ಯುಗಾದಿ ನಮ್ಮ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬವೇ ಯುಗಾದಿ. “ಯುಗ” ಎಂದರೆ ಯುಗ ಅಥವಾ ಕಾಲ, “ಆದಿ” ಎಂದರೆ ಆರಂಭ ಎಂಬರ್ಥ. ಅಂದರೆ ಯುಗಾದಿ ಎಂದರೆ ಹೊಸ ಯುಗದ ಆರಂಭ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಿಂದ ಹೊಸ ವರ್ಷದ ಆರಂಭವಾಗುತ್ತದೆ ಎಂದು ನಂಬಲಾಗುತ್ತದೆ. ಪರಾಭವ ಸಂವತ್ಸರದ ಆರಂಭ : ಭಾರತೀಯ ಪಂಚಾಂಗದ ಪ್ರಕಾರ ಪ್ರತಿವರ್ಷಕ್ಕೂ ಒಂದು ವಿಶೇಷ ಹೆಸರು ಇರುತ್ತದೆ. ಈ
ಕರಾವಳಿ ಕರ್ನಾಟಕದ ಸಹಕಾರ ಚಳವಳಿ ಜನರ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಕೊಡುಗೆ ನೀಡಿದೆ. ಇಲ್ಲಿ ಶಿಕ್ಷಣˌ ಆರೋಗ್ಯˌ ಸಂಸ್ಕೃತಿˌ ಸಂಸ್ಕಾರ ಮುಂತಾದವು ಏರುಗತಿಯಲ್ಲಿ ಸಾಗಿದ ರೀತಿಯಲ್ಲಿ ಸಹಕಾರ ಕೂಡಾ ಜನಮಾನಸದಲ್ಲಿ ಬೇರೂರಿದೆ. 20ನೇ ಶತಮಾನದ ಆರಂಭದಲ್ಲಿ ಸಹಕಾರದ ಮುನ್ನಡೆಗೆ ಜನಸಾಮಾನ್ಯರನ್ನು ಹುರಿದುಂಬಿಸಿದವರು ಸಹಕಾರಿ ಪಿತಾಮಹ ದಿ: ಮೊಳಹಳ್ಳಿ ಶಿವರಾಯರು . ಅವಿಭಜಿತ ದ.. ಕ.ಜಿಲ್ಲೆ ಯ ಬೈಂದೂರಿನಿಂದ ಕಾಸರಗೋಡಿನ ನೀಲೇಶ್ವರ ತನಕ ಸಹಕಾರಿ ಸಂಘಗಳನ್ನು ಕಟ್ಟಲು ಯಾವುದೇ ಸಂಚಾರ ಸೌಲಭ್ಯಗಳಿಲ್ಲದ ಅಂದಿನ ದಿನಗಳಲ್ಲಿ ಕಾಲ್ನಡಿಗೆˌ ಎತ್ತಿನ ಗಾಡಿಯಲ್ಲಿ
ಜಪಾನ್ನಲ್ಲಿ ಗ್ರಾಹಕ ಸಹಕಾರ ಚಳುವಳಿ ಸಮೂಹ ಶಕ್ತಿಯ ಆರ್ಥಿಕ ರೂಪವಾಗಿದೆ. ಇದು ಗ್ರಾಹಕರ ಅಗತ್ಯ, ಆರೋಗ್ಯ ಮತ್ತು ಹಿತಾಸಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡ ಸಾಮಾಜಿಕ–ಆರ್ಥಿಕ ವ್ಯವಸ್ಥೆ. ಲಾಭಕ್ಕಿಂತ ಸೇವೆ ಮುಖ್ಯ ಎಂಬ ತತ್ವದ ಮೇಲೆ ನಿರ್ಮಿತವಾದ ಈ ಚಳುವಳಿ, ಇಂದು ಕೋಟ್ಯಾಂತರ ಸದಸ್ಯರನ್ನು ಹೊಂದಿರುವ ಬಲಿಷ್ಠ ಜಾಲವಾಗಿ ಪರಿಣಮಿಸಿದೆ. ದೇಶದಾದ್ಯಂತ 300ಕ್ಕೂ ಹೆಚ್ಚು ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಯೋಜಿಸುವುದು Japanese Consumers’ Co-operative Union (JCCU). ಸುಮಾರು 30 ಮಿಲಿಯನ್ಕ್ಕಿಂತ ಹೆಚ್ಚು ಸದಸ್ಯತ್ವ ಮತ್ತು
ಸಹಕಾರಿ ಕ್ಷೇತ್ರದ ಆಧಾರ ಸ್ಥಂಭ ಎಂದರೆ ಸದಸ್ಯರೆ. ಸಹಕಾರಿ ಸಂಘಗಳ ಒಡೆತನ ಕೂಡ ಅವರದ್ದೆ. ಸಂಘದ ಏಳುಬೀಳುಗಳಲ್ಲಿ, ಕಷ್ಟ ಸುಖಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಸಹಕಾರಿ ಸಂಘಗಳು ಕೂಡ ತಮ್ಮ ಸದಸ್ಯರ ಬಗ್ಗೆ ಕಾಳಜಿ, ಆಸ್ಥೆ ವಹಿಸಿಕೊಳ್ಳಲು ಮುಂದಾಗಬೇಕು. ಸದೃಢ ಸದಸ್ಯರು ಸಂಘವನ್ನು ಮತ್ತಷ್ಟು ಇನ್ನಷ್ಟು ಮುನ್ನಡೆಸಲು ಅನುವುಮಾಡಿಕೊಡುವ ಜವಾಬ್ದಾರಿ ಸಹಕಾರಿ ಸಂಘದ ಆಡಳಿತ ಮಂಡಳಿಯದ್ದು ಎಂಬುದನ್ನು ಯಾವತ್ತೂ ಮರೆಯಬಾರದು. ಸದಸ್ಯರ ಆರೋಗ್ಯದ ದೃಷ್ಟಿಯಿಂದ ಸಹಕಾರಿ ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಹೊಸದಾದ
ನಮ್ಮ ಭಾರತ ದೇಶದ ಇತಿಹಾಸದ ವೀರಾಧಿವೀರ ಮತ್ತು ಶೂರಾಧಿಶೂರರ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರು ಅಗ್ರಪಂತಿಯಲ್ಲಿ ಕಾಣಸಿಗುತ್ತದೆ. ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಜನ ಮಾನಸವಲ್ಲದೇ ಅನೇಕ ಇತಿಹಾಸಕಾರರು ಇದನ್ನೇ ನಮೂದಿಸಿದ್ದಾರೆ. ಇಡೀ ದೇಶ ಮುಸಲ್ಮಾನರ ಆಕ್ರಮಣಕ್ಕೆ ಒಳಗಾಗಿದ್ದಾಗ ಬಹುಸಂಖ್ಯಾತ ಹಿಂದೂಗಳ ಪರವಾಗಿ ಮಹಾರಾಷ್ಟ್ರದಲ್ಲಿ ಸ್ವಸಾಮರ್ಥ್ಯದಿಂದ ತನ್ನ ಹದಿನಾರನೇಯ ವಯಸ್ಸಿನಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ ಶಿವಾಜಿ ಮಹಾರಾಜರ ಆಗಮನವಾಗದೇ
‘ನಂದಿನಿ’ ಈಗ ಮನೆ ಮಾತಾಗಿದೆ. ಅತ್ಯಂತ ಯಶಸ್ವಿ’ ಸಹಕಾರ ಚಳುವಳಿ’ಯ ಮಾದರಿ ಯಾಗಿದೆ. ಹೈನು ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಿವೆ. ರಾಷ್ಟ್ರದ ರಾಜಧಾನಿ ದೆಹಲಿಯ ಮಾರುಕಟ್ಟೆ ಪ್ರವೇಶಿಸಿದೆ. ದೂರದ ಅಮೇರಿಕದಲ್ಲಿ ಮಾರುಕಟ್ಟೆ ಕಂಡುಕೊಂಡಿದೆ. ಇದರ ರಚನೆ ‘ಸಹಕಾರ ಶೃಂಗ ವ್ಯವಸ್ಥೆ’ಯಾಗಿದ್ದು ಉತ್ಪಾದನೆ ಮಾರುಕಟ್ಟೆ ಹೈನುಗಾರಿಕೆ ‘ರೈತರಿಂದ ರೈತರಿಗಾಗಿ ರೈತರ ದೇ’ ಆದ ವ್ಯವಸ್ಥೆ/ ಸಂಸ್ಥೆ ಎಂಬ ಅರಿವು ಸಾರ್ವಜನಿಕರಲ್ಲಿ, ಅದರಲ್ಲಿಯೂ ಇಂದಿನ ಯುವಜನತೆಯಲ್ಲಿ, ಗ್ರಾಹಕರಲ್ಲಿ ಮತ್ತು ರೈತರಲ್ಲೂ ಮೂಡಿಸುವ ಅವಶ್ಯಕತೆ ಇದೆ. ಅನೇಕರಲ್ಲಿ ಇದು ಸರ್ಕಾರದ / ಸರ್ಕಾರದ
ಸುಸ್ಥಿರ ಅಭಿವೃದ್ಧಿ ಎಂದರೇನು? ಸುಸ್ಥಿರ ಅಭಿವೃದ್ಧಿಯನ್ನು “ಪ್ರಸ್ತುತ ತಲೆಮಾರಿನ ಅಗತ್ಯಗಳನ್ನು ಪೂರೈಸುವಲ್ಲಿ, ಭವಿಷ್ಯದ ತಲೆಮಾರುಗಳು ತಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹಾನಿಗೊಳಪಡಿಸದೆ ನಡೆಯುವ ಅಭಿವೃದ್ಧಿ” ಎಂದು ವ್ಯಾಖ್ಯಾನಿಸಲಾಗಿದೆ. (ಬ್ರುಂಡ್ಟ್ಲ್ಯಾಂಡ್ ವರದಿ, 1987). ಪ್ರಯೋಗಾತ್ಮಕವಾಗಿ ಸುಸ್ಥಿರ ಅಭಿವೃದ್ಧಿಯ ಅರ್ಥ ಮತ್ತು ಕಲ್ಪನೆ ವಿಭಿನ್ನ ವ್ಯಕ್ತಿಗಳಿಗೆ ವಿಭಿನ್ನವಾಗಿರಬಹುದು. ಇದು ಮಾನವ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ಜೊತೆಗೆ, ಆರ್ಥಿಕತೆ ಮತ್ತು ಸಮಾಜ ಅವಲಂಬಿತವಾಗಿರುವ ಪ್ರಕೃತಿ ಸಂಪನ್ಮೂಲಗಳು ಹಾಗೂ ಪರಿಸರ ವ್ಯವಸ್ಥಾ ಸೇವೆಗಳನ್ನು ಮುಂದುವರಿಸಿ ಒದಗಿಸುವ ನೈಸರ್ಗಿಕ ವ್ಯವಸ್ಥೆಗಳ ಸಾಮರ್ಥ್ಯವನ್ನು
ಸಂಕ್ರಾಂತಿ ಭಾರತೀಯ ಸಂಸ್ಕೃತಿಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಕೇವಲ ಋತು ಪರಿವರ್ತನೆಯ ಹಬ್ಬವಲ್ಲ; ಮಾನವ ಜೀವನದಲ್ಲಿ ಹೊಸತನ, ಸಮೃದ್ಧಿ ಮತ್ತು ಪರಸ್ಪರ ಸಹಬಾಳ್ವೆಯ ಸಂಕೇತವಾಗಿದೆ. ಇದೇ ರೀತಿಯಾಗಿ, ಸಹಕಾರ ಎಂಬ ತತ್ವವೂ ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ಅವಲಂಬನೆ ಮತ್ತು ಸಮಾನ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಚಳವಳಿಯಾಗಿದೆ. ಈ ಎರಡರ ನಡುವೆ ಆಳವಾದ ಅರ್ಥಸಂಬಂಧವಿದೆ. ಸಂಕ್ರಾಂತಿ ಹಬ್ಬವು ಕೃಷಿ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ರೈತನು ತನ್ನ ಶ್ರಮದ ಫಲವಾಗಿ ಬೆಳೆ ಕಟಾವು ಮಾಡಿ ಸಂತಸ ಪಡುವ
ಸಹಕಾರ ಜಗತ್ತಿನ ನಾಗರಿಕತೆ ಜತೆಯಲ್ಲಿ ಬೆಳೆದ ಜೀವನಪದ್ದತಿ.ಸುಮಾರು ಒಂದೂವರೆ ಶತಮಾನದ ಹಿಂದೆ ಅದಕ್ಕೊಂದು ಚಳುವಳಿಯ ಸ್ವರೂಪ ದೊರೆಯಿತು. ಭಾರತದ ಸಹಕಾರಭೂಮಿಕೆಗೆ 120ವರ್ಷದ ಇತಿಹಾಸ . ಗ್ರಾಮಕ್ಕೊಂದು ಪಂಚಾಯತ್ ˌಶಾಲೆˌ ಸಹಕಾರಿ ಸಂಘ ಇದ್ದಲ್ಲಿ ಆ ಗ್ರಾಮದ ಜನಜೀವನದ ಸುಭದ್ರತೆಗೆ ದಾರಿದೀಪ ಎಂಬ ಕಲ್ಪನೆ ನಾಡ ಕಟ್ಟುವ ಜನಕರಲ್ಲಿ ಉಂಟಾಗಿತ್ತು. ಇಂತಹ ವ್ಯವಸ್ಥೆ ಕಲ್ಪನೆ ಮಾತ್ರ ಆಗದೇ ಯಶಸ್ಸು ಕೂಡಾ ಕಂಡಿತು. ಮನುಷ್ಯ ಸಂಸ್ಕಾರವಂತ ಜ್ಞಾನವಂತನಾಗಿ ಬಾಳಲು ಪ್ರಾಥಮಿಕ ಶಾಲೆ ಬುನಾದಿ. ಆತನ ಬಾಳಿನ ವರ್ಚಸ್ಸು ಬೆಳಗಲು ವಿದ್ಯೆ
ಉತ್ತರ ಕನ್ನಡ ಜಿಲ್ಲೆಯು ಸಹಕಾರಿ ಚಳುವಳಿಯಲ್ಲಿ ಒಂದು ವಿಶೇಷ ಸ್ಥಾನ ಹೊಂದಿದ್ದು ಇಲ್ಲಿನ ವಿವಿಧ ರೀತಿಯ ಸಹಕಾರಿ ಸಂಘ ಸಂಸ್ಥೆಗಳು ರಾಜ್ಯದ ಸಹಕಾರಿ ಚಳುವಳಿಯನ್ನು ಶ್ರೀಮಂತಗೊಳಿಸಿದೆ. ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ದಿನಾಂಕ 13.11.1969 ರಂದು ಜನಿಸಿದ ಶ್ರೀ ವಿಶ್ವನಾಥ ಸುಬ್ರಾಯ ಭಟ್ಟ ಇವರು ಖರ್ವಾ ಗ್ರಾಮದಲ್ಲಿಯೇ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿ ಕೃಷಿಯನ್ನು ತಮ್ಮ ಜೀವನೋಪಾಯವಾಗಿ ಬಳಸಿಕೊಂಡಿದ್ದರೂ ತದನಂತರ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರರಾಗಿ ಹಲವು ವರ್ಷಗಳ ಕಾಲ