ಹೆಸರೇ ಸೂಚಿಸುವಂತೆ ʻಬ್ರಹ್ಮಚಾರಿಣಿ’ ಬ್ರಹ್ಮ:-ಎಂದರೆ ತಪಸ್ಸು ಅಥವ ಜ್ಞಾನ ಎಂದು ಅರ್ಥ ಚಾರಿಣಿ:- ಎಂದರೆ ನಡೆಯುವುದು. “ಬ್ರಹ್ಮಚಾರಿಣಿ” :- ಎಂದರೆ ಜ್ಞಾನಮಾರ್ಗದಲ್ಲಿ ನಡೆಯವುದು ಎಂದರ್ಥ. ತಾಯಿ ಬ್ರಹ್ಮಚಾರಿಣಿ ದೇವಿಯು ದೃಢತೆ ಮತ್ತು ನಡವಳಿಕೆಯ ಸಂಕೇತ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಪಾರ್ವತಿ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ ಈ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ
ಕೇರಳದ ಕೆಲವು ಸಹಕಾರಿ ಸಂಘಗಳು ದೊಡ್ಡ ಸದ್ದು ಮಾಡುತ್ತಿವೆ. ಸಹಕಾರಿ ತತ್ವಕ್ಕೆ ಮಸಿ ಬಳಿಯುವ ನಡೆ ಆ ಸಹಕಾರಿ ಸಂಘಗಳದ್ದು. ಸುಮಾರು ಮುನ್ನೂರು ಕೋಟಿಯಷ್ಟು ಸದಸ್ಯರ ಠೇವಣಿಯನ್ನು ನುಂಗಿ ನೀರು ಕುಡಿದ ತೃಶೂರಿನ ಕರವನ್ನೂರು ಸಹಕಾರಿ ಸಂಘ ಆರು ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಕೂಡ ಆಯಿತು. ಸಹಜ ಭಯ ಇದು ಒಂದು ಸುದ್ದಿ ಮಾಧ್ಯಮಗಳಲ್ಲಿ ಬಂದುದೇ ತಡ. ಸಹಕಾರಿ ಸಂಘಗಳಲ್ಲಿ ಠೇವಣಿ ಹೂಡಿದವರು ಕಂಗಾಲು. ನಮ್ಮ ಸಹಕಾರಿ ಸಂಘ ಗಟ್ಟಿ ಇದೆಯ? ಆಡಳಿತ ಮಂಡಳಿ
ನಮ್ಮ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಸ್ಥೂಲವಾಗಿ 3 ವಿಂಗಡನೆ ಮಾಡಿದರೆ. ಒಂದು ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್, ಎರಡು ಪ್ರೈವೇಟ್ ಬ್ಯಾಂಕ್ಸ್ ಮತ್ತು ಮೂರನೇ ಕೂ ಆಪರೇಟಿವ್ ಬ್ಯಾಂಕ್ಸ್. ಮೂರು ಬ್ಯಾಂಕ್ ವ್ಯವಸ್ಥೆ ಗಳು RBI ನ ಅತ್ಯಂತ ಉನ್ನತ ಮಟ್ಟದ , ವೈಜ್ಞಾನಿಕ , ಆಧುನಿಕ , ಪ್ರೊಫೆಷನಲ್ Regulations ಗಳ ಅಡಿಯಲ್ಲಿ ಕಾರ್ಯ ನಿರ್ವಹಣೆ ಆಗುತ್ತಿರುವಾಗ ಲೂ., ಹಲವಾರು ಕಾರಣ ಗಳಿಂದಾಗಿ…. Inclination towards Liquidation , ದಿವಾಳಿ ಆಗುವ ದಿಕ್ಕಿನ ಕಡೆ ವಾ
ಜಗತ್ತಿನಲ್ಲಿ ಹಲವಾರು ತತ್ವ ಸಿದ್ದಾಂತಗಳು ಜ್ಯಾರಿಗೆ ಬಂದದ್ದನ್ನು ಇತಿಹಾಸದ ಪುಟಗಳಲ್ಲಿ ನಾವು ಕಾಣಬಹುದು.ಬಂಡವಾಳಶಾಹಿ ಮತ್ತು ನೌಕರಶಾಹಿಗಳು ಇವುಗಳಲ್ಲಿ ಪ್ರಬಲ ಹಾಗೂ ಒಂದಕ್ಕೊಂದು ವಿರುದ್ದ ಧ್ರುವಗಳು. ಇವುಗಳ ಮಧ್ಯದ ತತ್ವದ ಆಧಾರದಲ್ಲಿ ಸಹಕಾರಚಿಂತನೆ ಹುಟ್ಟಿಕೊಂಡಿತು. ಉಗ್ರವಾದ ಇತ್ತೀಚೆಗಿನ ಬೆಳವಣಿಗೆ. ಪುರಾಣದ ರಾಕ್ಷಸ ಸಿದ್ದಾಂತ ಉಗ್ರವಾದ ಬೇರು. ಬಂಡವಾಳವಾದˌ ನೌಕರವಾದˌ ಉಗ್ರವಾದ ಮುಂತಾದ ಯಾವುದೇ ಚಳವಳಿಗಳು ಸರ್ವಜನರ ಬದುಕಿಗೆ ನೆಮ್ಮದಿ ನೀಡಿಲ್ಲ. ಪರಸ್ಪರ ಕೂಡಿ ಬಾಳುವ ಸಹಕಾರ ಸಿದ್ದಾಂತ ನಾಗರಿಕತೆಯ ಜತೆಜತೆಯಲ್ಲಿ ಸಾಗಿಬಂದಿದೆ. ಮತ್ತೆಲ್ಲವು ಕ್ಷಣಿಕ ಅಥವಾ ಒಂದು ವರ್ಗದ
ಭಾರತದ ಸಹಕಾರ ಚಳುವಳಿ ಆರಂಭವಾದದ್ದೇ ‘ಪತ್ತಿನ ಸಹಕಾರ ಸಂಘಗಳ ‘ ಸ್ಥಾಪನೆ ಮೂಲಕ, ಆದುದರಿಂದ ‘ಸಹಕಾರ ‘ ಮತ್ತು ‘ಪತ್ತು ‘ (ಸಾಲ) ಅವಿಭಾಜ್ಯ ಅಂಗಗಳಾಗಿ , ‘ ಒಂದೇ ನಾಣ್ಯದ ಎರಡುಮುಖಗಳೇ ‘ ಎಂಬಂತೆ ಇಂದಿಗೂ ಮುಂದುವರಿಯುತ್ತಿದೆ ಎಂದರೆ ತಪ್ಪಾಗಲಾರದು. ಐರೋಪ್ಯ ರಾಷ್ಟ್ರಗಳಲ್ಲಿ ಕೈಗಾರಿಕೆ ಕ್ರಾಂತಿಯ ಫಲವಾಗಿ , ಕಾರ್ಮಿಕರ ಕಲ್ಯಾಣಕ್ಕಾಗಿ ‘ರಾಕ್ ಡೇಲ್ ‘ ಅಗ್ರಗಾಮಿಗಳಿಂದ ‘ಗ್ರಾಹಕ ” ಬಳಕೆದಾರರ ‘ ಸಹಕಾರ ಸಂಘ ಸ್ಥಾಪನೆಯಾಗಿ ಒಂದು ಚಳುವಳಿಯ ‘ಆಂದೋಲನ ‘ ದ ರೂಪವನ್ನು
ಪರಂಪರೆಯು ಕ್ರಿಯಾತ್ಮಕ, ಮನುಷ್ಯನ ಜೀವನದಂತೆ ಸಂರ್ಕಿಣವಲ್ಲ. ಮತ್ತು ನಾವು ಅದನ್ನು ನಿರಂತರವಾಗಿ ವಿಕಸನಗೊಳಿಸಿ ಪ್ರಸ್ತುತಪಡಿಸಬೇಕು, ಆನೆಗುಂದಿ ಗ್ರಾಮಸ್ಥರು ತಮ್ಮ ಐತಿಹಾಸಿಕ ಗ್ರಾಮವನ್ನು ಬಾಳೆ ನಾರಿನ ಕರಕುಶಲ ಉಪಕ್ರಮದ ಮೂಲಕ ಸುಸ್ಥಿರ ಅಭಿವೃದ್ಧಿಯ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ ಈ ತತ್ವವನ್ನು ನಿರೂಪಿಸಿದ್ದಾರೆ. ಆನೆಗುಂದಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ಸಮೀಪವಿರುವ ಒಂದು ಪ್ರಾಚೀನ ಗ್ರಾಮವಾಗಿದೆ. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿದೆ. ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾಗಿದ್ದ ಆನೆಗುಂದಿ 14ನೇ ಶತಮಾನಕ್ಕೂ ಹಳೆಯದಾದ ಕನ್ನಡ ಪದದ ಆನೆಯ
“ಶಿಕ್ಷಕರಾದವರು ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ಬಿತ್ತುವವರಾದರೆ, ನಮ್ಮ ದೇಶದ ಭವಿಷ್ಯವು ಉಜ್ವಲವಾಗುತ್ತದೆ. ಅದಕ್ಕೇ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಕರೆಂದರೆ ಅವರನ್ನು ಕೇವಲ ಉದ್ಯೋಗಿಗಳು ಎಂದು ಪರಿಗಣಿಸಿಲ್ಲ. ಅವರನ್ನು ಸಮಾಜದ ಗೌರವ ಪ್ರದಾನವಾಗುವಂತೆ ವ್ಯವಸ್ಥೆಯಲ್ಲಿ ಗುರುತಿಸಲಾಗಿದೆ. ಆ ಗೌರವಯುತ ವ್ಯವಸ್ಥೆಯನ್ನು ಎಷ್ಟು ಸಮರ್ಥವಾಗಿ ಇಂದು ಕಾಪಾಡಿಕೊಳ್ಳಲಾಗಿದೆ ಎಂಬುದು ಚರ್ಚಾರ್ಹ ಸಂಗತಿಯಾಗಿರಬಹುದು…… “ ಮನುಷ್ಯನ ಜೀವನದಲ್ಲಿ ಅತೀ ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುವುದು ಬಾಲ್ಯ. ಆ ಬಾಲ್ಯದಲ್ಲಿ ಅಪ್ಪ– ಅಮ್ಮ ಮತ್ತು ಸ್ನೇಹಿತರ ಹೊರತಾಗಿ ನೆನಪಿರುವುದೆಂದರೆ ಶಾಲೆ ಮತ್ತು ಅಲ್ಲಿ ಪಾಠ
ಪತ್ತಿನ ಸಹಕಾರ ಸಂಘಗಳು ಮತ್ತು ವಿವಿದೋದ್ದೇಶ ಸಹಕಾರ ಸಂಘಗಳು ಸದಸ್ಯರಿಂದ ಠೇವಣಿ ಸಂಗ್ರಹಿಸುವುದು ಮತ್ತು ಸದಸ್ಯರಿಗೆ ಸಾಲ ನೀಡುವ ಮತ್ತು ಇತರೆಡೆ ಹೂಡಿಕೆ ಮಾಡುವ ಚಟುವಟಿಕೆಯಲ್ಲಿ ಕೊಡಗಿನ ಕೊಂಡಿವೆ. ಅಂದರೆ, ಇದೂ ಕೂಡ ಸಂಘದೊಳಗಿನ ಬ್ಯಾಂಕಿಂಗ್ ಚಟುವಟಿಕೆ. ಭ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪರವನಾಗಿ ಪಡೆಯುವುದರಿಂದ ಸಾರ್ವಜನಿಕರಿಂದ ರೇವಣಿಸ್ವೀಕರಿಸಲು ಮತ್ತು ಸಾರ್ವಜನಿಕರಿಗೆ ಸಾಲ ನೀಡಲು ಅರ್ಹತೆ ಪಡೆದರುತ್ತವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಗಳು, ಈ
ಗ್ರಾಮೀಣ ಜನತೆಯ ಸರ್ವಾಂಗೀಣ ಅವಶ್ಯಕತೆಯ ತಾಣ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳು.ನಮ್ಮ ದೇಶದಲ್ಲಿ ಸುಮಾರು ನೂರಹದಿನೆಂಟು ವರ್ಷಗಳ ಹಿಂದೆ ಶ್ರೀಮಂತರಿಂದ ಆ಼ರ್ಥಿಕ಼ ಶೋಷಣೆಗೆ ಒಳಗಾದ ಮಧ್ಯಮ ಹಾಗೂ ಬಡವರ್ಗದ ಜನರ ರಕ್ಷಣೆಗಾಗಿ ಸಹಕಾರಿ ಸಂಘಗಳು ಹುಟ್ಟಿಕೊಂಡವು.1904ರಲ್ಲಿ ಕರ್ನಾಟಕದ ಗದಗ ಜಿಲ್ಲೆ ಕಣಗಿನಹಾಳದಲ್ಲಿ ದಿ. ಸಿದ್ದನಗೌಡ ಸಂಣರಾಮನ ಗೌಡ ಪಾಟೀಲರ ಮುತುವರ್ಜಿಯಲ್ಲಿ ಆರಂಭಗೊಂಡ ಸಹಕಾರ ಚಳವಳಿ ಮುಂದಿನ ದಿನಗಳಲ್ಲಿ ಹಿಂತಿರುಗಿನೋಡಿರುವುದಿಲ್ಲ.ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಸಹಕಾರಿವ್ಯವಸ್ಥೆ ಸದಸ್ಯರೆಲ್ಲರೂ ಸಮಾನರು ಎಂಬ ಸಿದ್ದಾಂತದಡಿ
ಸಾಂಸ್ಥಿಕ ನಡವಳಿಕೆಯು (Organizational Behaviour) ಒಂದು ಸಂಸ್ಥೆಯ ಉದ್ಯೋಗಿಗಳು ವೈಯಕ್ತಿಕವಾಗಿ ಮತ್ತು ಗುಂಪುಗಳಾಗಿ ಹೇಗೆ ಸಂವಹನ ಮಾಡುತ್ತಾರೆ ಮತ್ತು ಅವರ ಪರಸ್ಪರ ವರ್ತನೆಯು ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಮೌಲ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ನಡೆಸುವ ಒಂದು ವಿಷಯವಾಗಿರುತ್ತದೆ. ಇದು ‘ಉದ್ಯೋಗಿಗಳು’ – ಅವರ ವ್ಯಕ್ತಿತ್ವ ‘ ಮತ್ತು ‘ಸಂಸ್ಥೆ’ – ಸಂಸ್ಥೆಯ ಸಂಸ್ಕೃತಿ (Organizational Culture) ಈ ಎರಡೂ ಅಂಶಗಳ ಬಗ್ಗೆ ಏಕಕಾಲದಲ್ಲಿ ನಡೆಯಬೇಕಾದ ಅಧ್ಯಯನ ವಿಷಯವಾಗಿದೆ. ಒಬ್ಬ ವ್ಯಕ್ತಿಯು ಇತರರಿಗಿಂತ