ರಾಷ್ಟ್ರದ ಮತ್ತು ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ವಲಯ ಅದರಲ್ಲಿಯೂ ಎಲ್.ಪಿ. ಜಿ (Liberalisation,Privitastion, Globalization) ಪರಿಸರದಲ್ಲಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇದರ ಪರಿಣಾಮ ಸಂಪತ್ತು ಬೆಳೆಯುತ್ತಿದೆ. ಅದರೊಡನೆ ‘ಉಳ್ಳವರು ‘ ಮತ್ತು ‘ ಇಲ್ಲದವರ ‘ನಡುವಿನ ಅಂತರ ಕೂಡ ಅಗಾದವಾಗಿ ಬೆಳೆಯುತ್ತಿದ್ದು ಸಮಾಜದಲ್ಲಿ ಅನೇಕ ದುಷ್ಕೃತ್ಯ, ಅಜಾಗೂರುಕತೆ, ಅಕ್ಷೋಭೆಗೆ ಕಾರಣವಾಗುತ್ತಿದೆ. ವಿಶ್ವದ ಧ್ಯೇಯ ಸಮತಾ ಸಮಾಜ ನಿರ್ಮಾಣದ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸುವುದಾಗಿದೆ. ಈ ಉದ್ದೇಶ ಸಾಧನೆಗೆ ‘ಸಹಕಾರ ಚಳುವಳಿ’ ಅತ್ಯುತ್ತಮ ಮಾರ್ಗ ಎಂಬುದನ್ನು ‘ವಿಶ್ವ
ಸಹಕಾರ ಎಂಬುದು ಸಮಾಜದ ಎಲ್ಲ ವರ್ಗಗಳ ಏಕತೆಯನ್ನು ಹೆಚ್ಚಿಸುವ, ಪ್ರಾಮಾಣಿಕತೆ ಮತ್ತು ಪರಸ್ಪರ ಸಹಾಯವನ್ನು ಉತ್ತೇಜಿಸುವ ತತ್ವವಾಗಿದೆ. ಸಹಕಾರದ ಮೂಲಭೂತ ಉದ್ದೇಶವೆಂದರೆ, ಸ್ವಯಂ ಸೇವೆಗೆ ಆಧಾರಿತ ಗುಣಮಟ್ಟದ ಅಭಿವೃದ್ಧಿಯನ್ನು ಸಾಧಿಸುವುದು, ಇದು ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಕೇಂದ್ರ ಸರ್ಕಾರವು ‘ಸಹಕಾರದಿಂದ ಸಮೃದ್ಧಿ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗೆ ಒಂದು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಘಗಳು ಉಸಿರಾಡಬೇಕಾದರೆ ಕೃಷಿಕರ ಅವಲಂಬನೆ ಅತ್ಯಗತ್ಯ. ಈ ಸಂಘಗಳ ಬಹುತೇಕ ಶೇರುದಾರ ಸದಸ್ಯರು ಕೃಷಿಕರು ಅಥವ ಕೃಷಿ ಕ್ಷೇತ್ರ ಅವಲಂಬಿತರು. ಸಂಘ ಅವರೊಡನೆ ಯಾವ ರೀತಿಯ ಬಾಂಧವ್ಯ ಹೊಂದಿದೆ ಅದರ ಮೇಲೆ ಸಂಸ್ಥೆಯ ಸಾಮರ್ಥ್ಯ ನಿರ್ಧಾರವಾಗುತ್ತದೆ. ಠೇವಣಿಗಳು, ಉಳಿತಾಯ ಖಾತೆಗಳು, ಸಾಲಗಳು ಹೀಗೆ ಯಾವುದಿದ್ದರೂ ಅದು ಸದಸ್ಯರ ಜೊತೆಗೆ ಯಾವ ರೀತಿಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸಂಪರ್ಕ ಹೊಂದಿದೆ ಎಂಬುದರ ಮೇಲೆ ಅವಲಂಬಿತ.
ಕೆಲ ದಶಕಗಳ ಹಿಂದೆ ಮೂಡಿಬಂದ ಬಂಗಾರದ ಮನುಷ್ಯ ಎಂಬ ಚಲನಚಿತ್ರದಿಂದ ಪ್ರಭಾವಿತರಾಗಿ ಅದೇಷ್ಟೂ ಯುವಕರು ತಮ್ಮ ಹಳ್ಳಿಗಳಿಗೆ ತೆರಳಿ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು ಎಂದು ಅನೇಕ ಸಲ ಕೇಳಿದ್ದೇವೆ, ಆ ಚಲನಚಿತ್ರದ ಪರಿಣಾಮ ಹಾಗಿತ್ತೆಂದರೆ ತಪ್ಪಾಗಲಿಕಿಲ್ಲ. ಮತ್ತೂಂದೆಡೆ ಒಂದು ಸಮುದಾಯ ತಮ್ಮನ್ನು ತಾವು ಶೋಷಣೆಮುಕ್ತವಾಗುವಲ್ಲಿ ಹಾಗು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸ್ವಪ್ರಯತ್ನದ ನೈಜ ಘಟನೆಯು ಒಬ್ಬ ಚಲನಚಿತ್ರ ನಿರ್ದೇಶಕನಿಗೆ ಪ್ರಭಾವ ಬೀರಿ ತಯಾರಾದ ಚಿತ್ರವೆ ಮಂಥನ್, ಈ ಎರಡು ಚಲನಚಿತ್ರಗಳು ಸಾರಿದ ಸಮಾನ ಸಂದೇಶ ಎಂದರೆ ಸಹಕಾರಿ
ಲೆಕ್ಕಪರಿಶೋಧನೆ : ಒಂದು ಸಂಸ್ಥೆಯಲ್ಲಿ ನಿಗದಿ ಪಡೆಸಿರುವ ಅವಧಿಯಲ್ಲಿ ನಡೆದಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಪುರಾವೆಗಳೊ೦ದಿಗೆ ವಿಮರ್ಷನಾತ್ಮಕವಾಗಿ ವಿಶ್ಲೇಷಿಸಿ, ಕುಂದು ಕೊರತೆಗಳನ್ನು ಪಟ್ಟಿ ಮಾಡಿ, ಸಂಸ್ಥೆಯ ಆರ್ಥಿಕ ಸ್ಥಿತಿ-ಗತಿ ಮತ್ತು ಲಾಭ-ನಷ್ಟಗಳನ್ನು ನಿಖರವಾಗಿ ಅಂದಾಜಿಸುವ ಎಲ್ಲಾ ಪ್ರಕ್ರಿಯೆಯನ್ನು ಲೆಕ್ಕ ಪರಿಶೋಧನೆ ಎಂದು ಕರೆಯಬಹುದು. ಲೆಕ್ಕ ಪರಿಶೋಧನೆ ನಡೆಸುವಾಗ ಸಂಸ್ಥೆಯಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳನ್ನು ಪರಾಂಬರಿಸಿ, ಅವ್ಯವಹಾರಗಳನ್ನು ಕಂಡು ಹಿಡಿದು, ಸಂಸ್ಥೆಯ ನೈಜ ಆರ್ಥಿಕ ಪರಿಸ್ಥಿತಿ ಮತ್ತು ನಿಖರವಾದ ಲಾಭ-ನಷ್ಟ ಕಂಡು ಹಿಡಿಯುವಲ್ಲಿ ಲೆಕ್ಕ ಪರಿಶೋಧಕರ ಜ್ಞಾನ, ಜಾಣ್ಮೆ
“ಸಹಕಾರಿ ಕ್ಷೇತ್ರದಡಿಯಲ್ಲಿ ವಾಹನ ನಿಲುಗಡೆ.” ಮತ್ತೆ ಮತ್ತೆ ನೆನಪಿಗೆ ಬರುವುದು ‘ಆಡು ತಿನ್ನದ ಸೊಪ್ಪಿಲ್ಲ ಸಹಕಾರಿ ಕ್ಷೇತ್ರ ಮುಟ್ಟದ ನೆಲೆಯಿಲ್ಲ’ಎಂಬುದು. ತನ್ನ ಪರಂಪರಾಗತ ಬ್ಯಾಂಕಿಂಗ್ ವ್ಯವಸ್ಥೆಯೊಂದನ್ನೇ ನಚ್ಚಿಕೊಂಡಿದ್ದ ಸಹಕಾರಿ ಸಂಸ್ಥೆಗಳಿಂದು ತನ್ನ ಕಾರ್ಯ ವಿಸ್ತಾರವನ್ನು ಹರಹಿಕೊಂಡದ್ದು ನೋಡುವಾಗ ಮುಂದೊಂದು ದಿನ ಸಕಲ ಕಾರ್ಯವೂ ಸಹಕಾರಿ ವ್ಯವಸ್ಥೆಯಡಿ ಬರಬಹುದು ಎಂಬುದಂತೂ ನೂರಕ್ಕೆ ನೂರು ಸತ್ಯ. ಪಡಿತರದಿಂದ ಹಿಡಿದು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ವರೆಗೆ, ಗೊಬ್ಬರದಿಂದ ಹಿಡಿದು ಕೃಷಿಕರಿಗೆ ಬೇಕಾದ ಸರ್ವ ಸವಲತ್ತುಗಳ ವರೆಗೆ ನೂರಾರು ಸರಕು ಸೇವೆಗಳು ಸಹಕಾರಿ
ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಜನಸಂಖ್ಯೆಯ ಬಹುಪಾಲು ಜನರು ನೇರ ಅಥವಾ ಪರೋಕ್ಷವಾಗಿ ಕೃಷಿ, ಹಾಲು ಉತ್ಪಾದನೆ, ಮೀನುಗಾರಿಕೆ, ಕೈಗಾರಿಕೆ ಮತ್ತು ಗೃಹ ನಿರ್ಮಾಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳಲ್ಲಿ ಬಹುತೇಕ ಕಾರ್ಯಗಳು ಸಹಕಾರ ತತ್ವದ (Cooperative Principle) ಮೇಲೆ ನಡೆಯುತ್ತಿವೆ. ಸಹಕಾರ ಚಳವಳಿ (Cooperative Movement) ಗ್ರಾಮೀಣ ಪ್ರದೇಶಗಳ ಆರ್ಥಿಕತೆ, ಸಾಮಾಜಿಕ ಏಕತೆ ಮತ್ತು ಉದ್ಯೋಗಾವಕಾಶಗಳ ಮೂಲವಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯ ಬದಲಾವಣೆ, ತಂತ್ರಜ್ಞಾನ ಕ್ರಾಂತಿ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸಲು ಹಳೆಯ ಮಾದರಿಯ ಸಹಕಾರ
ಪ್ರಜಾಪ್ರಭುತ್ವ ಆಡಳಿತದಲ್ಲಿ ನಾಯಕತ್ವದ ಪಾತ್ರ ಬಹಳ ಪ್ರಮುಖವಾಗಿರುತ್ತದೆ.ನಾಯಕ ಅಂದರೆ ಆಡಳಿತ ವ್ಯವಸ್ಥೆಯ ರೂವಾರಿ.ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮತದಾರರ ಅಧೀನದ ಕೇಂದ್ರ ಸರಕಾರ ˌ ರಾಜ್ಯ ಸರಕಾರˌ ಜಿಲ್ಲಾ ಪಂಚಾಯತುˌ ತಾಲೂಕು ಪಂಚಾಯತುˌ ಗ್ರಾಮ ಪಂಚಾಯತುˌ ಮುಂತಾದ ಸಾರ್ವಜನಿಕ ಆಡಳಿತ ರಂಗಗಳಂತೆ ಸದಸ್ಯರಿಂದ ನಡೆಸಲ್ಪಡುವ ಸಹಕಾರಿ ರಂಗ ಕೂಡಾ ಬಹುದೊಡ್ಡ ಪ್ರಜಾಪ್ರಭುತ್ವ. ಸಹಕಾರಿ ಸಂಘಗಳಲ್ಲಿ ವೃತ್ತಿಪರ ಆಡಳಿತ ನಿರ್ವಹಣೆ ಇದ್ದಲ್ಲಿ ಮಾತ್ರ ಆ ಸಂಸ್ಥೆ ಪ್ರಬಲವಾಗಿ ಬೆಳೆದು ಸಾಧನೆಯ ಶಿಖರ ಕಂಗೊಳಿಸಲು ಸಾಧ್ಯ. 6(ಆರು) –“M” ಯಾವುದೇ ಸಹಕಾರಿ ಸಂಸ್ಥೆಯಲ್ಲಿ
ಆಧುನಿಕ ಸಂಸ್ಥೆಗಳ ಯಶಸ್ಸು ಶಿಸ್ತಿನ ಮೇಲಿದೆ. ಒಂದು ಸಂಸ್ಥೆಯೊಳಗಿನ ನಿಯಮ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡಿ, ಎಲ್ಲರಿಗೂ ಸಮಾನವಾಗಿ ಪ್ರಯೋಜನವಾಗುವ ಪರಿಸರವನ್ನು ನಿರ್ಮಿಸಲು ಆಂತರಿಕ ಶಿಸ್ತು ನಿರ್ವಹಣೆ ಅತ್ಯಗತ್ಯವಾಗಿದೆ. ಇದು ಸಂಸ್ಥೆಯೊಳಗಿನ ಎಲ್ಲ ಸಿಬ್ಬಂದಿಯವರ ನಡವಳಿಕೆ, ಕೆಲಸದ ಜಾಬ್ಚಾರ್ಟ್ ನಂತೆ ಕಾರ್ಯ ನಿರ್ವಹಿಸುವುದು ಮತ್ತು ಶಿಸ್ತು ಸಂಬAಧಿತ ನೀತಿಗಳನ್ನು ನಿಯಂತ್ರಿಸುವ ವ್ಯವಸ್ಥೆಯಾಗಿದೆ. ಕಛೇರಿಯಲ್ಲಿ ಇರುವ ನಿಯಮಗಳನ್ನು ಪಾಲನೆ ಮಾಡುವುದು ಆಂತರಿಕ ಶಿಸ್ತಿನ ಮೊದಲ ಸೋಪಾನಾವಾಗಿದೆ. ಕಚೇರಿ ಆಂತರಿಕ ಶಿಸ್ತು ನಿರ್ವಹಣೆ ಎಂದರೆ, ಕಚೇರಿಯೊಳಗೆ ಉದ್ಯೋಗಿಗಳಿಂದ ಅನುಸರಿಸಬೇಕಾದ ನಿಯಮಗಳು
ಜುಲೈ 5 ರಂದು ಇಡಿ ವಿಶ್ವ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸುತ್ತಿದೆ. ‘ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿಗಳು’ (Cooperatives for Sustainable Development) ಎಂಬ ಘೋಷ ವಾಕ್ಯದೊಂದಿಗೆ ಸಹಕಾರದ ಮೌಲ್ಯಗಳು ಹಾಗೂ ಸಹಕಾರ ತತ್ವಗಳಿಂದ ಕೂಡಿದ ಸಹಕಾರೀ ವಿಧಾನವು ಹೇಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುತ್ತದೆ ಎಂಬುದರ ಬಗ್ಗೆ ಈ ಬಾರಿಯ ಅಂತರಾಷ್ಟ್ರೀಯ ಸಹಕಾರ ದಿನದ ಆಚರಣೆಯು ಅರಿವನ್ನು ಮೂಡಿಸುತ್ತದೆ. ವಿಶ್ವಸಂಸ್ಥೆಯು ಅಧಿಕೃತವಾಗಿ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಲು ಪ್ರಾರಂಭವಾದ ಬಳಿಕ ಇದು 29 ನೆಯ ಸಹಕಾರ ದಿನದ