ಸಹಕಾರ ಸಂಘ/ ಸಂಸ್ಥೆಯಲ್ಲಿ ಅಂತರಿಕ ಸಂಬಂಧಗಳ ನಿರ್ವಹಣೆ ಹಾಗೂ ಮಾನವೀಯ ಮೌಲ್ಯಗಳು | ಶ್ರೀಮತಿ ಎನ್. ಇ. ಸವಿತ.

ಮಾನವ ಸಂಪನ್ಮೂಲ ನಿರ್ವಹಣೆಗಿಂತಲೂ, ಇಂದು ಬೇಕಾಗಿರುವುದು ಮಾನವ ಸಂಬಂಧಗಳ ನಿರ್ವಹಣೆ. ಇದನ್ನೇ ಅಂತರಿಕ ನಂಬಂಧಗಳು ಎಂದು ಕರೆಯಲಾಗಿದೆ. ಸಹಕಾರ ಸಂಸ್ಥೆಗಳು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬದ್ಧವಾಗಿರುವ ಸಂಸ್ಥೆಗಳಾಗಿದೆ. ಈ ಸಂಸ್ಥೆಗಳ ಯಶಸ್ಸು ಎಂಬುದು ಅಂತರಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಡುವಿನ ಉತ್ತಮ ಸಂಬಂಧಗಳ ಮೇಲೆ ಅವಲಂಬಿತವಾಗಿದೆ. ಸಹಕಾರದ ತತ್ವಗಳನ್ನೇ ಆಧಾರವಾಗಿಟ್ಟುಕೊಂಡಿರುವ ಈ ಸಹಕಾರ ಸಂಸ್ಥೆಗಳಲ್ಲಿ ವಿಶ್ವಾಸ, ಪರಸ್ಪರ ಸಹಕಾರ, ಸಮಾನತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿ ಮುಂತಾದ ಮಾನವೀಯ ಮೌಲ್ಯಗಳು ಅತ್ಯಂತ ಪ್ರಮುಖವಾಗಿವೆ. ಏಕೆಂದರೆ ಸಂಸ್ಥೆಗಳಲ್ಲಿ ಭವ್ಯ ಕಟ್ಟಡಗಳನ್ನು ನಿರ್ಮಿಸಿ, ಸೂಪರ್ ಕಂಪ್ಯೂಟರ್‌ಗಳನ್ನು ಅಳವಡಿಸಿಕೊಂಡ ಮಾತ್ರಕ್ಕೆ ಯಾವುದೇ ಸಂಸ್ಥೆ ಯಶಸ್ವಿಯಾಗುವುದಿಲ್ಲ. ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಮುಖ್ಯವಾಗುತ್ತಾನೆ. ಯಂತ್ರಗಳು ಕೆಟ್ಟರೆ ರಿಪೇರಿ ಮಾಡಿಸಬಹುದು. ಆದರೆ ಮನುಷ್ಯನ ಮನಸ್ಸು ಕಲುಷಿತವಾದರೆ..!ಒಮ್ಮೆ ಯೋಚಿಸಿ…

ಅಂತರಿಕ ಸಂಬಂಧಗಳ ನಿರ್ವಹಣೆಯಲ್ಲಿ ಸೌಹಾರ್ದಪೂರ್ಣ ಸಂವಹನ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸುವ ವಿಧಾನ, ವರಸ್ಪರ ಗೌರವ, ಹಾಗೂ ತಂಡದ ಕೆಲಸಕ್ಕೆ ಒತ್ತು ನೀಡುವುದು ಮುಖ್ಯವಾಗಿದೆ. ಮಾನವೀಯ ಮೌಲ್ಯಗಳು ಸಹಕಾರ ಸಂಸ್ಥೆಗಳಲ್ಲಿ ಕೇವಲ ನೀತಿ ಸಂಹಿತೆಗಳಲ್ಲ, ಅವು ದಿನನಿತ್ಯದ ಕಾರ್ಯಚಟುವಟಿಕೆಗಳ ಭಾಗವಾಗಿರಬೇಕು. ಇವುಗಳು ಸದಸ್ಯರಲ್ಲಿ ಅತ್ಮೀಯತೆಯನ್ನೂ, ಬದ್ಧತೆಯನ್ನೂ ಹೆಚ್ಚಿಸುತ್ತವೆ. ಹಾಗಿದ್ದಾಗ ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ನೆರವಾಗುತ್ತದೆ. ಹೀಗಾಗಿ, ಸಹಕಾರ ಸಂಘಗಳಲ್ಲಿ ಅಂತರಿಕ ಸಂಬಂಧಗಳ ಉತ್ತಮ ನಿರ್ವಹಣೆ ಹಾಗೂ ಮಾನವೀಯ ಮೌಲ್ಯಗಳ ಅಳವಡಿಕೆಯಿಂದ ಸಂಘದ ಕಾರ್ಯಕ್ರಮತೆ ಮತ್ತು ವಿಶ್ವಾಸರ್ಹತೆಯು ವೃದ್ಧಿಯಾಗುತ್ತದೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಸಹಕಾರ ಸಂಸ್ಥೆಯ ದಕ್ಷತೆ ಹಾಗೂ ದಿಟ್ಟತೆ ಉಳಿಯುತ್ತದೆ.

ಸಹಕಾರ ಸಂಸ್ಥೆಗಳು ಕೇವಲ ಆರ್ಥಿಕ ಲಾಭದ ದೃಷ್ಟಿಯಿಂದವಲ್ಲ, ಬದಲಿಗೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪರಸ್ಪರ ಸಹಕಾರದ ಆಧಾರವಾಗಿ ಕಾರ್ಯನಿರ್ವಹಿಸುತ್ತವೆ. ಸಹಕಾರ ಸಂಸ್ಥೆಗಳ ಉದ್ದೇಶಗಳನ್ನು ಯಶಸ್ವಿಯಾಗಿ ಸಾಧಿಸಲು ಮಾನವೀಯ ಮೌಲ್ಯಗಳು ಅತ್ಯಂತ ಅಗತ್ಯವಾಗಿವೆ. ಪ್ರಾಮಾಣಿಕತೆ ಸಮಾನತ, ಜವಾಬ್ದಾರಿ, ಗೌರವ, ಸಹಾನುಭೂತಿ ಮತ್ತು ನೈತಿಕತ ಇತ್ಯಾದಿ ಮೌಲ್ಯಗಳು ಸಹಕಾರ ಸಂಸ್ಥೆಯ ಅಸ್ತಿತ್ವವಾಗಿವೆ. ಸಹಕಾರ ವ್ಯವಸ್ಥೆಯು ಒಬ್ಬರ ಸಹಾಯ ಇನ್ನೊಬ್ಬರಿಗೆ ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಈ ತತ್ವವನ್ನು ನಿತ್ಯ ಕಾರ್ಯಪ್ರವೃತ್ತಿಗಳಲ್ಲಿ ಜಾರಿಗೊಳಿಸಲು ಹಾಗೂ ಎಲ್ಲ ಸದಸ್ಯರು ಮತ್ತು ಸಿಬ್ಬಂದಿಯು ಮಾನವೀಯ ಮೌಲ್ಯಗಳನ್ನು ಹಾಲಿಸಬೇಕು. ಈ ಮೌಲ್ಯಗಳು ಸಹಕಾರ ಸಂಸ್ಥೆಗಳ ಸಂಘದ ಅಂತರಿಕ ಸಂಬಂಧಗಳನ್ನು ಗಟ್ಟೆ ಮಾಡುವುದರ ಜೊತೆಗೆ ಸಮಾಜದಲ್ಲಿ ಸಹಕಾರ ಸಂಸ್ಥೆಯ/ಸಂಘದ ಕುರಿತು ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸುವುದರ ಜೊತೆಗೆ ಹೆಚ್ಚಿಸುತ್ತವೆ.

ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳ ಸಂಬಂಧ

ಸಹಕಾರ ಸಂಘದ ಯಶಸ್ಸು ಎರಡು ಪ್ರಮುಖ ಘಟಕಗಳೆಂದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ನಡುವಿನ ಸಮನ್ವಯ ಮತ್ತು ಬಲಿಷ್ಠ ಸಂಬಂಧಗಳ ಮೇಲೆ ಅವಲಂಬಿತವಾಗಿರುತ್ತದೆ. ಆಡಳಿತ ಮಂಡಳಿ ಸಂಘದ ಉದ್ದೇಶ, ಧೋರಣೆಗಳು ಹಾಗೂ ನಿರ್ಧಾರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರೆ, ಸಿಬ್ಬಂದಿ ಅವುಗಳನ್ನು ಜಾರಿಗೆ ತರುತ್ತಾರೆ. ಈ ನಡುವೆ ಉತ್ತಮ ಸಂವಹನ: ಪರಸ್ಪರ ಗೌರವ ಮತ್ತು ನಹಕಾರದ ವಾತಾವರಣ ಅಗತ್ಯವಿರುತ್ತದೆ.

1. ಸ್ಪಷ್ಟತೆ ಮತ್ತು ಪರಸ್ಪರ ಗೌರವ ಆಡಳಿತ ಮಂಡಳಿಯವರು ತಮ್ಮ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದರೆ, ಸಿಬ್ಬಂದಿಯು ಸಹಕಾರ ಸಂಸ್ಥೆಯ ನಿತ್ಯಚಟುವಟಿಕೆಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ. ಇಬ್ಬರೂ ಸಹ ತಮ್ಮ-ತಮ್ಮ ಪಾತ್ರಗಳ ಸ್ಪಷ್ಟತೆಯನ್ನು ಹೊಂದಿದಾಗ ಮಾತ್ರ ಸಹಕಾರ ಸಂಸ್ಥೆಯು ಅಭಿವೃದ್ಧಿಯತ್ತ ಸಾಗಲು ಸಾಧ್ಯ.

2. ಸಂವಹನದ ಪರಿಪಕೃತೆ ಸಹಕಾರ ಸಂಸ್ಥೆಯಲ್ಲಿ ಸಮಸ್ಯೆಗಳ ಪರಿಹಾರ, ಯೋಜನೆಗಳ ರೂಪುರೇಖೆ ಮತ್ತು ಕಾರ್ಯನಿರ್ವಹಣೆಯ ರೂಪರೇಷುಗಳನ್ನು ಹಾಗೂ ಸಹಕಾರ ಸಂಸ್ಥೆಯ ಸಭೆಗಳು, ವರದಿ ಸಲ್ಲಿಕೆ, ಸ್ಪಷ್ಟವಾಗಿ ತಿಳಿಸುವ ಸಂವಹನವು ಆಡಳಿತ ಮಂಡಳಿಯ ಹಾಗೂ ಸಿಬ್ಬಂದಿಗಳ ಸಂಬಂಧವನ್ನು ಗಟ್ಟಿಯಾಗಿಸುತ್ತದೆ.

3. ಗೌರವಮಯ ನಿರ್ವಹಣೆ : ಸಿಬ್ಬಂದಿಯ ಅಭಿಪ್ರಾಯಗಳನ್ನು ಗೌರವದಿಂದ ಆಲಿಸುವುದು, ಅವರ ನಿರ್ಧಾರಗಳಲ್ಲಿ ಹಾಲುಗೊಳ್ಳಿಸುವುದು ಮತ್ತು ಅವರ ಶ್ರಮಕ್ಕೆ ಮಾನ್ಯತೆ ನೀಡುವುದು – ಈ ಎಲ್ಲವೂ ದೀರ್ಘಕಾಲಿಕ ಬದ್ಧತೆ ಮತ್ತು ನಿಷ್ಠೆ ಉಂಟುಮಾಡುತ್ತವೆ.

4. ಸಂಘದ ಮೌಲ್ಯಗಳು ಮತ್ತು ಸಂಸ್ಕೃತಿ ಸಹಕಾರ ಸಂಸ್ಥೆಗಳು ಸಮಾನತೆ, ಪ್ರಾಮಾಣಿಕತೆ, ಮತ್ತು ನ್ಯಾಯಯುತ ನೀತಿಗಳನ್ನು ಆಧಾರವಾಗಿ ಹೊಂದಿರುವುದರಿಂದ, ಆಡಳಿತ ಮಂಡಳಿಯು ಮತ್ತು ಸಿಬ್ಬಂದಿಯು ಈ ಮೌಲ್ಯಗಳನ್ನು ತಮ್ಮ ನಡವಳಿಕೆಯಲ್ಲಿ ಪ್ರತಿಬಿಂಬಿಸಬೇಕು. ಇದು ಸಹಕಾರಿಯಲ್ಲಿ ಕಾರ್ಯನಿರ್ಹಣೆಯ ಸಾಮರಸ್ಯವನ್ನು ಉಂಟುಮಾಡುತ್ತದೆ.

ಸಿಬ್ಬಂದಿಗಳು ಹಾಗೂ ಗ್ರಾಹಕರ ಸಂಬಂಧ

ಸಹಕಾರ ಸಂಸ್ಥೆಗಳಲ್ಲಿನ ಯಶಸ್ಸು ಮತ್ತು ಬದ್ಧತೆ ಸೃಷ್ಟಿಯಾಗುವುದು ಮುಖ್ಯವಾಗಿ ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಸಂಬಂಧದ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಸಂಸ್ಥೆಯ/ಸಂಘದ ಸಿಬ್ಬಂದಿಯು ಸಂಘದ ಮುಖವಾಗಿದ್ದು, ಗ್ರಾಹಕರಿಗೆ ನೇರವಾಗಿ ಸೇವೆ ಒದಗಿಸುವವರು. ಈ ಹಿನ್ನೆಲೆಯಲ್ಲಿ. ಅವರ ನಡುವಿನ ಸಂಬಂಧವು ಗೌರವಯುತ, ವಿಶ್ವಾಸ ಪಾತ್ರ ಹಾಗೂ ಸಹಾನುಭೂತಿಯುತವಾಗಿರಬೇಕು.

1. ಪರಸ್ಪರ ಗೌರವ ಮತ್ತು ನಂಬಿಕೆ: ಗ್ರಾಹಕರು ಸಂಘದ ಸೇವೆಗಳ ಉಪಯೋಗದಾರರಾಗಿದ್ದು, ಅವರಿಗೆ ಸದಾ ಗೌರವದೊಂದಿಗೆ ವರ್ತಿಸಬೇಕು. ವ್ಯಕ್ತಿತ್ವದ ಮಟ್ಟದಲ್ಲಿ ಗೌರವ ನೀಡುವ ನಡವಳಿಕೆಯಿಂದ ಗ್ರಾಹಕರಲ್ಲಿ ಸಂಘದ ಮೇಲೆ ನಂಬಿಕೆ ಬೆಳೆಸಲು ಸಾಧ್ಯವಾಗುತ್ತದೆ.

2. ಉತ್ತಮ ಸಂವಹನ ಸಿಬ್ಬಂದಿಯು ಗ್ರಾಹಕರ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ಶೀಘ್ರವಾಗಿ ಉತ್ತರ ನೀಡುವುದು. ಸಂಶಯಗಳಿಗೆ ಪರಿಹಾರ ನೀಡುವುದು ಹಾಗೂ ಸಹಾನುಭೂತಿಯುಳ್ಳ ಶೈಲಿಯಲ್ಲಿ ಮಾತನಾಡುವುದು ಬಲವಾದ ಸಂಬಂಧದ ಮೂಲಅಂಶಗಳಾಗಿದೆ.

3.ಸಮಸ್ಯೆ ಪರಿಹಾರ ಹಾಗೂ ಸೇವಾ ದಕ್ಷತೆ: ಗ್ರಾಹಕರ ಅಡುಗೆ, ದೂರು ಅಥವಾ ಅಗತ್ಯಗಳಿಗೆ ಸರಿಯಾದ ಸಮಯದಲ್ಲಿ ಸ್ಪಂದನೆ ನೀಡಿದರೆ, ಅವರು ತೃಪ್ತರಾಗಿ ಸಹಕಾರ ಸಂಘದೊಂದಿಗೆ ದೀರ್ಘಕಾಲಿಕ ನಂಬಂಧ ಕಾಯ್ದುಕೊಳ್ಳುತ್ತಾರೆ. ಸಿಬ್ಬಂದಿಯ ದಕ್ಷತೆ ಹಾಗೂ ಜವಾಬ್ದಾರಿ ಗ್ರಾಹಕರ ಸಂತೋಷಕ್ಕೆ ಕಾರಣವಾಗುತ್ತದೆ.

4. ಮೌಲ್ಯಾಧಾರಿತ ವರ್ತನೆ ಸಮಾನತೆ, ಪ್ರಾಮಾಣಿಕತೆ, ಶ್ರದ್ಧೆ, ನೈತಿಕತೆ ಎಂಬ ಮೌಲ್ಯಗಳನ್ನು ಅನುಸರಿಸುವ ಮೂಲಕ, ಸಿಬ್ಬಂದಿಯು ನಂಬಿಗಸ್ತ ಹಾಗೂ ಮಾನವೀಯ ಸೇವೆಯನ್ನು ನೀಡಬಹುದು. ಈ ಮೂಲಕ ಗ್ರಾಹಕರಲ್ಲಿ ಸಂಘದ ಪ್ರತಿಯೊಬ್ಬ ಸಿಬ್ಬಂದಿಯ ಮೇಲೆ ಗೌರವ ಮೂಡುತ್ತದೆ.

5. ಗ್ರಾಹಕರ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆ: ಸಿಬ್ಬಂದಿಯು ಗ್ರಾಹಕರ ಅಭಿಪ್ರಾಯಗಳನ್ನು ಗಮನಿಸಿ ಅವುಗಳನ್ನು ಸೇವೆಯ ಗುಣಮಟ್ಟ ಸುಧಾರಣೆಗೆ ಬಳಸಿದರೆ, ಇದು ಬಲವಾದ ಸಂಬಂಧಕ್ಕೆ ಕಾರಣವಾಗುತ್ತದೆ.

ಸಹಕಾರಿಯ ನಿರ್ದೇಶಕರಲ್ಲಿ ಅಂತರಿಕ ಸಂಬಂಧ

ಸಹಕಾರ ಸಂಘದಲ್ಲಿ ಆಡಳಿತ ಮಂಡಳಿ ಮುಖ್ಯ ನಿರ್ಣಯಾತ್ಮಕ ಘಟಕವಾಗಿದೆ. ನಿರ್ದೇಶಕರು ಸಂಘದ ಧೋರಣೆ, ನೀತಿ, ಯೋಜನೆ ಮತ್ತು ಉದ್ದೇಶಗಳ ನಿರ್ಧಾರಗಳನ್ನು ಮಾಡುವ ಹೊಣೆಗಾರರು. ನಿರ್ದೇಶಕರ ನಡುವಿನ ಅಂತರಿಕ ಸಂಬಂಧಗಳು ಸಂಘದ ನಿರ್ವಹಣೆ ಸಾರಥ್ಯ, ಜವಾಬ್ದಾರಿ ಮತ್ತು ಪರಸ್ಪರ ಸಹಕಾರಕ್ಕೆ ಪ್ರಮುಖ ಆಧಾರವಾಗಿದೆ.

1. ಪರಸ್ಪರ ಗೌರವ ಮತ್ತು ನಂಬಿಕೆ:ನಿರ್ದೇಶಕರ ನಡುವೆ ಪರಸ್ಪರ ಗೌರವ ಮತ್ತು ನಂಬಿಕೆ ಇದ್ದರೆ, ಯಾವುದೇ ನರಾರವು ಜ್ಞಾನದ ಆಧಾರದಲ್ಲಿ ಸಂಘದ ಹಿತದೃಷ್ಟಿಯಿಂದ ಆಗುವುದು ಖಚಿತವಾಗುತ್ತದೆ. ವೈಯಕ್ತಿಕ ವಿವಾದಗಳು ಅಥವಾ ಪ್ರತ್ಯೇಕ ಸ್ವರ ಸಂಘದ ಪ್ರಗತಿಗೆ ತಡೆ ಯಾಗಬಹುದು.

2. ಸಂವಹನ ಮತ್ತು ಸಹಕಾರನಿರ್ದೇಶಕರ ನಡುವೆ ನಿರಂತರ ಸಂವಾದ ಮತ್ತು ಸ್ಪಷ್ಟ ಸಂವಹನ ಅತಿ ಮುಖ್ಯ. ಸುದ್ದಿ ಅಥವಾ ಮಾಹಿತಿ ಹಂಚಿಕೊಳ್ಳುವಲ್ಲಿ ಪಾರರಕತೆ ಮತ್ತು ಶ್ರವಣ ಸಾರಥ್ಯವ ಸಹಕಾರದ ಮೂಲತತ್ವಗಳು ಖಚಿತವಾಗುತ್ತವೆ.

3. ಸಹಕಾರ ಸಂಘದ ಧೈಯ ಪೂರ್ವಕ ಕಾರ್ಯನಿರ್ವಹಣೆ: ನಿರ್ದೇಶಕರಲ್ಲಿ ಸಹಕಾರ ಸಂಘದ ಧೈಯ ಮತ್ತು ಉದ್ದೇಶಗಳ ಬಗ್ಗೆ ಒಮ್ಮತ ಇರಬೇಕು. ತಮ್ಮ-ತಮ್ಮ ಹುದ್ದೆಯ ಕರ್ತವ್ಯಗಳನ್ನು ಧೈಯದ ಪೂರ್ವಕ ನಿರ್ವಹಿಸಿದಾಗ ಹಾಗೂ ಜವಾಬ್ದಾರಿ, ಪರಸ್ಪರ ಸಮನ್ವಯ ಸಹಕಾರ ಸಂಘದ ಅಭಿವೃದ್ಧಿಗೆ ಅಡಿಪಾಯವಿದ್ದಂತೆ

4. ತಾರತಮ್ಯವಿಲ್ಲದ ಸಮಾನತೆ:ಸಹಕಾರ ಸಂಘಗಳ ಮೂಲತತ್ವಗಳಲ್ಲಿ ಸಮಾನತೆ ಪ್ರಮುಖ ಅಂಶವಾಗಿದೆ. ನಿರ್ದೇಶಕರಲ್ಲಿ ಹುದ್ದೆಯ ಮೇಲೆ ಅಥವಾ ವ್ಯಕ್ತಿಗತ ಪ್ರಭಾವದ ಆಧಾರದಲ್ಲಿ ತಾರತಮ್ಯ ಮೂಡಬಾರದು. ಎಲ್ಲರ ಅಭಿಪ್ರಾಯವನ್ನೂ ಗೌರವಿಸುವ ವಾತಾವರಣ ಇದಕ್ಕೆ ಸಹಾಯಕರಾಗುತ್ತದೆ.

5. ಸಮಸ್ಯೆ ಪರಿಹಾರ ಮತ್ತು ಸಮೂಹ ನಿರ್ಧಾರ :ಯಾವುದೇ ಗೊಂದಲಗಳು ಅಥವಾ ಭಿನ್ನಾಭಿಪ್ರಾಯಗಳು ಇದ್ದರೂ ಸಹ, ನಿರ್ದೇಶಕರು ಅದನ್ನು ಶಿಸ್ತಿನಿಂದ, ಶಾಂತಿಯುತವಾಗಿ ಸಮಾಧಾನದಿಂದ ಸಹಕಾರ ಸಂಘದ ಹಿತವನ್ನು ಗಮನದಲ್ಲಿರಿಸಿಕೊಂಡು ಬಗೆಹರಿಸಬೇಕು. ಸಮೂಹ/ ಒಮ್ಮತ ನಿರ್ಧಾರ ಮತ್ತು ವರಸ್ಪರ ಸಂವಾದದ ಮೂಲಕ ಸಕಾರಾತ್ಮಕ ಪರಿಹಾರ ಸಾಧ್ಯ ಸಹಕಾರಿಯಲ್ಲಿ ಮಾನವೀಯ ಮೌಲ್ಯಗಳು.

ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸುವ ಮಹತ್ವದ ಸಂಸ್ಥೆಗಳಾಗಿವೆ. ಇವು ವಾಣಿಜ್ಯ ಲಾಭಕ್ಕಿಂತಲೂ ಹೆಚ್ಚಾಗಿ, ಸಾಮಾಜಿಕ ಸಮಾನತೆ, ಪರಸ್ಪರ ಸಹಾಯ, ನೈತಿಕತೆ ಮತ್ತು ಮಾನವೀಯತೆಯನ್ನು ಉತ್ತೇಜಿಸುತ್ತವೆ. ಈ ಕಾರ್ಯಕ್ಷೇತ್ರದಲ್ಲಿ ಮಾನವೀಯ ಮೌಲ್ಯಗಳು ಮುಖ್ಯ ಪಾತ್ರವಹಿಸುತ್ತವೆ. ಏಕೆಂದರೆ ಅವು ಸಂಘದ ಕಾರ್ಯವೈಖರಿ ಸಂಸ್ಕೃತಿ ಹಾಗೂ ಸಂಬಂಧಗಳ ಗುಣಮಟ್ಟವನ್ನು ನಿರ್ಧರಿಸುತ್ತವೆ.

1. ಪ್ರಾಮಾಣಿಕತೆ ಸಹಕಾರ ಸಂಘದಲ್ಲಿ ಎಲ್ಲ ಸಿಬ್ಬಂದಿಯು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದು ತುಂಬಾ ಅವಶ್ಯಕ, ಹಣಕಾಸು ವ್ಯವಹಾರಗಳಲ್ಲಿ ಪಾರರ್ದಶಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡುವುದರಿಂದ ಸದಸ್ಯರಲ್ಲಿ ವಿಶ್ವಾಸ ಬೆಳೆಸಬಹುದು

2. ಸಮಾನತೆ ಸಹಕಾರದ ತತ್ವವೆಂದರೆ ಒಬ್ಬರ ಸಹಾಯ ಇನ್ನೊಬ್ಬರಿಗೆ ಹೀಗಾಗಿ ಎಲ್ಲ ಸದಸ್ಯರು ಸಮಾನ ಹಕ್ಕುಗಳೊಂದಿಗೆ ಯಾವ ತಾರತಮ್ಯವಿಲ್ಲದೆ ಸಂಸ್ಥೆಯಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ  ಇರಬೇಕು.

3. ಜವಾಬ್ದಾರಿ ಸಿಬ್ಬಂದಿಯು ಸಹಕಾರ ಸಂಘದಲ್ಲಿ ನಂಬಿಕೆ ಇಟ್ಟು ನೀಡಲಾದ ಕರ್ತವ್ಯಗಳನ್ನು ನಿಷ್ಠೆಯಿಂದ ನಿಭಾಯಿಸುವ ಜವಾಬ್ದಾರಿಯು ಒಂದು ಮಹತ್ವದ ಮಾನವೀಯ ಮೌಲ್ಯ ಇದು ಸಹಕಾರ ಸಂಘದ ದಕ್ಷತೆಗೆ ಬಲ ನೀಡುತ್ತದೆ.

4. ಸಹಾನುಭೂತಿ ಮತ್ತು ಸಹಕಾರ ಇತರರ ಅಗತ್ಯಗಳನ್ನು ಮನಗಂಡು ಸಹಾಯ ಮಾಡುವ ಮನೋಭಾವ ಸಹಕಾರ ಸಂಘದ ಮೂಲ ತತ್ವ, ಸಿಬ್ಬಂದಿ, ಮತ್ತು ಸದಸ್ಯರ ನಡುವೆ ಸಹಾನುಭೂತಿಯ ನಡವಳಿಕೆಯಿಂದ ಸಹಕಾರ ಸಂಘದ ನಂಬಿಕೆ ವಿಶ್ವಾಸ ಗಟ್ಟಿಯಾಗುತ್ತದೆ.

5. ಪಾರರ್ದಶಕತೆ ನಿರ್ಧಾರಗಳು, ಲೆಕ್ಕಪತ್ರಗಳು ಹಾಗೂ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಇರಬೇಕೆಂಬುದು ನೈತಿಕ ಮೌಲ್ಯದ ಭಾಗವಾಗಿದೆ. ಇದು ಸಹಕಾರ ಸಂಘದ ಮೇಲೆ ಸದಸ್ಯರ ನಂಬಿಕೆಯನ್ನು ಹೆಚ್ಚಿಸುತ್ತದೆ.

6. ಗೌರವ ಮತ್ತು ಶಿಷ್ಟತೆ : ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ನಡೆದುಕೊಳ್ಳುವುದು ಸಹಕಾರ ಸಂಸ್ಥೆಯ ಒಂದು ಆಧಾರ ಹಾಗೂ ಒಂದು ಮೌಲ್ಯ ಸದೃಢ ಸಂಬಂಧಗಳು ಈ ಮೌಲ್ಯದ ಮೇಲೆ ಅಧಾರಿತವಾಗಿವೆ.

ಗಮನಿಸಬೇಕಾ ಅಂಶಗಳು:

  1. ಸಿಬ್ಬಂದಿಗಳ ಮೇಲೆ ತೋರಬೇಕಾದ ಮಾನವೀಯತೆ – ಒಂದು ಅವಶ್ಯಕತೆ, ಆಯ್ಕೆವಲ್ಲ
  2.  ಸಿಬ್ಬಂದಿಗಳು ಯಾವುದೇ ಸಂಸ್ಥೆಯ ಅಡಿಪಾಯಗಳಾಗಿದ್ದಾರೆ. ಅವರ ಶ್ರಮ, ಸಮಯ ಮತ್ತು ನಿಷ್ಠೆಯ ಮೇಲೆ ಸಂಸ್ಥೆಯ ಯಶಸ್ಸು ನಿಂತಿದೆ ಹೀಗಾಗಿ ಸಿಬ್ಬಂದಿಗಳ ಮೇಲೆ ಹೋರಬೇಕಾದ ಮಾನವೀಯತೆ ಒಂದು ಕಳಕಳಿಯ ವಿಷಯವಲ್ಲ ಅದು ಪ್ರತಿ ಸಂಸ್ಥೆಯ ನೈತಿಕ ಕರ್ತವ್ಯವಾಗಿದೆ.
  3. ಗೌರವ, ಸಹಾನುಭೂತಿ, ಸಮಾನತೆ, ಶ್ರದ್ಧೆ ಸಹಕಾರ ಮತ್ತು ಪ್ರಾಮಾಣಿಕತೆ ಇಂತಹ ಮಾನವೀಯತೆಯನ್ನು ಅವರು ಬಯಸುತ್ತೀರೋ ಅದನ್ನು ತೋರಬೇಕು.
  4. ಮಾನಸಿಕ ಹಾಗೂ ಭೌತಿಕ ಒತ್ತಡವಿಲ್ಲದ ಪರಿಸರ ಒದಗಿಸಿ ಕೆಲಸದ ಹೊರೆ ಸಮಬಾಳಿಸುವಂತೆ ಕ್ರಮವಿಡುವುದು.
  5. ಈ ವೈಯಕ್ತಿಕ ಬದುಕುಗಳಿಗೆ ಸಹಾನುಭೂತಿಯಿಂದ ಅನುಮತಿಯೊಂದಿಗೆ ಸ್ಪಂದಿಸುವುದು- ಆರೋಗ್ಯ ಸಮಸ್ಯೆ, ಕುಟುಂಬದ ಪರಿಸ್ಥಿತಿ ಇತ್ಯಾದಿಯಲ್ಲಿ ನೆರವು ನೀಡುವುದು.
  6. ಕಛೇರಿಯಲ್ಲಿ ಸಮಾನ ಅವಕಾಶಗಳನ್ನು ನೀಡುವುದು ಲಿಂಗ, ಜಾತಿ, ಧರ್ಮ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ.
  7.  ಪರಿಷ್ಕೃತ ಸಂವಹನ ಹಾಗೂ ಪ್ರೋತ್ಸಾಹದ ನಡವಳಿಕೆ ತಪ್ಪು ಮಾಡಿದರೆ ಕರಾಟೆ ಅಲ್ಲ. ಮಾರ್ಗದರ್ಶನ ನೀಡುವುದು.
  8.  ಪ್ರಾಮಾಣಿಕ ಕಾರ್ಯಕ್ರಮತೆಯ ಮೆಚ್ಚುಗೆ ಉತ್ತಮ ಕೆಲಸ ಮಾಡಿದಾಗ ಮಾನ್ಯತೆ, ಬಹುಮಾನ ಅಥವಾ ಪ್ರಶಂಸೆಯ ಮೂಲಕ ಮೆಚ್ಚುಗೆಯನ್ನು ನೀಡುವುದು.
  9. ಸಿಬ್ಬಂದಿಯವರನ್ನು ಒಬ್ಬ ಕೆಲಸಗಾರ ಅಷ್ಟೇ ಅಲ್ಲ ಮಾನವನಂತೆ ಕಾಣುವನ್ನು ಮಾನವೀಯತೆ ಇರಬೇಕು.
  10. ಅವರ ಮಾನಸಿಕ. ಭೌತಿಕ ಮತ್ತು ವೃತ್ತಿಪರ ಕ್ಷೇಮದನ್ನು ಕಾಪಾಡುವಷ್ಟು ಇರಬೇಕು.
  11.  ಅವರ ಶ್ರಮವನ್ನು ಗೌರವಿಸುವಷ್ಟು ಮಾನವೀಯತೆ ಇರಬೇಕು.
  12. ಅವರ ಜೀವನದ ಮೌಲ್ಯವನ್ನು ಅರಿಯುವಷ್ಟು ಮಾನವೀಯತೆ ಇರಬೇಕು.
  13. ಈ ಸಂಸ್ಥೆಯ ಬೆಳವಣಿಗೆಗೆ ಅತ್ಮೀಯತೆಯ ಸಂಸ್ಕೃತಿಗೆ ಹಾಗೂ ದೀರ್ಘಕಾಲಿಕ ನಿಷ್ಠೆಗೆ ಇದು ಅತ್ಯಂತ ಅಗತ್ಯ
  14. ಮಾನವೀಯತೆ ತೋರಿಸುವ ಆರ್ಥಿಕ ಮತ್ತು ಮಾನಸಿಕ ಮಹತ್ವ
  15. ಸಿಬ್ಬಂದಿಯ ಉತ್ಸಾಹ ಮತ್ತು ಉತ್ಪಾದಕತೆ ಮೇಲೆ ಪ್ರಭಾವ
  16. ಸಿಬ್ಬಂದಿಯ ನಿಷ್ಠೆ ಮತ್ತು ಸಂಸ್ಥೆಯ ಭದ್ರತೆ
  17. ಮಾನವೀಯತೆಯ ಅಂಶಗಳು-ಗೌರವ ಮತ್ತು ಸಮಾನತೆ, ಸಹಾನುಭೂತಿ ಮತ್ತು ಬೆಂಬಲ ಸಕಾರಾತ್ಮಕ ಸಂವಹನ ಮತ್ತು ಸ್ಪಷ್ಟತೆ, ಸಮಯೋವಯೋಗಿ ವಿಶ್ರಾಂತಿ ಮತ್ತು ಕೆಲಸದ ಸಮತೋಲನ ನಾವೇಲ್ಲಿದ್ದೇವೆ.

 

1) ನಮಗೆ ಎತ್ತರದ ಮನೆಗಳಿವೆ; ಆದರೆ ಮನಗಳು ಕುಬ್ಧವಾಗಿವೆ.

2) ನಾವು ಬಾಹ್ಯಾಕಾಶವನ್ನು ಗೆದ್ದಿದ್ದೇವೆ. ಆದರೆ ನಮ್ಮ ಅಂತರಾವರಣ ವಶವಾಗಿಲ್ಲ.

3) ನಮ್ಮ ವರಮಾನ ಹೆಚ್ಚಿದೆ: ಆದರೆ ವರ್ತನೆಗೆ ಹುಚ್ಚು ಹಿಡಿದಿದೆ.

4) ಎತ್ತರಕ್ಕೆ ಬೆಳೆದಿದ್ದೇವೆ: ನಡತೆಯಲ್ಲಿ ಕೊಳೆತಿದ್ದೇವೆ.

5) ಹೆಚ್ಚು ವೆಚ್ಚ ಮಾಡುತ್ತೇವೆ; ಕಡಿಮೆ ದುಡಿಯುತ್ತೇವೆ.

6) ಜ್ಞಾನ ವಿಕಾಸಗೊಂಡಿದೆ: ವಿವೇಚನೆ ವಿಕಾರಗೊಂಡಿದೆ.

7) ಅಗಾದ ಲಾಭಗಳಿಕೆ ಇದೆ. ಆದರೆ ಗಾಢ ಸಂಬಂಧ ಕ್ಷೀಣಿಸುತ್ತಿದೆ.

3) ತಜ್ಞರು ಹೆಚ್ಚಾಗಿದ್ದಾರೆ: ಸಮಸ್ಯೆಗಳೂ ಹೆಚ್ಚಾಗಿವೆ.

9) ನಮ್ಮ ಆಸ್ತಿಗಳನ್ನು ಹಿಗ್ಗಿಸಿದ್ದೇವೆ. ಮೌಲ್ಯಗಳನ್ನು ಕುಗ್ಗಿಸಿದ್ದೇವೆ.

10) ಮಿತಿ ಮೀರಿ ಮಾತನಾಡುತ್ತೇವೆ; ಪ್ರೀತಿಸುವುದನ್ನೇ ಮರೆತಿದ್ದೇವೆ.

11) ದೂರದ ಚಂದ್ರನಲ್ಲಿಗೆ ಹೋಗಿ ಬಂದಿದ್ದೇವೆ; ಆದರೆ ಹತ್ತಿರದವರನ್ನು ಕಾಣಲು ರಸ್ತೆ ದಾಟುವುದೂ ಕಷ್ಟವಾಗಿದೆ.

12) ವಿಶ್ವಶಾಂತಿ ಹೇಳುತ್ತೇವೆ. ಮನದಲ್ಲಿ ಸಮರ ಸಾಗುತ್ತಿದೆ.

13) ನಾವು ಕೂಡುವುದಕ್ಕಿಂತ ಹೆಚ್ಚು ಅಗಲಿದ್ದೇವೆ.

14) ಮಾನವ ಸಂಬಂಧಗಳಿಗೆ ಆಘಾತವಾಗುತ್ತಿದೆ.

ಎಲ್ಲಿಯವರೆಗೆ ನಮ್ಮ ವರ್ತನೆಯಲ್ಲಿ ಪರಿವರ್ತನೆ ಆಗುವುದಿಲ್ಲವೋ, ಅಲ್ಲಿಯವರೆಗೂ ಈ ಸಮಸ್ಯೆಗಳು ಇದ್ದೇ ಇರುತ್ತವೆ. ಇದಕ್ಕೆ ಕಾರಣ ನಮ್ಮಲ್ಲಿರುವ ಅಹಂ ಅಹಂ ಇದ್ದ ಕಡೆ ನಾನು ಸರಿ ನೀನು ಸರಿ ಅಲ್ಲ ಎಂಬ ಭಾವನೆ ಇರುತ್ತದೆ. ಇದರಿಂದ ಮಾನವ ಸಂಬಂಧಗಳಲ್ಲಿ ಬಿರುಕು ಕಾಣಿಸುತ್ತದೆ. ಜೀವನ ಕಷ್ಟವಾಗುತ್ತದೆ.

ಕೆಲಸ ಮಾಡುವ ಸ್ಥಳಗಳಲ್ಲಿ ನಾವು ವ್ಯವಹರಿಸುವ ಸ್ಥಳಗಳಲ್ಲಿ ಆಂತರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬಗ್ಗೆ 10 ಟಿಪ್ಪಳನ್ನು ಇಲ್ಲಿ ಕೊಡಲಾಗಿದೆ:-

  •  ಯಾರನ್ನೂ ಅನಾವಶ್ಯಕವಾಗಿ ಟೀಕಿಸಬೇಡಿ. ಯಾರಲ್ಲಿಯೂ ತಪ್ಪುಗಳನ್ನು ಹುಡುಕಬೇಡಿ, ಬದಲಿಗೆ ಆಗಿರುವ ತಪ್ಪಿಗೆ ಪರಿಹಾರಗಳನ್ನು ಹುಡುಕಿ
  • ಹೊಗಳಿಕೆಗೆ ಹಿಗ್ಗಬೇಡಿ .. ತೆಗಳಿಕೆಗೆ ಕುಗ್ಗಬೇಡಿ, ಸಹನೆ, ಶಾಂತಿ, ಸಮಾಧಾನ ಈ ಮೂರು ಇಲ್ಲದ ಮನುಷ್ಯ ಏನನ್ನೂ ಸಾಧಿಸಲಾರ.
  • ಇಷ್ಟಪಟ್ಟು ಕೆಲಸ ಮಾಡಿ ಏಕೆಂದರೆ ಕೆಲಸ ಮಾಡಿ ಸತ್ತವರಿಗಿಂತ ಚಿಂತ ಮಾಡಿ ಸತ್ತವರೇ ಹೆಚ್ಚು.
  • ನಿಮ್ಮ ಕೆಲಸದಲ್ಲಿ ಪರಿಣಿತಿ ಇರಲಿ.ಸರ್.ಎಂ. ವಿಶ್ವೇಶ್ವರಯ್ಯನವರು “ಗುಡಿಸುವ ಕೆಲಸವೇ ಇರಲಿ, ವಿಶ್ವದಲ್ಲಿಯೇ ನಿಮ್ಮನ್ನು ಅಚ್ಚುಕಟ್ಟಾಗಿ ಗುಡಿಸುವ ವ್ಯಕ್ತಿ ಯಾರೂ ಇಲ್ಲ ಎನ್ನಬೇಕು” ಎಂದು ಹೇಳಿದ್ದಾರೆ.
  • ಸಮಯ ಪಾಲನೆ ಇರಲಿ – ಇದು ಉತ್ತಮ ವ್ಯಕ್ತಿತ್ವದ ಲಕ್ಷಣ ಹಣಕ್ಕಿಂತಲೂ ಸಮಯ ಹೆಚ್ಚು ಮೌಲ್ಯವುಳ್ಳದ್ದು. ನಿಮಿಷ – ಸೆಕೆಂಡುಗಳಿಗೆ ಬೆಲೆ ಕೊಡದವ ತನ್ನ ಜೀವನಕ್ಕೂ ಬೆಲೆ
  • ಒಬ್ಬರಾದರೂ ಅತ್ಯಂತ ಆಪ್ತರಿರಲಿ.
  • ಯಾವಾಗಲೂ ನಗುಮುಖದಿಂದ ಇರಿ ಏಕೆಂದರೆ ನಗುಮುಖದ ವ್ಯಕ್ತಿಗಳು ಹೆಚ್ಚು ಪರಿಣಾಮಕಾರಿಯಾಗಿ ಆಡಳಿತ ನಡೆಸಬಲ್ಲರು ಹೆಚ್ಚು ಪರಿಣಾಮಕಾರಿಯಾಗಿ ಪಾಠ ಹೇಳಬಲ್ಲದು. ಹೆಚ್ಚು ಪರಿಣಾಮಕಾರಿಯಾಗಿ ವಸ್ತುಗಳನ್ನು ಮಾರಾಟ ಮಾಡಬಲ್ಲರು. ಅಷ್ಟೇ ಅಲ್ಲ ತಮ್ಮ ಮಕ್ಕಳನ್ನು ಸಂತೋಷದಿಂದಿರುವಂತೆ ಬೆಳೆಸಬಲ್ಲರು.
  • ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಆರೋಗ್ಯ ಎಂಬುದು ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವನ್ನು ಒಳಗೊಂಡಿರುತ್ತದೆ.
  • ಒಂದು ಒಳ್ಳೆಯ ಹವ್ಯಾಸವಿರಲಿ.
  • ಪಡೆದ ಸಹಾಯವನ್ನು ಮರೆಯಬೇಡಿ, ನೀಡಿದ ಸಹಾಯವನ್ನು ನೆನೆಯಬೇಡಿ.
  • ಮಾನವೀಯತೆ ಇಲ್ಲದ ಪರಿಣಾಮಗಳು ಒತ್ತಡದಿಂದ ಕೆಲಸದ ಕುಂಠತೆ. ಉದ್ಯೋಗ ಬದಲಾವಣೆ & ಸಂಘಟಿತ ಹೋರಾಟ ಮತ್ತು ಉದ್ವೇಗ
  • ಮಾನವೀಯತೆ ಹೆಚ್ಚಿಸುವ ವಿಧಾನಗಳು:ಸಿಬ್ಬಂದಿ ತೃಪ್ತಿ ಸಮೀಕ್ಷೆಗಳು ತರಬೇತಿ ಮತ್ತು ಮನೋವೈಜ್ಞಾನಿಕ ಬೆಂಬಲ, ನಕಾರಾತ್ಮಕ ವೃತ್ತಿಸಂಸ್ಕೃತಿ ನಿರ್ಮಾಣ, ನೈತಿಕ ಮಾರ್ಗಸೂಚಿಗಳ ಅನುಷ್ಠಾನ, ಸಂಸ್ಥೆಯ ಪ್ರಗತಿಗೆ ಮಾನವೀಯತೆಯ ಅಗತ್ಯತೆ & ಉದಾಹರಣೆ: ನೃಪ ಜೀವನದ ಘಟನೆಗಳ ಮೂಲಕ ತಿಳಿಸುವುದು.

ಉದಾಹರಣೆಗಳು

1. ಒಂದು ಸಂಸ್ಥೆಯಲ್ಲಿ ಒಬ್ಬ ನೌಕರನು ಆರೋಗ್ಯ ಸಮಸ್ಯೆಯಿಂದ ಕೆಲಸ ಮಾಡಲು ಆಗುತ್ತಿಲ್ಲ ಆ ಸಂಸ್ಥೆಯ ಮುಖ್ಯಸ್ಥ ಮಾನವೀಯತೆಯಿಂದ ಸ್ವಲ್ಪ ಸಮಯದ ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯಲು ಅವಕಾಶ ನೀಡಿದರು. ಇದರಿಂದ ಆ ನೌಕರನ ನಿಷ್ಠೆ ಮತ್ತು ಪ್ರಾಮಾಣಿಕತೆ ಸಂಸ್ಥೆಯ ಮೇಲೆ ಹೆಚ್ಚಿತು ಮತ್ತು ಅವನು ಮತ್ತೆ ಅವ ಚೇತರಿಸಿಕಕೊಂಡು ಕೆಲಸಕ್ಕೆ ಮರಳಿದನು.

2. ಒಂದು ಸಹಕಾರ ಸಂಘದಲ್ಲಿ ಸಿಬ್ಬಂದಿಗಳಿಗೆ ಹಬ್ಬದ ದಲ್ಲಿ ವಿಶೇಷ ಬೋನನ್ ಮತ್ತು ಆರಾಮದಾಯಕ ಕೆಲಸದ ಸಂಖ್ಯೆಗಳನ್ನು ಸಂದರ್ಭ ಒದಗಿಸುವ ಮೂಲಕ, ಸಂಘವು ತನ್ನ ಸಿಬ್ಬಂದಿ ಪ್ರೀತಿಯನ್ನು ಗೆದ್ದಿತು. ಇದು ಸಂಸ್ಥೆಯ ಕಾರ್ಯಕ್ಷಮತೆ ಮತ್ತು ಸಿಬ್ಬಂದಿ ತೃಪ್ತಿಗೆ ದಾರಿಯಾಗಿತು.

3 ಬೃಹತ್ ಕಂಪನಿಯು ತನ್ನ ಉದ್ಯೋಗಿಗಳಿಗೂ ಕುಟುಂಬದ ಸಮಸ್ಯೆ ಬಂದಾಗ ಅವರಿಗೆ ಎಲ್ಲಿ ಬೇಕಾದರೂ ಮಾನಸಿಕ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತದೆ. ಇದರ ಪರಿಣಾಮವಾಗಿ ಉದ್ಯೋಗಿಗಳಿಂದ ಕಂಪನಿಗೆ ನಿಷ್ಠೆ ಮತ್ತು ಲಾಯಲ್ಲಿ ಹೆಚ್ಚಿದೆ.

ಸೌಹಾರ್ದ ಸಹಕಾರ ಕ್ಷೇತ್ರಕ್ಕೆ 25 ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಚಳುವಳಿಯ ಜೊತೆಯಲ್ಲಿ ರಜತ ಮಹೋತ್ಸವ ಚಿಗುರೊಡೆದು ತನ್ನದೇ ಆದ ರಚನಾತ್ಮಕ ಚಟುವಟಿಕೆಗಳ ಮೂಲಕ ಬೆಳೆಯುತ್ತಿರುವ ಸೌಹಾರ್ದ ಸಹಕಾರಿಗಳೂ ಸೇರಿದಂತೆ ಮಾನವ ಸಂಪನ್ಮೂಲ ನಿರ್ವಹಣೆಗೆ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತರಬೇತಿ, ಕಾರ್ಯಾಗಾರ, ಅಧ್ಯಯನ ಪ್ರವಾಸಗಳ ಮೂಲಕ ಈ ಕ್ಷೇತ್ರದ ಮಾನವ ಸಂಪನ್ಮೂಲದ ಗುಣದುಟ್ಟವನ್ನು ಹೆಚ್ಚಿಸಿಕೊಳ್ಳುತ್ತಿರುವುದು ನಿಜಕ್ಕೂ ಅಭಿನಂದನೀಯ.

ಅಡಳಿತ ಮಂಡಳಿಯವರು ಮತ್ತು ಸಿಬ್ಬಂದಿಯ ಮಧ್ಯೆ ವಿಶ್ವಾಸ, ಸ್ಪಷ್ಟ ಮತ್ತು ಮಾನವೀಯ ಮೌಲ್ಯಾಧಾರಿತ ಸಂಬಂಧವಿರುವಾಗ ಸಹಕಾರ ಸಂಘದ ದಕ್ಷತೆ, ಉತ್ಸಾಹ ಮತ್ತು ಸೇವಾ ಗುಣಮಟ್ಟವು ಹೆಚ್ಚಾಗುತ್ತದೆ. ಈ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನವು ಸಂಘದ ಭವಿಷ್ಯವನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಬಲವಾದ ಸಂಬಂಧ ನಿರ್ಮಾಣವು ಸಹಕಾರ ಸಂಘದ ಅಂತರಿಕ ಶಕ್ತಿಯನ್ನೂ ಬಾಹ್ಯ ವಿಶ್ವಾಸರ್ಹತೆಯನ್ನೂ ಹೆಚ್ಚಿಸುತ್ತದೆ. ಉತ್ತಮ ಸಂಬಂಧದಿಂದಾಗಿ ಗ್ರಾಹಕರ ನಿಷ್ಠೆ, ಸೇವೆಗಳ ದಕ್ಷತೆ, ಮತ್ತು ಸಂಘದ ಒಟ್ಟೂ ಪ್ರತಿಷ್ಠೆ ವೃದ್ಧಿಯಾಗುತ್ತದೆ. ಈ ಕಾರಣದಿಂದ ಮಾನವೀಯ ಮೌಲ್ಯಗಳು ಮತ್ತು ತ್ವರಿತ ಸೇವೆ ಸಂಘದ ಬೆಳವಣಿಗೆಗೆ ಅಗತ್ಯ ಅಸ್ತ್ರಗಳಾಗಿವೆ.

ನಿರ್ದೇಶಕರಲ್ಲಿ ಬಲವಾದ ಅಂತರಿಕ ಸಂಬಂಧ ಎಂಬುದು ಸಹಕಾರ ಸಂಘದ ಆಡಳಿತಕ್ಕೆ ಅಡಿಪಾಯ ಹಾಗೂ ದಿಕ್ಕು ನೀಡುವ ಶಕ್ತಿ ಈ ಸಂಬಂಧಗಳು ನೈತಿಕ ಮೌಲ್ಯಗಳಿಂದ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಕರ್ತವ್ಯ ರೂಪುಗೊಳ್ಳಬೇಕು. ಸಂಘದ ಉದ್ದೇಶಗಳ ಸಾಧನೆಗೆ ನಿರ್ದೇಶಕರು ಒಗ್ಗಟ್ಟಿನ ಶಕ್ತಿ ಅತ್ಯಗತ್ಯವಾಗಿದ್ದು, ಅವರ ನಡುವೆ ಒಳ್ಳೆಯ ಸಂಬಂಧ ಬೆಳೆಯಲು ಸದಾ ಪ್ರಯತ್ನಿಸಬೇಕಾಗಿದೆ. ಮಾನವೀಯ ಮೌಲ್ಯಗಳು ಸಹಕಾರ ಸಂಘದ ಅಂತರಿಕ ಶಕ್ತಿಯಷ್ಟೆ ಅಲ್ಲ. ಅದು ಸಹಕಾರ ಸಂಘದ ನೈತಿಕ ದಿಕ್ಕೂಜೆ ಆಗಿದೆ ಈ ಮೌಲ್ಯಗಳನ್ನು ಸಂರಕ್ಷಿಸಿ ಅನುಸರಿಸಿದರೆ

ಮಾತ್ರ ಸಹಕಾರ ಸಂಘಗಳು ಜನರ ಹಿತಕ್ಕಾಗಿ ನಿರಂತರವಾಗಿ ಕಾರ್ಯನಿರ್ವಿಸಬಲ್ಲವು. ಇದರಿಂದ ಸಹಕಾರ ಸಂಘದ ಮೇಲೆ ಇರುವ ಸಾರ್ವಜನಿಕ ವಿಶ್ವಾಸ ಹೆಚ್ಚಾಗಿ, ದೀರ್ಘಕಾಲಿಕ ಯರನ್ನು ಸಾಧ್ಯವಾಗುತ್ತದೆ.

ಸಿಬ್ಬಂದಿಗಳು ಯಾವುದೇ ಸಂಸ್ಥೆಯ ನಾಡಿಯಾಗಿದ್ದಾರೆ. ಅವರು ಪ್ರತಿದಿನವೂ ತಮ್ಮ ಶ್ರಮ, ಸಮಯ ಮತ್ತು ಬುದ್ದಿಯನ್ನು ತಾವು ನಿರ್ವಹಿಸುವ ಕೆಲಸದಲ್ಲಿ ಹಾಕುತ್ತಿರುವಾಗ, ಅವರಿಗೆ ತೋರಬೇಕಾದ ಮಾನವೀಯತೆ ನೈತಿಕ ಕರ್ತವ್ಯ ಪ್ರಾಮಾಣಿಕತೆ, ಗೌರವ, ಸಹಾನುಭೂತಿ, ಸಮಾನತೆ ಮತ್ತು ನಂಬಿಕೆ ಎಂಬ ಮೌಲ್ಯಗಳನ್ನು ತೋರಿದಾಗ, ಸಿಬ್ಬಂದಿಯ ಆತ್ಮವಿಶ್ವಾಸ ಮತ್ತು ನಿಷ್ಠೆ ಹೆಚ್ಚಾಗುತ್ತದೆ. ಇದು ಸಂಸ್ಥೆಯ ಉದ್ದೇಶಗಳನ್ನು ಸಾಧಿಸಲು ಹಾಗೂ ಸದೃಢ ವೃತ್ತಿ ಸಂಸ್ಕೃತಿಯನ್ನು ರೂಪಿಸಲು ಸಹಕಾರಿ. ಹೀಗಾಗಿ ಸಿಬ್ಬಂದಿಯನ್ನು ಕೇವಲ ಕೆಲಸಗಾರರಾಗಿ ನೋಡದೆ, ಮಾನವೀಯತೆಯಿಂದ ಕೂಡಿದ ಸಹೋದ್ಯೋಗಿಗಳಾಗಿ ಕಾಣುವುದು ಸಂಸ್ಥೆಯ ದೀರ್‌ಫಕಾಲಿಕ ಯಶಸ್ಸಿಗೆ ಪೂರಕವಾಗಿದೆ. ಮಾನವೀಯ ಮೌಲ್ಯಗಳು ತಮ್ಮ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುತ್ತಾ ಇದ್ದರೆ, ಅದು ಪ್ರತಿ ಸಂಸ್ಥೆಗೆ ವಿಶ್ವಾಸರ್ಹತೆಯ ಹಾಗೂ ಗೌರವದ ಬುನಾದಿಯಾಗುತ್ತದೆ.

ಶ್ರೀಮತಿ ಎನ್. ಇ. ಸವಿತ.

ಕಿರಿಯ ಅಧಿಕಾರಿ, ಕ. ರಾ. ಸೌ. ಸಂ. ಸ ನಿ..ಬೆಂಗಳೂರು

 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More