ಪ್ರಜಾಪ್ರಭುತ್ವ ಆಡಳಿತದಲ್ಲಿ ನಾಯಕತ್ವದ ಪಾತ್ರ ಬಹಳ ಪ್ರಮುಖವಾಗಿರುತ್ತದೆ.ನಾಯಕ ಅಂದರೆ ಆಡಳಿತ ವ್ಯವಸ್ಥೆಯ ರೂವಾರಿ.ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮತದಾರರ ಅಧೀನದ ಕೇಂದ್ರ ಸರಕಾರ ˌ ರಾಜ್ಯ ಸರಕಾರˌ ಜಿಲ್ಲಾ ಪಂಚಾಯತುˌ ತಾಲೂಕು ಪಂಚಾಯತುˌ ಗ್ರಾಮ ಪಂಚಾಯತುˌ ಮುಂತಾದ ಸಾರ್ವಜನಿಕ ಆಡಳಿತ ರಂಗಗಳಂತೆ ಸದಸ್ಯರಿಂದ ನಡೆಸಲ್ಪಡುವ ಸಹಕಾರಿ ರಂಗ ಕೂಡಾ ಬಹುದೊಡ್ಡ ಪ್ರಜಾಪ್ರಭುತ್ವ. ಸಹಕಾರಿ ಸಂಘಗಳಲ್ಲಿ ವೃತ್ತಿಪರ ಆಡಳಿತ ನಿರ್ವಹಣೆ ಇದ್ದಲ್ಲಿ ಮಾತ್ರ ಆ ಸಂಸ್ಥೆ ಪ್ರಬಲವಾಗಿ ಬೆಳೆದು ಸಾಧನೆಯ ಶಿಖರ ಕಂಗೊಳಿಸಲು ಸಾಧ್ಯ. 6(ಆರು) –“M” ಯಾವುದೇ ಸಹಕಾರಿ ಸಂಸ್ಥೆಯಲ್ಲಿ
ಆಧುನಿಕ ಸಂಸ್ಥೆಗಳ ಯಶಸ್ಸು ಶಿಸ್ತಿನ ಮೇಲಿದೆ. ಒಂದು ಸಂಸ್ಥೆಯೊಳಗಿನ ನಿಯಮ ಹಾಗೂ ನೈತಿಕ ಮೌಲ್ಯಗಳನ್ನು ಕಾಪಾಡಿ, ಎಲ್ಲರಿಗೂ ಸಮಾನವಾಗಿ ಪ್ರಯೋಜನವಾಗುವ ಪರಿಸರವನ್ನು ನಿರ್ಮಿಸಲು ಆಂತರಿಕ ಶಿಸ್ತು ನಿರ್ವಹಣೆ ಅತ್ಯಗತ್ಯವಾಗಿದೆ. ಇದು ಸಂಸ್ಥೆಯೊಳಗಿನ ಎಲ್ಲ ಸಿಬ್ಬಂದಿಯವರ ನಡವಳಿಕೆ, ಕೆಲಸದ ಜಾಬ್ಚಾರ್ಟ್ ನಂತೆ ಕಾರ್ಯ ನಿರ್ವಹಿಸುವುದು ಮತ್ತು ಶಿಸ್ತು ಸಂಬAಧಿತ ನೀತಿಗಳನ್ನು ನಿಯಂತ್ರಿಸುವ ವ್ಯವಸ್ಥೆಯಾಗಿದೆ. ಕಛೇರಿಯಲ್ಲಿ ಇರುವ ನಿಯಮಗಳನ್ನು ಪಾಲನೆ ಮಾಡುವುದು ಆಂತರಿಕ ಶಿಸ್ತಿನ ಮೊದಲ ಸೋಪಾನಾವಾಗಿದೆ. ಕಚೇರಿ ಆಂತರಿಕ ಶಿಸ್ತು ನಿರ್ವಹಣೆ ಎಂದರೆ, ಕಚೇರಿಯೊಳಗೆ ಉದ್ಯೋಗಿಗಳಿಂದ ಅನುಸರಿಸಬೇಕಾದ ನಿಯಮಗಳು
ಜುಲೈ 5 ರಂದು ಇಡಿ ವಿಶ್ವ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸುತ್ತಿದೆ. ‘ಸುಸ್ಥಿರ ಅಭಿವೃದ್ಧಿಗಾಗಿ ಸಹಕಾರಿಗಳು’ (Cooperatives for Sustainable Development) ಎಂಬ ಘೋಷ ವಾಕ್ಯದೊಂದಿಗೆ ಸಹಕಾರದ ಮೌಲ್ಯಗಳು ಹಾಗೂ ಸಹಕಾರ ತತ್ವಗಳಿಂದ ಕೂಡಿದ ಸಹಕಾರೀ ವಿಧಾನವು ಹೇಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುತ್ತದೆ ಎಂಬುದರ ಬಗ್ಗೆ ಈ ಬಾರಿಯ ಅಂತರಾಷ್ಟ್ರೀಯ ಸಹಕಾರ ದಿನದ ಆಚರಣೆಯು ಅರಿವನ್ನು ಮೂಡಿಸುತ್ತದೆ. ವಿಶ್ವಸಂಸ್ಥೆಯು ಅಧಿಕೃತವಾಗಿ ಅಂತರಾಷ್ಟ್ರೀಯ ಸಹಕಾರ ದಿನವನ್ನು ಆಚರಿಸಲು ಪ್ರಾರಂಭವಾದ ಬಳಿಕ ಇದು 29 ನೆಯ ಸಹಕಾರ ದಿನದ
ನಾಗರಿಕತೆಯಲ್ಲಿ ಶ್ರೀಮಂತ ಜೀವನದ ಮೆರುಗು ಹಾಗೂ ಶೋಷಿತರ ಹೋರಾಟ ಬದುಕಿನ ಮಧ್ಯದ ಸುವರ್ಣ ಮಾಧ್ಯಮವಾಗಿ ಸರ್ವರಿಗೂ ಸಮಬಾಳು ಕಲ್ಪಿಸುವ ಸದುದ್ದೇಶದಿಂದ “ಸಹಕಾರವಾದ” ಹುಟ್ಟಿಕೊಂಡಿತು.ಜಗತ್ತಿನಲ್ಲಿ ಸಹಕಾರಿ ಆಂದೋಲನ ಪ್ರಾರಂಭವಾದ ಲಾಗಾಯಿತು ಇಂದಿನ ತನಕ ಸಹಕಾರದಲ್ಲಿ ಹಲವಾರು ಮಾರ್ಪಾಡುಗಳು ಹೊಸತನಗಳು ಕಾಣಿಸಿಕೊಂಡವು. ಗ್ರಾಹಕ ಸಹಕಾರಿ ಸಂಘಗಳ ಆರಂಭದಿಂದ ತೊಡಗಿˌಹತ್ತುಹಲವಾರು ಉದ್ದೇಶದ ಸಹಕಾರಿ ಸಂಘಗಳು ಜಗತ್ತಿನಾದ್ಯಂತ ಪಸರಿಸಿವೆ. ಸಹಕಾರ ಪದ್ದತಿ ಜನರ ಜೀವನದ ಯಶಸ್ವಿನಲ್ಲಿ ಮಹತ್ತರ ಪಾತ್ರ ವಹಿಸಿವೆ. ನಮ್ಮ ದೇಶದಲ್ಲಿ ಸಹಕಾರಿ ಕಾನೂನುˌ ನಿಯಮ ಚೌಕಟ್ಟಿನಡಿ ಕಾರ್ಯನಿರ್ವಹಿಸಿದ ಸಂಘಗಳು ಜನರ
ಸ್ಥಿರ ಅಭಿವೃದ್ಧಿಯ ಗುರಿಗಳು (Sustainable Development Goals – SDGs) ಎಂಬುವು 2015ರಲ್ಲಿ ಯುನೈಟೆಡ್ ನೇಷನ್ಸ್ ಸಂಸ್ಥೆಯು ಪ್ರಕಟಿಸಿದ 17 ಗುರಿಗಳ ಒಂದು ಜಾಗತಿಕ ಚಟುವಟಿಕೆ ಯೋಜನೆಯಾಗಿದೆ. ಈ ಗುರಿಗಳು ಬಡತನ ನಿವಾರಣೆ, ಆಹಾರ ಭದ್ರತೆ, ಆರೋಗ್ಯ, ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು, ಪರಿಸರ ಸಂರಕ್ಷಣೆ, ಶಾಂತಿ ಹಾಗೂ ನ್ಯಾಯಯುತ ಸಮಾಜ ನಿರ್ಮಾಣದಂತ ಹಲವಾರು ಅಂಶಗಳನ್ನು ಒಳಗೊಂಡಿವೆ. ಇಂತಹ ಗುರಿಗಳನ್ನು ತಳಮಟ್ಟದಿಂದಲೇ ಸಾಧಿಸಲು ಶ್ರೇಷ್ಠ ಮಾದರಿಯಾಗಿ ಕಾಣಿಸಿಕೊಳ್ಳುವವು ಸಹಕಾರ ಸಂಘಗಳು. ಸಹಕಾರ ಸಂಘಗಳು ಸಾಮಾನ್ಯರ ಬೆಂಬಲದಿಂದ,
ಸಹಕಾರಿ ರಂಗದಲ್ಲಿ ಅನ್ಯಾನ್ಯ ಸೇವೆಗಳನ್ನು ತನ್ನ ಸದಸ್ಯರಿಗೆ ಮತ್ತು ಸಮಾಜಕ್ಕೆ ಒದಗಿಸುವ ಅವಕಾಶ ಇದೆ. ಕೆಲವೊಂದು ಪ್ರಾಥಮಿಕ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಬಹಳಷ್ಟು ದೂರ ನಡೆದಾಗಿದೆ. ಇನ್ನು ಹಲವು ಸಂಘಗಳಿಗೆ ಏನಾದರೂ ಮಾಡಬೇಕೆಂಬ ಉತ್ಸುಕತೆ ಇದೆ. ಇನ್ನು ಹಲವು ಸಂಘಗಳಿಗೆ ಕನಸುಗಳೇ ಇಲ್ಲ. ನಿತ್ಯ ಕರ್ಮಗಳನ್ನು ಮುಗಿಸಿ ಹಾಯಾಗಿದ್ದುಬಿಡುವುದು ಅವರ ಜಾಯಮಾನ. ಮೊದಲ ಮತ್ತು ಕೊನೆಯ ಜಾಯಮಾನದ ಸಹಕಾರಿ ಸಂಘಗಳಿಗೆ ಯಾವ ಸಲಹೆಗಳೂ ಅಗತ್ಯ ಇಲ್ಲ. ಮೊದಲನೆಯ ಪಂಗಡದ ಸಂಘಗಳಿಗೆ ಸಾಕಷ್ಟು ಅನುಭವ ಇದೆ.
ಪರಿಚಯ ಸ್ಥಿರಾಭಿವೃದ್ಧಿ ಎಂದರೆ ಇಂದಿನ ಅಗತ್ಯಗಳನ್ನು ಪೂರೈಸುತ್ತಾ, ಭವಿಷ್ಯದ ಪೀಳಿಗೆಗಳ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಅಡ್ಡಿಗಟ್ಟದೇ ಅಭಿವೃದ್ಧಿಯನ್ನು ಸಾಧಿಸುವುದು. ಈ ಅಭಿವೃದ್ಧಿ ಪರಿಸರ, ಸಮಾಜ, ರಾಜಕೀಯ ಮತ್ತು ಆರ್ಥಿಕ ಮಿತಿಗಳನ್ನು ಪರಿಗಣಿಸಿ ಸಮಗ್ರ ಯೋಜನೆಯ ಮೂಲಕ ಕಾರ್ಯಗತಗೊಳ್ಳಬೇಕು. ಜಾಗತೀಕರಣದಿಂದಾಗಿ ಜನಸಂಖ್ಯೆ ವೃದ್ಧಿ, ಕೈಗಾರಿಕೀಕರಣ, ನಗರೀಕರಣ ಮತ್ತು ಹೆಚ್ಚಿದ ಬಳಕೆಯಿಂದ ಪರಿಸರದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗಿದ್ದು, ಪ್ರತಿಯೊಂದು ರಾಷ್ಟ್ರದ ಆರ್ಥಿಕತೆಯು ಕೈಗಾರಿಕೆ, ಮೂಲಸೌಕರ್ಯ, ಉತ್ಪಾದನೆ ಮತ್ತು ಬಳಕೆ, ಜನಸಂಖ್ಯೆ ಮತ್ತು ಸಾರಿಗೆ, ಸಮುದಾಯ ಮತ್ತು ನಗರ, ಆರ್ಥಿಕತೆ
ಮಾನವ ಸಂಪನ್ಮೂಲ ನಿರ್ವಹಣೆಗಿಂತಲೂ, ಇಂದು ಬೇಕಾಗಿರುವುದು ಮಾನವ ಸಂಬಂಧಗಳ ನಿರ್ವಹಣೆ. ಇದನ್ನೇ ಅಂತರಿಕ ನಂಬಂಧಗಳು ಎಂದು ಕರೆಯಲಾಗಿದೆ. ಸಹಕಾರ ಸಂಸ್ಥೆಗಳು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬದ್ಧವಾಗಿರುವ ಸಂಸ್ಥೆಗಳಾಗಿದೆ. ಈ ಸಂಸ್ಥೆಗಳ ಯಶಸ್ಸು ಎಂಬುದು ಅಂತರಿಕವಾಗಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಡುವಿನ ಉತ್ತಮ ಸಂಬಂಧಗಳ ಮೇಲೆ ಅವಲಂಬಿತವಾಗಿದೆ. ಸಹಕಾರದ ತತ್ವಗಳನ್ನೇ ಆಧಾರವಾಗಿಟ್ಟುಕೊಂಡಿರುವ ಈ ಸಹಕಾರ ಸಂಸ್ಥೆಗಳಲ್ಲಿ ವಿಶ್ವಾಸ, ಪರಸ್ಪರ ಸಹಕಾರ, ಸಮಾನತೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿ ಮುಂತಾದ ಮಾನವೀಯ ಮೌಲ್ಯಗಳು ಅತ್ಯಂತ
ಸಹಕಾರ ಚಳುವಳಿ ಉಗಮ ಮತ್ತು ಯಶಸ್ವಿ ಕಾರ್ಯಾಚರಣಿ ಆರಂಭವಾದದ್ದು ‘ಬಳಕೆದಾರರ ಸಹಕಾರ ಸಂಘಗಳ ಮೂಲಕ ಇದಕ್ಕೆ ಕಾರಣರಾದವರು ರಾಕ್ ಡೇಲ್ ಅಗ್ರಗಾಮಿಗಳು, ಇಂಗ್ಲೆಂಡ್ನಲ್ಲಿ ಆರಂಭವಾದ ಈ ಚಳುವಳಿ ಕಾರ್ಮಿಕರ ಆರ್ಥಿಕ ಹಿತಾಸಕ್ತಿ ಕಾಪಾಡಿದ್ದಲ್ಲದೇ ಶೈಕ್ಷಣಿಕ , ಸಾಮಾಜಿಕ , ಬೆಳವಣಿಗೆಗೂ ಕಾರಣವಾಗಿದ್ದು ಈಗ ಇತಿಹಾಸ. ಸಹಕಾರ ಚಳುವಳಿ ಬಳಕೆದಾರ ವಲಯ ಅಲ್ಲದೆ ಕೃಷಿ ಪತ್ತು, ಕೃಷಿ ಪತ್ತೇತರ , ಕೃಷಿಉತ್ಪನ್ನ , ಹೈನುಗಾರಿಕೆ , ಇತರೆ ಕೃಷಿ ಅವಲಂಭಿತ ಉತ್ಪನ್ನ ಮಾರಾಟ , ಕೈಗಾರಿಕೆ ಹೀಗೆ
ಹಿನ್ನೆಲೆ: ದೇಶಾದ್ಯಂತ ಸಾರ್ವಜನಿಕರಿಂದ ಅಪಾರ ಮೊತ್ತದ ಠೇವಣಿ ಪಡೆದು ಜನರಿಗೆ ವಂಚನೆ ಮಾಡಿ ಕಣ್ಮರೆಯಾಗುತ್ತಿರುವ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸಂದರ್ಭದಲ್ಲಿ ಠೇವಣಿದಾರರ ಹಿತ ರಕ್ಷಣೆಗೆ ಸೂಕ್ತ ಕಾಯ್ದೆ ವ್ಯವಸ್ಥೆ ಇಲ್ಲದಿರುವುದರ ಕಾರಣವನ್ನು ಸರಕಾರ ಗಮನಿಸಿದೆ. ವಂಚಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪ್ರಸ್ತುತ ಕಾನೂನುಗಳಲ್ಲಿನ ಲೋಪ ದೋಷಗಳ ದುರ್ಲಾಭ ಪಡೆಯುತ್ತಿರುವುದನ್ನು ಹಾಗೂ ಬೇರೆ ಬೇರೆ ನಿಯಂತ್ರಕ ಸಂಸ್ಥೆಗಳ ನಡುವಿನ ಸಾಮರಸ್ಯದ ಕೊರತೆ, ಬೇರೆ ಬೇರೆ ರಾಜ್ಯಗಳ ನಡುವಿನ ಸಾಮರಸ್ಯದ ಕೊರತೆಗಳು