100 ವರ್ಷಗಳ ಹಿಂದಿನ ಮಾತು, R.B.I. ಮತ್ತು ಬ್ಯಾಂಕ್ ಪ್ರಾರಂಭವಾಗಬೇಕಾಗಿತ್ತಷ್ಟೆ, ಸಮಾಜದ ವ್ಯಕ್ತಿಗಳ ವೈಯಕ್ತಿಕ ಆರ್ಥಿಕ ಅಗತ್ಯತೆಗಳನ್ನು ಪೂರೈಸಲು ಒಂದು ಆರ್ಥಿಕ ವ್ಯವಸ್ಥೆಯ ಅವಶ್ಯಕತೆ ಇದ್ದ ಕಾಲ. ಮಾನವ ಆಧುನಿಕ ಶಿಕ್ಷಣ ಪಡೆಯಲು, ಜ್ಞಾನಾರ್ಜನೆ ಮಾಡಲು, ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೂ ಹಣದ ಕೊರತೆ ಕಾಡುತ್ತಿದ್ದ ಕಾಲ. ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಆಗ ಪ್ರಾರಂಭವಾಗಿದ್ದು ಸಹಕಾರ ಚಳುವಳಿ. ಹಾಗಾಗಿ ಸಹಕಾರ ಚಳುವಳಿಯ ಮೂಲ ಉದ್ದೇಶ ನಮ್ಮ ಸುತ್ತ ಮುತ್ತಲಿನ ಜನರ ಸಾಮಾಜಿಕ
ಜಗತ್ತಿನ ಎಲ್ಲಾ ಧರ್ಮಗಳನ್ನು, ಸಿದ್ಧಾಂತಗಳನ್ನು ಹಿಂಡಿದರೆ ಸಿಗಬಹುದಾದ ಸತ್ವಗಳನ್ನು ಒಂದು ಸಾಲಿನಲ್ಲಿ ವಿವರಿಸುವುದಾದರೆ, ಅದನ್ನು ಈ ರೀತಿಯಾಗಿ ಹೇಳಬಹುದು, “ನನಗಾಗಿ ಎಲ್ಲರರು, ಎಲ್ಲರಿಗಾಗಿ ನಾನು” ಹೌದು, ಸಹಕಾರ ಚಳುವಳಿಯ ತತ್ವವೇ ಅದು. ಸಮಾಜದ ಎಲ್ಲರನ್ನು ಒಂದೇ ಮರದ ನೆರಳಿನಲ್ಲಿ ಸೇರಿಸಲು ಸಹಕಾರದಿಂದ ಮಾತ್ರ ಸಾಧ್ಯ, ಸಹಕಾರ ಭಾರತದ ಆತ್ಮವೆಂದು ಹೇಳಿದರು ಅದು ತಪ್ಪಾಗಲಾರದು. ಹಳ್ಳಿಗಳ ದೇಶವಾದ ಭಾರತದಲ್ಲಿ ಕೃಷಿಯು ಪ್ರಧಾನವಾಗಿದೆ. ಸಹಕಾರ ತತ್ವ ಗ್ರಾಮೀಣ ಆರ್ಥಿಕತೆಯಲ್ಲಿ ನೆರವಾಗುತ್ತಾ ದೇಶದಲ್ಲಿ ಚಳುವಳಿಯಾಗಿ ಹಬ್ಬಿತು. 20ನೇ ಶತಮಾನದ ಆರಂಭದಲ್ಲಿ ಸಹಕಾರ
ಕರ್ನಾಟಕ ರಾಜ್ಯ ಸರಕಾರ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಹಿರಿಯ ಸಹಕಾರಿ ಸವಣೂರು ಸೀತಾರಾಮ ರೈ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಇತ್ತೀಚಿನವರೆಗೆ ಅನುಪಮ ಸೇವೆ ಸಲ್ಲಿಸಿದ ಕೆ.ರವಿರಾಜ ಹೆಗ್ಡೆ ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಇವರನ್ನು ಗುರುತಿಸಿ ಆಯ್ಕೆ ಮಾಡಿದೆ. ನಿಜವಾಗಿಯೂ ಸಹಕಾರ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಅನುಪಮ
“ ಸರ್ ನಮಸ್ತೆ, ನಾವೊಂದಷ್ಟು ಜನ ಸೇರಿಕೊಂಡು, ನಮ್ಮೆಲ್ಲರ ಆರ್ಥಿಕ ಅಗತ್ಯತೆಯನ್ನು ಈಡೇರಿಸಬೇಕೆಂದು ಒಂದು ಸಹಕಾರ ಸಂಘವನ್ನು ಆರಂಭಿಸುವ ಯೋಚನೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದೇವೆ… ಮಾನ್ಯ ಸಹಕಾರ ಸಂಘಗಳ ನಿಬಂಧಕರು ಒಂದಷ್ಟು ಷೇರು ಸಂಗ್ರಹಣೆ ಮಾಡಲು ಅನುಮತಿಯನ್ನು ಕೊಟ್ಟಿದ್ದಾರೆ… ಹಾಗಾಗಿ ನೀವೂ ಸ್ವಲ್ಪ ಷೇರನ್ನು ಖರೀದಿಸಬೇಕು ಸರ್…. ನಮ್ಮವರ…. ನಮ್ಮೆಲ್ಲರ ಅಗತ್ಯತೆಗೆ ಒಂದು ಸಂಸ್ಥೆ ಹುಟ್ಟುತ್ತಲ್ಲಾ ಸರ್… ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗಬೇಕೆಂದಿದ್ದೇವೆ …. ಸರ್ , ನಿಮ್ಮ ಸಹಕಾರ ತುಂಬಾ
ಈ ಬಾರಿಯ ಬಜೆಟ್ನಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಕೆಲವು ಅಂಶಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹ. 10 ಕೋಟಿ ರೂ. ಒಳಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್ಚಾರ್ಜ್ ಅನ್ನು ಶೇ.12ರಿಂದ ಶೇ.7ಕ್ಕೆ ಇಳಿಸಿರುವುದು ಸಹಕಾರ ಕ್ಷೇತ್ರದ ಬಲವರ್ಧನೆಗೆ ಪೂರಕವಾಗಲಿದೆ. ಈ ತನಕ ಸಹಕಾರ ಸಂಘಗಳು ಪಾವತಿಸುತ್ತಿದ್ದ ಪರ್ಯಾಯ ಕನಿಷ್ಠ ತೆರಿಗೆ ಮಿತಿಯನ್ನು ಶೇ.18.5ರಿಂದ ಶೇ.15ಕ್ಕೆ ಇಳಿಸಲಾಗಿದೆ. ಕಳೆದ ವರ್ಷ ಹೊಸದಾಗಿ ಆರಂಭವಾಗಿರುವ ಸಹಕಾರ ಸಚಿವಾಲಯಕ್ಕೆ 900 ಕೋಟಿ ರೂ. ನೀಡಿರುವುದು ಈ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ಸಹಕಾರ
ಸಹಕಾರ, ಅದು ಜಗತ್ತಿನ ದೃಷ್ಟಿಯಲ್ಲಿ ಒಂದು ಚಳುವಳಿ ಅಥವಾ ಸಮಾಜದ ಅಗತ್ಯತೆಯನ್ನು ಈಡೇರಿಸುವ ಒಂದು ವಿಭಿನ್ನ ಮತ್ತು ವಿಶೇಷವಾದ ಕ್ಷೇತ್ರವೆಂದೆನಿಸಿದರೂ ನಮಗೆ, ಭಾರತೀಯರಿಗೆ ಸಹಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ಮುಂದುವರಿದು ನಮ್ಮ ಸಂಸ್ಕಾರವೇ ಸಹಕಾರ ಎಂದು ಹೇಳಿದರೂ ತಪ್ಪಾಗಲಾರದು. ಭಾರತೀಯರು ಸಹಕಾರ ಪದ್ಧತಿಯನ್ನು ಶಾಲೆಯಲ್ಲಿಯೋ ಅಥವಾ ಯಾವುದೋ ಪುಸ್ತಕಗಳನ್ನು ಓದಿ ಕಲಿಯಬೇಕೆಂದಿಲ್ಲಾ.ನಮ್ಮ ತಾಯಿ ನಮಗೆ ಹೇಳಿಕೊಟ್ಟು ಬೆಳೆಸಿದ ಸಂಸ್ಕಾರಗಳಲ್ಲೇ ಸಹಕಾರವನ್ನು ಬೆರೆಸಿ ಹೇಳಿಕೊಟ್ಟಿರುತ್ತಾಳೆ.ಈ ಕಾರಣದಿಂದಲೇ ಇಂದು ಸಹಕಾರ ಭಾರತದಲ್ಲಿ ಇಷ್ಟು ವ್ಯಾಪಕ ಮತ್ತು ನಿರರ್ಗಳವಾಗಿ ಹರಡಿ
ಸಹಕಾರ ಕ್ಷೇತ್ರ ಅತ್ಯಂತ ಅಪರೂಪದ ಕ್ಷೇತ್ರ. ಹಾಗೆಯೇ ವೈಶಿಷ್ಟ್ಯಪೂರ್ಣ ಕ್ಷೇತ್ರವೂ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೃಷಿಕರು, ಕೂಲಿಕಾರ್ಮಿಕರು, ಮಹಿಳೆಯರು, ದೀನದಲಿತರು ಸೇರಿದಂತೆ ಎಲ್ಲ ಅಬಲ ವರ್ಗದವರು ಸ್ವಾವಲಂಬಿ ಜೀವನವನ್ನು ಕಂಡುಕೊಳ್ಳುವ ಅತ್ಯಂತ ಸರಳ ರಂಗವಾಗಿ ಇದು ಪರಿಣಮಿಸಿದೆ. ‘ನಾನು ಎಲ್ಲರಿಗಾಗಿ – ಎಲ್ಲರೂ ನನಗಾಗಿ ‘ ಎಂಬ ಸರಳ ನಂಬಿಕೆಯಡಿ ರೂಪುಗೊಂಡಿರುವ ಸಹಕಾರ ಕ್ಷೇತ್ರವು ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಮತ್ತು ಲಿಂಗಾತೀತವಾಗಿ ಮಾತ್ರವಲ್ಲದೆ ಎಲ್ಲಾ ರೀತಿಯ ಸೈಧ್ಧಾಂತಿಕ ಇತಿಮಿತಿಗಳನ್ನೂ ದಾಟಿ ಎಲ್ಲರನ್ನೂ ಒಳಗೊಳ್ಳುವ
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ. ಮಂಗಳೂರು (Institute for Study and Development of Cooperation) ದೇಶದಲ್ಲಿಯೇ ವಿನೂತನವಾದ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಾರಂಭವಾಗಿರುವ ಸರಕಾರೇತರ ಸಂಸ್ಥೆ. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ‘ಸ್ಪಂದನ’ ಕಾರ್ಯಕ್ರಮಗಳನ್ನು ಇದು ಜಾರಿಗೊಳಿಸುತ್ತಿದೆ. ಸಹಕಾರ ಸ್ಪಂದನ, ವಿದ್ಯಾ ಸ್ಪಂದನ, ಆಪ್ತ ಸ್ಪಂದನ, ಮಹಿಳಾ ಸ್ಪಂದನ ಮತ್ತು ಗ್ರಾಮ ಸ್ಪಂದನ ಈ ಐದು ಕಾರ್ಯಕ್ರಮಗಳನ್ನು ಸಹಕಾರ ಕ್ಷೇತ್ರದಲ್ಲಿ ಅನುಷ್ಟಾನ ಮಾಡಲು ದೇಶದ ಟ್ರಸ್ಟ್ ಕಾಯಿದೆಯಡಿ ಈ ಸಂಸ್ಥೆ ರಚನೆಗೊಂಡಿದೆ. ಸಹಕಾರ ಕ್ಷೇತ್ರ ಅತ್ಯಂತ
ಕೋವಿಡ್ ಮಹಾಮಾರಿ ತನ್ನ ಎರಡನೇ ಅಲೆಯಲ್ಲಿ ದೊಡ್ಡ ಮಟ್ಟಿನ ಅನಾಹುತಗಳನ್ನು ಮಾಡುತ್ತಿದೆ. ಸಮಾಜದ ಎಲ್ಲ ವರ್ಗದ ಜನರು ಇದರ ಹೊಡೆತಕ್ಕೆ ಸಿಕ್ಕಿ ನಲುಗಿದ್ದಾರೆ. ಕೃಷಿಕರು, ಕೈಗಾರಿಕೆಗಳು, ಉದ್ಯಮಿಗಳು, ವ್ಯಾಪಾರಿಗಳು, ಕಾರ್ಮಿಕರು, ಉದ್ಯೋಗಿಗಳು, ಸಂಸ್ಥೆಗಳು ಹೀಗೆ ಇನ್ನಷ್ಟು ವಿಭಾಗಗಳಲ್ಲಿ ಇರುವ ಕೋಟ್ಯಂತರ ಮಂದಿ ಕಷ್ಟ ಕಾರ್ಪಣ್ಯಗಳಿಗೆ ತುತ್ತಾಗಿದ್ದಾರೆ. ಕಷ್ಟ ನಷ್ಟಗಳ ಪಟ್ಟಿ ವ್ಯಾಪಕವಾಗುತ್ತಿದ್ದರೂ ಒಂದು ನೆಮ್ಮದಿಯ ಸಂಗತಿ ದೇಶಕ್ಕೊಬ್ಬ ಸಮರ್ಥ ಪ್ರಧಾನಿ ಈ ಸಮಯದಲ್ಲಿ ಇರುವುದು. ಈ ಪ್ರಧಾನಿ ಹೊರತು ಇನ್ನಾರೇ ಇರುತ್ತಿದ್ದರು ಭಾರತದ ವಾಸ್ತವ ಸ್ಥಿತಿಯನ್ನು ಊಹಿಸಲೂ