ಈಗ ‘ಸಾಲದ ಸಂಘ’ದಿಂದ ‘ರೈತರ ಆರ್ಥಿಕ ಕೇಂದ್ರ’ದತ್ತ ಕರ್ನಾಟಕದ ಸಹಕಾರಿ ಚಳವಳಿಗೆ 122 ವರ್ಷಗಳ ಸುದೀರ್ಘ ಇತಿಹಾಸವಿದೆ. 1904ರಲ್ಲಿ ಭಾರತದಲ್ಲಿ ಸಹಕಾರಿ ಪತ್ತಿನ ಸಂಘಗಳ ಕಾಯ್ದೆ ಜಾರಿಗೆ ಬಂದಿದ್ದು, 1905ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರ* ನೇತೃತ್ವದಲ್ಲಿ ದೇಶದ ಮೊದಲ ಸಹಕಾರಿ ಸಂಘ ನೋಂದಣಿಯಾಗಿದ್ದು ಕರ್ನಾಟಕದ ಪಾಲಿಗೆ ಹೆಮ್ಮೆಯ ಸಂಗತಿ. ಅಲ್ಲಿಂದ ಆರಂಭವಾದ ಪಯಣ ಇಂದು ಗ್ರಾಮದಿಂದ ರಾಜ್ಯದವರೆಗೆ ವಿಸ್ತರಿಸಿರುವ ಬಲಿಷ್ಠ ಸಹಕಾರಿ ವ್ಯವಸ್ಥೆಯಾಗಿ ಬೆಳೆದಿದೆ. ಗ್ರಾಮದಿಂದ ರಾಜ್ಯದವರೆಗೆ ಮೂರು ಹಂತದ ವ್ಯವಸ್ಥೆ ಕರ್ನಾಟಕದ
ಈ ಮಸೂದೆ 2026ರ ಆಗಸ್ಟ್ 11ರಂದು ಲೋಕಸಭೆಯಲ್ಲಿ ಮತ್ತು ಆಗಸ್ಟ್ 12ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. NCDC ತಿದ್ದುಪಡಿ ಮಸೂದೆ 2026ರ ಪ್ರಮುಖ ಅಂಶಗಳು 1. ಸಹಕಾರಿಗಳಿಗೆ ನೇರವಾಗಿ ಸಾಲ ಮತ್ತು ಅನುದಾನ ಇದುವರೆಗೆ NCDC ನೆರವು ಪಡೆಯುವಲ್ಲಿ ಹಲವು ಪ್ರಸ್ತಾವನೆಗಳು ರಾಜ್ಯ ಸರ್ಕಾರ ಅಥವಾ ಇತರ ಮಧ್ಯವರ್ತಿ ವ್ಯವಸ್ಥೆಗಳ ಮೂಲಕ ಸಾಗಬೇಕಾಗಿದ್ದರಿಂದ ವಿಳಂಬವಾಗುತ್ತಿತ್ತು. ಹೊಸ ತಿದ್ದುಪಡಿಯ ಪ್ರಮುಖ ಬದಲಾವಣೆ ಎಂದರೆ NCDCಗೆ ಅರ್ಹ ಸಹಕಾರಿ ಸಂಸ್ಥೆಗಳಿಗೆ ನೇರವಾಗಿ ಸಾಲ ಮತ್ತು ಅನುದಾನ ನೀಡುವ ಅಧಿಕಾರವನ್ನು ಹೆಚ್ಚು ಸ್ಪಷ್ಟವಾಗಿ
ಶಂಕರಗೌಡರ 4 ಎಕರೆ ಜಮೀನನ್ನು ಸರಕಾರವು ತನ್ನ ಯೋಜನೆಗಳಿಗೆ ಕೊಂಡುಕೊಂಡಿತು. ಅದಕ್ಕೆ ಪ್ರತಿಯಾಗಿ ಒಂದು ಕೋಟಿ ರೂಪಾಯಿಗಳನ್ನು ಶಂಕರಗೌಡರಿಗೆ ಬಿಡುಗಡೆ ಮಾಡಿತು. ಕೂಡಲೇ ಶಂಕರಗೌಡರ ವಿಚಾರ ಲಹರಿಗಳು ಬದಲಾವಣೆ ಯಾದವು. ಶಂಕರಗೌಡರಿಗೆ ಇನ್ನೂ ಸಾಗುವಳಿ ಜಮೀನು ಸಾಕಷ್ಟು ಇತ್ತು. ಆದರೆ ಅವರು ಕೃಷಿಯಿಂದ ವಿಮುಖರಾದರು. 50 ಲಕ್ಷ ರೂಪಾಯಿ ಕೊಟ್ಟು ಒಂದು ದುಬಾರಿ ಕಾರನ್ನು ಖರೀದಿ ಮಾಡಿದರು. ದೇಶ ವಿದೇಶಗಳು ಯಾತ್ರೆ ಮಾಡಿ ಬಂದರು. ವಾರವಾರವೂ ಬೆಂಗಳೂರು, ಹೈದರಾಬಾದ್, ಮುಂಬೈ, ಪಣಜಿ ಗಳಿಗೆ ಭೇಟಿ
ಜನರಿಂದ ಸ್ವಯಂಪ್ರೇರಿತ ರಚನೆˌ ಸ್ವಾಯತ್ತಾ ವ್ಯವಸ್ಥೆ ಸಹಕಾರಿ ರಂಗದ ಮೂಲಉದ್ದೇಶ.ಜಗತ್ತಿನಲ್ಲಿ ಬಂಡವಾಳವಾದˌ ನೌಕರಶಾಹಿ ಜನರಿಗೆ ಹಿತವಾಗದೇ ಇದ್ದಾಗ ತಮ್ಮದೇ ತತ್ವ ಸಿದ್ದಾಂತದ ವ್ಯವಸ್ಥೆಯನ್ನು ಬಯಸಿದ ನಾಗರಿಕರು ಸಹಕಾರಿತತ್ವವನ್ನು ಹುಟ್ಟು ಹಾಕಿದರು. ಆರಂಭದಲ್ಲಿ ಯಾವುದೇ ಸರಕಾರೀ ಕಾನೂನುಗಳು ಸಹಕಾರಕ್ಕೆ ಇರಲಿಲ್ಲ. 1904ರ ತನಕವು ಸಹಕಾರ ದೇಶದ ಆಡಳಿತ ವ್ಯವಸ್ಥೆಯಲ್ಲಿ ಇರಲಿಲ್ಲ. ಜಗತ್ತಿನ ಬೇರೆ ದೇಶಗಳ ಸಹಕಾರದ ಪ್ರಗತಿಯನ್ನು ಕಂಡ ಅಂದಿನ ಬ್ರಿಟಿಷ್ ಸರಕಾರ ಇದಕ್ಕೊಂದು ಕಾನೂನು ಚೌಕಟ್ಟನ್ನು ರೂಪಿಸಿ ಬಲವರ್ಧನೆಗೆ ನಾಂದಿಹಾಡಿತು. ಅಂದಿನ ಸಹಕಾರದ ಪ್ರಸರಣˌ ಬೆಳವಣಿಗೆ
ಯಾವತ್ತೂ ಸಹಕಾರ ಕ್ಷೇತ್ರದ ಬಗ್ಗೆ ಮಾತುಗಳು ಬಂದಾಗ ಅದರ ಸಮಾಜಮುಖಿ ವ್ಯವಸ್ಥೆಗಳ ಬಗ್ಗೆ ಎಲ್ಲರೂ ಬೆರಗಾಗುತ್ತಾರೆ. ಒಂದೊಂದು ಸೊಸೈಟಿಗಳೂ ಭಿನ ಭಿನ್ನ ಚಟುವಟಿಕೆ, ಕರ್ಯವಿಧಾನಗಳ ಮೂಲಕ ತನ್ನ ಸದಸ್ಯರಿಗೆ ಅತ್ಯಂತ ಉತ್ತಮ ಸೇವೆಗಳನ್ನು ಒದಗಿಸುತ್ತಿರುತ್ತಾರೆ. ಸಹಕಾರ ಕ್ಷೇತ್ರವೇ ದೇಶದ ಆರ್ಥಿಕತೆಯ ಹೆಬ್ಬಾಗಿಲು ಎಂಬುದು ಇದೇ ಅರ್ಥದಲ್ಲಿ. ಸಮಾಜದ ಕೊಟ್ಟ ಕೊನೆಯ ವ್ಯಕ್ತಿ ಕೂಡ ಸಹಕಾರದ ಕಕ್ಷೆಯೊಳಗೆ ಸಮ್ಮಿಳಿತವಾಗಬೇಕು. ಎಲ್ಲರೂ ಸಮನವಾಗಿ ಸಹಕಾರಿ ಸಂಘಗಳ ಕಾರ್ಯಯೋಜನೆಗಳಲ್ಲಿ ಒಳಗೊಳ್ಳಬೇಕೆಂಬುದು ಇಲ್ಲಿಯ ಮಹತ್ವದ ಸಂದೇಶ. ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವುದು
ಎಲ್ಲಾ ಹಣವನ್ನು ಒಂದೇ ಕಡೆ ಹೂಡಬೇಡಿ — ವಿವೇಕದ ಬೆಳಕಿನಲ್ಲಿ ಸಂಪತ್ತಿನ ಸಂರಕ್ಷಣೆ:- “ಹಣ ಗಳಿಸುವುದು ಶ್ರಮದ ಫಲ; ಗಳಿಸಿದ ಹಣವನ್ನು ಕಾಪಾಡಿಕೊಳ್ಳುವುದು ಪ್ರಜ್ಞೆಯ ಫಲ.” ಈ ಮಾತು ಕೇವಲ ಒಂದು ನುಡಿಯಲ್ಲ; ಹೂಡಿಕೆದಾರರ ಬದುಕಿನ ದೀರ್ಘ ಅನುಭವದಿಂದ ಮೂಡಿಬಂದ ಸತ್ಯ. ಮನುಷ್ಯನು ಬೆವರಿನ ಹನಿಗಳನ್ನು ಮುತ್ತಾಗಿಸಿ ದುಡಿದು ಸಂಪಾದಿಸುವ ಹಣ, ಕ್ಷಣಮಾತ್ರದ ಅವಿವೇಕದಿಂದ ಕರಗಿಹೋಗಬಾರದು. ಆದ್ದರಿಂದ ಹಣವನ್ನು ಹೇಗೆ ಗಳಿಸಬೇಕು ಎನ್ನುವುದಕ್ಕಿಂತ, ಹೇಗೆ ಉಳಿಸಬೇಕು ಮತ್ತು ಬೆಳೆಸಬೇಕು ಎಂಬುದನ್ನು ಅರಿಯುವುದು ಹೆಚ್ಚು ಮುಖ್ಯ. ನಮ್ಮ ಹಿರಿಯರು
ವಿಶ್ವಸಂಸ್ಥೆಯು 2025ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷವೆಂದು ಘೋಷಿಸಿದ್ದು, ಅದರ ಧ್ಯೇಯವಾಕ್ಯ “ಶಾಂತಿಯುತ ಜಗತ್ತಿಗಾಗಿ ಸಹಕಾರ ಸಂಸ್ಥೆಗಳು” (Cooperatives Build a Better World / Cooperatives for a Peaceful World) ಆಗಿದೆ. ಈ ಘೋಷಣೆಯ ಮೂಲಕ ಸಹಕಾರ ಸಂಸ್ಥೆಗಳು ಶಾಂತಿ ನಿರ್ಮಾಣ, ಸುಸ್ಥಿರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಸಾಧನೆಯಲ್ಲಿ ವಹಿಸುವ ಮಹತ್ವದ ಪಾತ್ರವನ್ನು ವಿಶ್ವದ ಗಮನಕ್ಕೆ ತರಲಾಗಿದೆ. ವಿಶ್ವಸಂಸ್ಥೆಯು 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (Sustainable Development Goals – SDGs)
“ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು” ಎಂಬ ಸರಳ ತತ್ವದ ಮೇಲೆ ನಿರ್ಮಾಣವಾದ ಸಹಕಾರ ಚಳವಳಿ ಇಂದು ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ರೈತರನ್ನು ಸಾಲದ ಶೋಷಣೆಯಿಂದ ರಕ್ಷಿಸುವ ಉದ್ದೇಶದಿಂದ ಆರಂಭವಾದ ಈ ಚಳವಳಿ, ಇಂದು ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಗೃಹನಿರ್ಮಾಣ, ಮಹಿಳಾ ಸ್ವಸಹಾಯ, ಮೀನುಗಾರಿಕೆ, ಕೈಗಾರಿಕೆ ಹಾಗೂ ಗ್ರಾಮೀಣ ಉದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ. ಕಾಲ ಬದಲಾಗುತ್ತಿದೆ. ಸಮಾಜದ ಅಗತ್ಯಗಳು ಬದಲಾಗುತ್ತಿವೆ. ತಂತ್ರಜ್ಞಾನ
The cooperative movement has been one of India’s most powerful instruments for promoting inclusive economic development, empowering rural communities, and advancing financial inclusion. However, as the economy becomes increasingly competitive and technology-driven, many cooperative societies struggle with weak governance, inadequate capital, poor professional management, and declining operational efficiency. To preserve and strengthen the cooperative
ಆಧುನಿಕತೆಯ ವೇಗಕ್ಕೆ ಸಿಲುಕಿ ನಮ್ಮ ಪ್ರಕೃತಿ ನಲುಗಿದೆ. ಸರ್ವತ್ರ ಪ್ಲಾಸ್ಟಿಕ್ ಬಳಕೆ, ಹಳ್ಳ ತೋಡು ನದಿಗಳ ನೀರಿಗೆ ಹಾಕುವ ಕಸ ಮತ್ತು ವಿಷಯುಕ್ತ ರಾಸಾಯನಿಕಗಳು, ಹೊಗೆಯುಗುಳುವ ಕೈಗಾರಿಕೆಗಳು ಮತ್ತು ವಾಹನಗಳ ಹಾವಳಿ ಹೀಗೆ ಅನೇಕ ಕಾರಣಗಳಿಂದ ಇಡೀ ಪರಿಸರವೇ ನೆಮ್ಮದಿಯ ವಾಸಕ್ಕೆ ಯೋಗ್ಯವಲ್ಲದಷ್ಟು ಹದಗೆಟ್ಟಿದೆ. ನಿತ್ಯ ನಿರಂತರ ಅರೋಗ್ಯ ಸಮಸ್ಯೆಗಳು, ಕುಡಿಯಲು ಶುದ್ಧ ನೀರಿನ ಕೊರತೆ, ನಡೆದಾಡಲು ನೆರಳಿಲ್ಲದ ರಸ್ತೆಗಳು ಹೀಗೆ ತಾಪತ್ರಯಗಳು ಅನೇಕ. ಮನುಷ್ಯ ತಾನು ಭೂಮಿಯಿಂದ ಮತ್ತು ಪರಿಸರದಿಂದ ಅನೇಕ ಉಪಕಾರ ಪಡೆಯುವುದನ್ನು