ರಾಷ್ಟ್ರೀಯ ಸಹಕಾರಿ ಡೇಟಾಬೇಸ್ (NCD) ಅನ್ನು ಸಹಕಾರ ಸಚಿವಾಲಯ(ministry of co operation) 2024ರ ಮಾರ್ಚ್ 14ರಂದು ಜಾರಿಗೊಳಿಸಿತು. ಈ ಆಯೋಜನೆ ಭಾರತದ ವಿಶಾಲವಾದ ಸಹಕಾರಿ ಕ್ಷೇತ್ರದ ಬಗ್ಗೆ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುವ ಉಪಕ್ರಮವಾಗಿದೆ. ಈ ಡೇಟಾಬೇಸ್ಗಳು ವ್ಯವಹಾರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಜೊತೆಗೆ ಸಂಶೋಧನೆ ಮತ್ತು ವಿಶ್ಲೇಷಣೆಗಾಗಿ ಅಮೂಲ್ಯವಾದ ಡೇಟಾವನ್ನು ಒದಗಿಸುತ್ತವೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ನೇಮಿಸಲ್ಪಟ್ಟ ನೋಡಲ್ ಅಧಿಕಾರಿಗಳು ಸಹಕಾರಿ ಸಂಘಗಳು ಹಾಗೂ ಎಲ್ಲಾ PACS ಸೇರಿದಂತೆ, ವಿವಿಧ
ವಿಶ್ವದಲ್ಲಿ ಸಹಕಾರ ಚಳುವಳಿ ಉಗಮ ಗೊಂಡು ಎರಡು ಶತಮಾನದ ಸನಿಹದಲ್ಲಿದೆ. ಸಾಮಾನ್ಯ ಜನರ ಆರ್ಥಿಕ ಅಭಿವೃದ್ಧಿ ಅಲ್ಲದೆ ಎಲ್ಲರನ್ನೂ ಒಳಗೊಳ್ಳುವ ಗುಣವಿಶೇಷ ಇರುವುದು ‘ಸಹಕಾರ’ಮಾದರಿಯಲ್ಲಿ ಎಂಬದು ಅತಿಶಯೋಕ್ತಿಯಲ್ಲ. ‘ಹನಿ ಹನಿ ಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ’ ಎಂಬ ನಾಣ್ಣುಡಿ ಸೃಷ್ಟಿಯಾಗಿರುವುದೇ ‘ಸಹಕಾರ’ ಪದ್ಧತಿಯ ಅನುಸರಣಿಯಿಂದ, ‘ಇವನಾರವ ಇವನಾರವ ಎಂದೆನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂದ ಬಸವಣ್ಣನವರ ಉಕ್ತಿ ಇದನ್ನೇ ಧ್ವನಿಸುತ್ತದೆ. ಅಲ್ಲದೆ ‘ಕಾಗೆಯೊಂದ ಅಗಳ ಕಂಡರೆ ಕರೆಯದೆ ತನ್ನ ಬಳಗವೆಲ್ಲವ’ ಎಂಬ ವಚನ ಸಹಕಾರ
ಅಂತರರಾಷ್ಟಿಯ ಸಹಕಾರಿ ದಿನವು ೧೯೨೩ ರಿಂದೀಚೆಗೆ ಜುಲೈ ತಿಂಗಳ ಮೊದಲ ಶನಿವಾರದಂದು ಆಚರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಸಹಕಾರ ಒಕ್ಕೂಟದಿಂದ ಆಚರಿಸಲ್ಪಡುವ ಈ ಸಹಕಾರಿ ದಿನ ಸಹಕಾರ ಕ್ಷೇತ್ರದ ವಾರ್ಷಿಕ ಆಚರಣೆಗಳಲ್ಲಿ ಒಂದು. ವಿಮರ್ಶೆಗೆ ವೇದಿಕೆ ಜಗತ್ತಿನ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾಲು ಬಹಳ ದೊಡ್ಡದು. ಅಂತರರಾಷ್ಟ್ರೀಯ ಯ ಸಹಕಾರಿ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಿಗಳ ವೈವಿಧ್ಯಮಯ ರೂಪಗಳ ಬಗ್ಗೆ ಸಾರ್ವಜನಿಕ ವಲಯಕ್ಕೆ ತಿಳುವಳಿಕೆ ನೀಡುವ ಮಹತ್ತರ ಜವಾಬ್ದಾರಿ ಸಹಕಾರ ಕ್ಷೇತ್ರದಲ್ಲಿರುವವರು ಮಾಡಬೇಕಿದೆ. ಈ ದಿನ
ಈಗಿನ ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ರಚನೆಯಾದ ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ರಂಗದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ರಚನೆಯಾದ ಆರಂಭದಲ್ಲಿ ಸಹಕಾರ ಸಚಿವಾಲಯವು ದೇಶಸದಲ್ಲಿರುವ ಒಟ್ಟು ಸಹಕಾರ ಸಂಸ್ಥೆಗಳ ಡೇಟಾ ಸಂಗ್ರಹಿಸಿ ಒಟ್ಟು ಎಷ್ಟು ಸಹಕಾರ ಸಂಸ್ಥೆಗಳಿವೆ, ಅವುಗಳಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು, ಅವುಗಳ ಸ್ವರೂಪ ಹೇಗೆ… ಇತ್ಯಾದಿ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಿದೆ. 2023ರ ಡಿಸೆಂಬರ್ ಅಂತ್ಯಕ್ಕೆ ಈ ಡೇಟಾಕ್ಕೆ ಅಂತಿಮ ರೂಪ ನೀಡಲಾಗಿದ್ದು, ಮೂರು ವಿಭಾಗಗಳಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ. ಮೊದಲ ವಿಭಾಗದಲ್ಲಿ ಪ್ರಾಥಮಿಕ
ಸಹಕಾರಿ ಕ್ಷೇತ್ರಕ್ಕೆ ಹೊಸಮುಖಗಳ ಸೇರ್ಪಡೆ ಆಗುತ್ತಿರಬೇಕು. ಅದರಲ್ಲೂ ಯುವಶಕ್ತಿ ಹೆಚ್ಚು ಉತ್ಸುಕತೆಯಿಂದ ಸಹಕಾರಿ ರಂಗದಲ್ಲಿ ಧುಮುಕಬೇಕು ಎಂಬುದು ಆಶಯ. ಇದಕ್ಕೆ ಪೂರಕವಾಗಿ ದೊಡ್ಡ ಮಟ್ಟಿನ ಬದಲಾವಣೆ ಆಗದಿದ್ದರೂ ಈ ಕರೆಗೆ ಓಗೊಡುವ ಮಂದಿಗೇನೂ ಕಡಿಮೆಯಿಲ್ಲ. ಆದರೆ ಈಗಾಗಲೇ ಈ ಕ್ಷೇತ್ರದಲ್ಲಿ ಇರುವ ಕೆಲವು ಹಿರಿಯರು ಸಹಕಾರಿ ರಂಗವನ್ನು ಮುನ್ನಡೆಸಲು ಸರಿಯಾದ ತಂಡವನ್ನು ಕಟ್ಟಿ ಬೆಳೆಸುತ್ತಿಲ್ಲ ಎಂಬುದು ದೊಡ್ಡ ನೋವಿನ ಸಂಗತಿ. ಹತ್ತು ಮೂವತ್ತು ವರ್ಷಗಳಿಂದ ಕೆಲವೊಂದು ಸಹಕಾರಿ ಸಂಘ ಸಂಸ್ಥೆಗಳಲ್ಲಿ ಝಂಡಾ ಊರಿದವರು ಇನ್ನೂ ಅಲ್ಲೇ ಠಿಕಾಣಿ
‘ಮಧು’ ಶಬ್ದಕ್ಕಿಂತಲೂ ಮಧು ರುಚಿಯಾಗಿದೆ. ಇದರ ರುಚಿಯ ಅರಿವು ಕಾಡು ಅವಸ್ಥೆಯಲ್ಲಿದ್ದ ಮನುಷ್ಯನಿಗೂ ಇತ್ತು. ಅವನೂ ಅದನ್ನು ಸಂಗ್ರಹಿಸಿಡುತ್ತಿದ್ದ.ಆಗ ಕೂಡ ದೇವತೆಗಳ ತೃಪ್ತಿಗಾಗಿ ಜೇನುತುಪ್ಪವನ್ನು ಅರ್ಪಿಸುತ್ತಿದ್ದ ತನಗೆ ಪ್ರಿಯವಾದದ್ದು ದೇವರಿಗೂ ಪ್ರಿಯವೆಂದೇ ಅಂದಿನ ಕಾಡುಮಾನವನ ನಂಬುಗೆ, ಈ ಹಿನ್ನಲೆಯಲ್ಲಿ ಜೇನು ವ್ಯವಸಾಯವನ್ನು ಸಹಕಾರಿ ಕ್ಷೇತ್ರದಲ್ಲಿ ತರಲು 1944ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಹೊನ್ನಾವರ ಮಧು ಎಂಬ ಹೆಸರಿನ ಜೇನು ಉತ್ಪನ್ನವನ್ನು ಹೊನ್ನಾವರ ಜೇನು ಸಾಕುವವರ ಸಹಕಾರ ಸಂಘದಿಂದ ಉತ್ಪಾದಿಸಲಾಯಿತು. ಖಾದಿ ಗ್ರಾಮೋದ್ಯೋಗ ಆಯೋಗದ ಹಿರಿಯ ಅಧಿಕಾರಿಗಳಾಗಿದ್ದ ಕೀರ್ತಿಶೇಷರಾದ
ಭಾರತ ಸ್ವಾತಂತ್ರ್ಯ ನಂತರ, ಆರಿಸಿಕೊಂಡದ್ದು ಮಿಶ್ರ ಆರ್ಥಿಕ ನೀತಿ. ಇದರಿಂದ ಸಾರ್ವಜನಿಕ ಮತ್ತು ಖಾಸಗಿ ವಲಯಕ್ಕೆ ಸರ್ಕಾರ ಬೆಂಬಲ ನೀಡಿತು. ಇವರ ನಡುವೆ ಸುವರ್ಣ ಮಾಧ್ಯಮವಾಗಿ ಸಹಕಾರ ವಲಯ ಕ್ಕೆ ತಾನೂ ಪಾಲದಾರನಾಗಿ ಸಹಕಾರ ಚಳುವಳಿಗೆ ಕಾರಣವಾಗಿ ತನ್ಮೂಲಕ ಹಸಿರು ಕ್ರಾಂತಿ, ಶ್ರೇತ ಕ್ರಾಂತಿ, ನೀಲಿಕ್ರಾಂತಿ, ಹಳದಿ ಕ್ರಾಂತಿ ಗೆ ಕಾರಣವಾಗಿದ್ದು ಈಗ ಇತಿಹಾಸ. ಭಾರತದ ಆರ್ಥಿಕ ನೀತಿ 1990ರ ದಶಕದಲ್ಲಿ ಬದಲಾವಣೆ ಕಂಡಿತು. ವಿಶ್ವದಲ್ಲಿ ಭಾರತ ದ್ವೀಪವಾಗಿ ನಿಲ್ಲಲಾಗದೆ ತಾನೂ ಉದಾರೀಕರಣ, ಖಾಸಗಿಕರಣ, ಜಾಗತೀಕರಣ ನೀತಿ
120 ವರ್ಷಗಳ ಇತಿಹಾಸವಿರುವ ಸಹಕಾರ ಚಳವಳಿ ಇಂದು ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಭಾರತದ ಸಹಕಾರ ಚಳವಳಿಯ ಮೊದಲ ಬೇರು ಆರಂಭವಾಗಿದ್ದು ಕರ್ನಾಟಕದಲ್ಲಿ ಎಂಬುದು ಜನಜನಿತವಾದುದು. ದೇಶದ ಪ್ರಪ್ರಥಮ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭವಾಗಿದ್ದು ಗದಗ ಜಿಲ್ಲೆಯ ಕಣಗಿನಹಾಳದಲ್ಲಿ. ಇದರ ಜನಕ ಸಿದ್ದನ ಗೌಡ ಸಣ್ಣರಾಮನ ಗೌಡ ಪಾಟೀಲರು. ಸಹಕಾರ ಎಂಬುದು ಬಹಳ ಹಿಂದಿನ ತತ್ವ. ಹುಟ್ಟಿನಿಂದ ಸಾವಿನವರೆಗೂ ಸಹಕಾರ ಎಂಬುದು ಅನಿವಾರ್ಯವಾಗಿ ಇರಬೇಕಾದ ವಿಷಯ. ಸುಖ ಸಿಕ್ಕಾಗ ಹಂಚಿ ಉಣ್ಣಲು, ದುಃಖ ಎದುರಾದಾಗ
ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿನ ಆವಿಷ್ಕಾರಗಳು ಮನುಷ್ಯನ ಕಲಿಯುವಿಕೆಯ, ಜ್ಞಾನ ಸಂಪಾದನೆಯ ಮಾರ್ಗವನ್ನು ವಿಸ್ತಿರಿಸಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವ ಅವಕಾಶಗಳನ್ನು ಅಂತರ್ಜಾಲಗಳು ಒದಗಿಸುತ್ತಿವೆ. ಒಂದೇ ವಿಷಯದ ಬಗ್ಗೆ ಹಲವು ರೀತಿಯ ಮಾಹಿತಿಗಳು, ಮಾಹಿತಿಗಳ ವಿಸ್ತೃತ ವಿವರಣೆಗಳು, ತಜ್ಞರ ವಿಷ್ಲೇಶಣೆಗಳು ವಿವಿಧ ವೆಬ್ತಾಣಗಳಲ್ಲಿ ಕ್ಷಣಮಾತ್ರದಲ್ಲಿ ದೊರೆಯುತ್ತಿವೆ. ವೆಬ್ತಾಣಗಳಲ್ಲಿ ಕೇವಲ ಮಾಹಿತಿ ಒದಗಿಸುವ ಹಾಗೂ ಯಾವುದೇ ಒಂದು ಸಂಸ್ಥೆ, ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ಒದಗಿಸುವ ತಾಣಗಳು ನಿರ್ದಿಷ್ಠ ವಿಷಯಗಳನ್ನು ಅರಿಯಲು ಸಹಾಯಕವಾಗುತ್ತವೆ. ವಿಷಯ ಕೇಂದ್ರಿತ ಸುಲಭ
ಪೀಠಿಕೆ : (ದಿವಗಂತ ಜಿ ಎಸ್ ಹೆಗಡೆ ಅಜ್ಜೀಬಳರವರು 1963 ರಲ್ಲಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ 1983 ರಿಂದ 1989ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜ್ಯದ ಸಹಕಾರಿ ಇತಿಹಾಸದಲ್ಲಿ ಅಗ್ರ ಮಾನ್ಯ ಸಹಕಾರಿಗಳ ಸಾಲಿನಲ್ಲಿ ರಾರಾಜಿಸಿದ್ದಾರೆ. ಇವರ ಕಾಲಾವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಪ್ರಗತಿ ಯಿಂದ ಪ್ರಗತಿಗೆ ದಾಪುಗಾಲು ಹಾಕಿರುವುದು ಸರ್ವ ವಿದಿತ. ಇವರ ಸಾಧನೆಗಳ ಚಿಕ್ಕ ಚಿತ್ರಣ ಈ ಕೆಳಗೆ ನೀಡಲಾಗಿದೆ.) ಪ್ರಾಯಶಃ ಸಹಕಾರಿ ರಂಗ ಅಜ್ಜೀಬಳರಂತೆ,