಯ ನಿಯಮ ಕೂಡ . ಉದಾಹರಣೆಗೆ , ಧಾರ್ಮಿಕ ಕ್ಷೇತ್ರ ದಲ್ಲಿಯೂ , ಮೂಲ ಉದ್ದೇಶ ತತ್ವಗಳು ಹಿಂದೆ ಸರಿದು ಮೂಢ ನಂಬಿಕೆಯೇ ಮೂಲ ವಾಗುತ್ತಿದ್ದಂತೆಯೇ ಕಾಲ ಕಾಲಕ್ಕೆ ಅವತಾರ ಪುರುಷರು ಬಂದು ಮಾನವೀಯ ಮೌಲ್ಯಗಳನ್ನು ಮರು ಸ್ಥಾಪಿಸಿರುವುದು ಸತ್ಯ. ಸಹಕಾರಿ ಕ್ಷೇತ್ರಕ್ಕೆ ಬಂದರೆ, ಅದೇ ಮಾನವೀಯ ಮೌಲ್ಯ