ಒಬ್ಬರು ಗೆದ್ದು, ಒಬ್ಬರು ಸೋತರೆ ಯುದ್ಧ, ಇಬ್ಬರು ಸೋತು ಇಬ್ಬರೂ ಗೆದ್ದರೆ ಸಂಸಾರ, ಯಾರೂ ಸೋಲದೆ ಎಲ್ಲರೂ ಗೆದ್ದರೆ ಅದುವೇ ಸಹಕಾರ! ೧೯೦೫ರಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರು ಪ್ರಾರಂಭಿಸಿದ ಮೊದಲ ಸಹಕಾರ ಸಂಘದ ಮೂಲಕ ಪ್ರಾರಂಭವಾದ ಸಹಕಾರ ಚಳುವಳಿ ಸುದೀರ್ಘ ೧೨೦ ವರ್ಷಗಳಲ್ಲಿ ಎಲ್ಲರನ್ನೂ ಗೆಲ್ಲಿಸುತ್ತಾ ದೇಶವನ್ನು ಕಟ್ಟುವ ಹಾಗೂ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಕಾಯಕದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಸಹಕಾರ ಕ್ಷೇತ್ರವು ಹಾಲು, ಸಕ್ಕರೆ, ರಸಗೊಬ್ಬರ, ಪತ್ತು, ನೌಕರರ ಪತ್ತಿನ ಸಹಕಾರ ಸಂಘ,
ಭಾರತ ಸರ್ಕಾರವು 24ನೇ ಜುಲೈ 2025 ಕ್ಕೆ ರಾಷ್ಟ್ರೀಯ ಸಹಕಾರ ನೀತಿಯನ್ನು ಒಪ್ಪಿ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಿದೆ. ಸಹಕಾರ ನೀತಿ ರಚನೆಗಾಗಿ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಗಿತ್ತು. ಇದರ ಅಧ್ಯಕತೆಯನ್ನು ಸಹಕಾರಿಗಳೂ , ಮಾಜಿ ಕೇಂದ್ರ ಸಚಿವರು ಮತ್ತು ಲೋಕ ಸಭಾ ಸದಸ್ಯರಾದ ಶ್ರೀ ಸುರೇಶ್ ಪ್ರಭಾಕರ್ ಪ್ರಭು ರವರನ್ನು ನೇಮಿಸಲಾಗಿತ್ತು. ಸದರಿ ಸಮಿತಿ ಕರಡು ರಚಿಸಿ ಸಲ್ಲಿಸಿದ್ದನ್ನು ಭಾರತ ಸರ್ಕಾರ ಒಪ್ಪಿ ಬಿಡುಗಡೆ ಮಾಡಿದೆ. ಈ ನೀತಿಯ ದೃಷ್ಟಿಕೋನ ‘ ಸಹಕಾರ ದಿಂದ ಸಮೃದ್ಧಿ ಯೊಂದಿಗೆ ವಿಕಸಿತ
ಸಹಕಾರಿ ಸಂಘ ಸಂಸ್ಥೆಗಳ ಆಡಳಿತ ಮಂಡಳಿಗೆ ಚುನಾವಣೆಗಳು ನಡೆಯುವಾಗ ಸಹಕಾರಿ ತತ್ತ್ವದ ನೆಲೆಯಲ್ಲಿ ಬೆಳೆದು ಬಂದವರನ್ನು ಕಡೆಗಣಿಸಲಾಗುತ್ತಿದೆಯೆ? ಅಥವ ಸಹಕಾರಿ ತತ್ತ್ವಗಳನ್ನು ಅರಗಿಸಿಕೊಂಡವರನ್ನು ಮೂಲೆಗುಂಪು ಮಾಡಲಾಗುತ್ತಿದೆಯೆ? ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಹೌದು ಎಂಬ ಉತ್ತರವೇ ಸಿಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಹಿಡಿದು ದೊಡ್ಡ ದೊಡ್ಡ ಸಹಕಾರಿ ಸಂಸ್ಥೆಗಳ ಚುನಾವಣೆಯ ಹಂತದಲ್ಲಿ ಸರಿಯಾಗಿ, ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಆಡಳಿತ ಮಾಡುವವರಿಗೆ ಮನ್ನಣೆ ಕಡಿಮೆಯಾಗುತ್ತಿದೆ. ಲಾಬಿಗಳದ್ದೇ ಕಾರುಬಾರು ಒಂದು ರಾಜಕೀಯ ಹಣೆಪಟ್ಟಿ. ಇನ್ನೊಂದು ಆರ್ಥಿಕವಾಗಿ ಸಬಲನಾಗಿರುವ
ರಾಜ್ಯ ಸರ್ಕಾರದ ನೀತಿಗೆ ಮೊದಲೇ ಈ ಕ್ರಮ ಅನುಷ್ಠಾನ. ಸಹಕಾರಿ ರಂಗದಲ್ಲಿ ಉದ್ಯೋಗಿಗಳಿಗೆ ಮಹಿಳಾ ಸ್ನೇಹಿ ವಾತಾವರಣ. ಮಂಗಳೂರು: ರಾಜ್ಯಾದ್ಯಂತ ಸರ್ಕಾರಿ ಕಚೇರಿ, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿ, ಐಟಿ ಮತ್ತಿತರ ಖಾಸಗಿ ಕಂಪನಿಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತುಚಕ್ರ ರಜೆ ನೀತಿ -2025ನ್ನು ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದೆ. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ
ಇತ್ತೀಚಿನ ಯುರಿಯಾ ರಾಸಾಯನಿಕ ಗೊಬ್ಬರದ ಆಭಾವ ರಾಜ್ಯದೆಲ್ಲೆಡೆ ರೈತರಲ್ಲಿ ಆತಂಕ ತಂದಿರುವುದನ್ನು ನಾವೆಲ್ಲರು ಕಂಡಿದ್ದೇವೆ. ಅವಶ್ಯವಿರುವ ಗೊಬ್ಬರ ಖರೀದಿ ಮಾಡಲು ಬಂದ ರೈತರು ಅವಶ್ಯವಿಲ್ಲದ ಗೊಬ್ಬರವನ್ನು ಅನಿವಾರ್ಯವಾಗಿ ಖರೀದಿಸುವ ಸ್ಥಿತಿ ನಿರ್ಮಾಣವಾಯಿತು. ಯುರಿಯಾ ಗೊಬ್ಬರ ಬೇಕಿದ್ದರೆ ಮತ್ತೊಂದು ಗೊಬ್ಬರ ಖರೀದಿಸುವ ಬಲವಂತವಾದ ನಿಯಮವನ್ನು ರೈತರ ಮೇಲೆ ಹೇರಲಾಯಿತು, ಈ ನಿಯಮ ರೈತರಿಗೆ ಆರ್ಧಿಕ ಹೊಡೆತ ಕೊಟ್ಟಿತು ಎಂದರೆ ತಪ್ಪಾಗಲಿಕಿಲ್ಲ. ಆದರು ರೈತರು ಹಗಲು ರಾತ್ರಿ ಎನ್ನದೆ ಗೊಬ್ಬರ ಮಳಿಗೆಯ ಮುಂದೆ ಗೊಬ್ಬರ ಖರೀದಿಸಲು ಮುಗಿಬಿದ್ದರು. ಎಷ್ಟೂ ಕಡೆಗಳಲ್ಲಿ
ರಾಷ್ಟ್ರದ ಮತ್ತು ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ವಲಯ ಅದರಲ್ಲಿಯೂ ಎಲ್.ಪಿ. ಜಿ (Liberalisation,Privitastion, Globalization) ಪರಿಸರದಲ್ಲಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇದರ ಪರಿಣಾಮ ಸಂಪತ್ತು ಬೆಳೆಯುತ್ತಿದೆ. ಅದರೊಡನೆ ‘ಉಳ್ಳವರು ‘ ಮತ್ತು ‘ ಇಲ್ಲದವರ ‘ನಡುವಿನ ಅಂತರ ಕೂಡ ಅಗಾದವಾಗಿ ಬೆಳೆಯುತ್ತಿದ್ದು ಸಮಾಜದಲ್ಲಿ ಅನೇಕ ದುಷ್ಕೃತ್ಯ, ಅಜಾಗೂರುಕತೆ, ಅಕ್ಷೋಭೆಗೆ ಕಾರಣವಾಗುತ್ತಿದೆ. ವಿಶ್ವದ ಧ್ಯೇಯ ಸಮತಾ ಸಮಾಜ ನಿರ್ಮಾಣದ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧಿಸುವುದಾಗಿದೆ. ಈ ಉದ್ದೇಶ ಸಾಧನೆಗೆ ‘ಸಹಕಾರ ಚಳುವಳಿ’ ಅತ್ಯುತ್ತಮ ಮಾರ್ಗ ಎಂಬುದನ್ನು ‘ವಿಶ್ವ
ಸಹಕಾರ ಎಂಬುದು ಸಮಾಜದ ಎಲ್ಲ ವರ್ಗಗಳ ಏಕತೆಯನ್ನು ಹೆಚ್ಚಿಸುವ, ಪ್ರಾಮಾಣಿಕತೆ ಮತ್ತು ಪರಸ್ಪರ ಸಹಾಯವನ್ನು ಉತ್ತೇಜಿಸುವ ತತ್ವವಾಗಿದೆ. ಸಹಕಾರದ ಮೂಲಭೂತ ಉದ್ದೇಶವೆಂದರೆ, ಸ್ವಯಂ ಸೇವೆಗೆ ಆಧಾರಿತ ಗುಣಮಟ್ಟದ ಅಭಿವೃದ್ಧಿಯನ್ನು ಸಾಧಿಸುವುದು, ಇದು ಸಮಾಜದ ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಕೇಂದ್ರ ಸರ್ಕಾರವು ‘ಸಹಕಾರದಿಂದ ಸಮೃದ್ಧಿ’ ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಹೊಸ ಸಹಕಾರ ಸಚಿವಾಲಯವನ್ನು ರಚಿಸುವುದಕ್ಕೆ ಮುಂದಾಗಿದೆ. ಈ ಸಹಕಾರ ಸಚಿವಾಲಯ ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸುವುದು, ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗೆ ಒಂದು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಘಗಳು ಉಸಿರಾಡಬೇಕಾದರೆ ಕೃಷಿಕರ ಅವಲಂಬನೆ ಅತ್ಯಗತ್ಯ. ಈ ಸಂಘಗಳ ಬಹುತೇಕ ಶೇರುದಾರ ಸದಸ್ಯರು ಕೃಷಿಕರು ಅಥವ ಕೃಷಿ ಕ್ಷೇತ್ರ ಅವಲಂಬಿತರು. ಸಂಘ ಅವರೊಡನೆ ಯಾವ ರೀತಿಯ ಬಾಂಧವ್ಯ ಹೊಂದಿದೆ ಅದರ ಮೇಲೆ ಸಂಸ್ಥೆಯ ಸಾಮರ್ಥ್ಯ ನಿರ್ಧಾರವಾಗುತ್ತದೆ. ಠೇವಣಿಗಳು, ಉಳಿತಾಯ ಖಾತೆಗಳು, ಸಾಲಗಳು ಹೀಗೆ ಯಾವುದಿದ್ದರೂ ಅದು ಸದಸ್ಯರ ಜೊತೆಗೆ ಯಾವ ರೀತಿಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸಂಪರ್ಕ ಹೊಂದಿದೆ ಎಂಬುದರ ಮೇಲೆ ಅವಲಂಬಿತ.
ಕೆಲ ದಶಕಗಳ ಹಿಂದೆ ಮೂಡಿಬಂದ ಬಂಗಾರದ ಮನುಷ್ಯ ಎಂಬ ಚಲನಚಿತ್ರದಿಂದ ಪ್ರಭಾವಿತರಾಗಿ ಅದೇಷ್ಟೂ ಯುವಕರು ತಮ್ಮ ಹಳ್ಳಿಗಳಿಗೆ ತೆರಳಿ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು ಎಂದು ಅನೇಕ ಸಲ ಕೇಳಿದ್ದೇವೆ, ಆ ಚಲನಚಿತ್ರದ ಪರಿಣಾಮ ಹಾಗಿತ್ತೆಂದರೆ ತಪ್ಪಾಗಲಿಕಿಲ್ಲ. ಮತ್ತೂಂದೆಡೆ ಒಂದು ಸಮುದಾಯ ತಮ್ಮನ್ನು ತಾವು ಶೋಷಣೆಮುಕ್ತವಾಗುವಲ್ಲಿ ಹಾಗು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸ್ವಪ್ರಯತ್ನದ ನೈಜ ಘಟನೆಯು ಒಬ್ಬ ಚಲನಚಿತ್ರ ನಿರ್ದೇಶಕನಿಗೆ ಪ್ರಭಾವ ಬೀರಿ ತಯಾರಾದ ಚಿತ್ರವೆ ಮಂಥನ್, ಈ ಎರಡು ಚಲನಚಿತ್ರಗಳು ಸಾರಿದ ಸಮಾನ ಸಂದೇಶ ಎಂದರೆ ಸಹಕಾರಿ
ಲೆಕ್ಕಪರಿಶೋಧನೆ : ಒಂದು ಸಂಸ್ಥೆಯಲ್ಲಿ ನಿಗದಿ ಪಡೆಸಿರುವ ಅವಧಿಯಲ್ಲಿ ನಡೆದಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಪುರಾವೆಗಳೊ೦ದಿಗೆ ವಿಮರ್ಷನಾತ್ಮಕವಾಗಿ ವಿಶ್ಲೇಷಿಸಿ, ಕುಂದು ಕೊರತೆಗಳನ್ನು ಪಟ್ಟಿ ಮಾಡಿ, ಸಂಸ್ಥೆಯ ಆರ್ಥಿಕ ಸ್ಥಿತಿ-ಗತಿ ಮತ್ತು ಲಾಭ-ನಷ್ಟಗಳನ್ನು ನಿಖರವಾಗಿ ಅಂದಾಜಿಸುವ ಎಲ್ಲಾ ಪ್ರಕ್ರಿಯೆಯನ್ನು ಲೆಕ್ಕ ಪರಿಶೋಧನೆ ಎಂದು ಕರೆಯಬಹುದು. ಲೆಕ್ಕ ಪರಿಶೋಧನೆ ನಡೆಸುವಾಗ ಸಂಸ್ಥೆಯಲ್ಲಿ ನಡೆದಿರುವ ಎಲ್ಲಾ ವ್ಯವಹಾರಗಳನ್ನು ಪರಾಂಬರಿಸಿ, ಅವ್ಯವಹಾರಗಳನ್ನು ಕಂಡು ಹಿಡಿದು, ಸಂಸ್ಥೆಯ ನೈಜ ಆರ್ಥಿಕ ಪರಿಸ್ಥಿತಿ ಮತ್ತು ನಿಖರವಾದ ಲಾಭ-ನಷ್ಟ ಕಂಡು ಹಿಡಿಯುವಲ್ಲಿ ಲೆಕ್ಕ ಪರಿಶೋಧಕರ ಜ್ಞಾನ, ಜಾಣ್ಮೆ